ಸಾರ್‌‌ ಎಣ್ಣೆ ಬೇಕು ಎಣ್ಣೆ..! ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ. ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ […]

ಸಾರ್‌‌ ಎಣ್ಣೆ ಬೇಕು ಎಣ್ಣೆ..!  ಹಂಡ್ರೆಡ್​ಗೆ ಕುಡುಕರು ಮಾಡಿದ ಕರೆಗಳೆಷ್ಟು ಗೊತ್ತಾ?
ಸಾಧು ಶ್ರೀನಾಥ್​

Updated on: Apr 18, 2020 | 2:12 PM

ಬೆಂಗಳೂರು: ಕ್ರೂರಿ ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಡೆಡ್ಲಿ ವೈರಸ್​ ಕಟ್ಟಿ ಹಾಕೋಕೆ ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ. ಇದರಿಂದ ಎಣ್ಣೆ ಇಲ್ಲದೆ ಕುಡುಕರು ಕಂಗಾಲಾಗಿದ್ದಾರೆ. ಎಣ್ಣೆ ಬೇಕು ಸಾರ್‌‌ ಎಣ್ಣೆ ಎಂದು ಮದ್ಯ ಪ್ರಿಯರು ಪೊಲೀಸರ ದುಂಬಾಲು ಬಿದಿದ್ದಾರೆ.

ನಮ್ಮ 100ಗೆ ಕರೆಮಾಡಿ ಸಾರ್ ಎಣ್ಣೆ ಕೊಡಿ ಪ್ಲೀಸ್ ಎಂದು ಕುಡುಕರು ಕೇಳ್ತಿದ್ದಾರೆ. ಎಣ್ಣೆ ಅಲ್ಲದೆ ಊಟ ಕೊಡಿ, ಬಾಳೆಹಣ್ಣು ಕೊಡಿ ಎಂದು ಅನಗತ್ಯವಾಗಿ 100ಗೆ ಕರೆ ಮಾಡಿ ಜನರು ಕೇಳುತ್ತಿದ್ದಾರೆ. ಲಾಕ್​ಡೌನ್​ ಬಳಿಕ ಮಾರ್ಚ್ 24ರಿಂದ ಏಪ್ರಿಲ್ 15ರವೆಗೆ ಬರೋಬ್ಬರಿ 1,03,986 ಕರೆಗಳು ನಮ್ಮ 100ಗೆ ಬಂದಿವೆ. ಅಪರಾಧ ಕೃತ್ಯಗಳ ಕರೆ ಬದಲು ಮದ್ಯದ ಕುರಿತ ಕುಡುಕರ ದೂರುಗಳೇ ಜಾಸ್ತಿಯಾಗಿದೆ.

ಮದ್ಯ ಮಾರಾಟ ಯಾವಾಗ ಪ್ರಾರಂಭವಾಗುತ್ತೆ? ಊಟ ಆಯ್ತು.. ಈಗ ಡ್ರಿಂಕ್ಸ್ ಬೇಕು. ಹೀಗೆ ಅಸಂಬಂಧ ಕರೆ ಮಾಡಿ ಪೊಲೀಸ್ ತುರ್ತು ಸೇವೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಪೊಲೀಸ್ ಕಂಟ್ರೋಲ್ ರೂಂಗೆ 4000 ಕರೆಗಳು ಬರುತ್ತಿವೆ. ಒಟ್ಟು 1.03 ಲಕ್ಷ ಕರೆಗಳ ಪೈಕಿ 22,007 ಕರೆಗಳಿಗೆ ಪೊಲೀಸರು ಸ್ಪಂದಿಸಿದ್ದಾರೆ.

Published On - 1:49 pm, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us