AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drilling ಮೆಷಿನ್ ಕೈಕೊಟ್ಟಿದ್ದಕ್ಕೆ ತಪ್ಪಿತು ಭರ್ಜರಿ ಚಿನ್ನದ ಲೂಟಿ, ಎಲ್ಲಿ?

ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದ್ದಕ್ಕೆ ರಾಬರಿ ಸ್ಕೆಚ್ ತಪ್ಪಿರುವ ಸ್ವಾರಸ್ಯಕರ ಪ್ರಸಂಗ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ನಡೆದಿದೆ. ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಣಪ್ಪುರಂ ಗೋಲ್ಡ್ ಲೋನ್​ ಅಂಗಡಿಯನ್ನ ಲೋಟಿ ಮಾಡಲು ಪ್ಲಾನ್​ ಮಾಡಿದ್ದ ಕಳ್ಳರು ಅದೇ ಬಿಲ್ಡಿಂಗ್ ಮೇಲ್ಭಾಗದ ಮತ್ತೊಂದು ಶಾಪ್​ನಿಂದ ಒಳನುಗ್ಗಲು ಸ್ಕೆಚ್ ಹಾಕಿದ್ದರು. ಅದರಂತೆ, ಮೇಲ್ಭಾಗದ ಅಂಗಡಿಯ ಕಾಂಕ್ರಿಟ್​ ನೆಲವನ್ನ ಕೊರೆಯುವ ಪ್ಲಾನ್​ ಮಾಡಿದ್ದರು. ಅಂತೆಯೇ, ಆಗಸ್ಟ್ 2 ರ ರಾತ್ರಿ ಬೈಕ್​ನಲ್ಲಿ […]

Drilling ಮೆಷಿನ್ ಕೈಕೊಟ್ಟಿದ್ದಕ್ಕೆ ತಪ್ಪಿತು ಭರ್ಜರಿ ಚಿನ್ನದ ಲೂಟಿ, ಎಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 06, 2020 | 3:47 PM

Share

ಬೆಂಗಳೂರು: ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದ್ದಕ್ಕೆ ರಾಬರಿ ಸ್ಕೆಚ್ ತಪ್ಪಿರುವ ಸ್ವಾರಸ್ಯಕರ ಪ್ರಸಂಗ ನಗರದ ದೊಡ್ಡ ಗೊಲ್ಲರಹಟ್ಟಿ ಬಳಿ ನಡೆದಿದೆ. ಮಣಪ್ಪುರಂ ಗೋಲ್ಡ್ ಲೋನ್ ಅಂಗಡಿಯ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.

ಮಣಪ್ಪುರಂ ಗೋಲ್ಡ್ ಲೋನ್​ ಅಂಗಡಿಯನ್ನ ಲೋಟಿ ಮಾಡಲು ಪ್ಲಾನ್​ ಮಾಡಿದ್ದ ಕಳ್ಳರು ಅದೇ ಬಿಲ್ಡಿಂಗ್ ಮೇಲ್ಭಾಗದ ಮತ್ತೊಂದು ಶಾಪ್​ನಿಂದ ಒಳನುಗ್ಗಲು ಸ್ಕೆಚ್ ಹಾಕಿದ್ದರು. ಅದರಂತೆ, ಮೇಲ್ಭಾಗದ ಅಂಗಡಿಯ ಕಾಂಕ್ರಿಟ್​ ನೆಲವನ್ನ ಕೊರೆಯುವ ಪ್ಲಾನ್​ ಮಾಡಿದ್ದರು.

ಅಂತೆಯೇ, ಆಗಸ್ಟ್ 2 ರ ರಾತ್ರಿ ಬೈಕ್​ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಅಂಗಡಿಯ ಸ್ಟ್ರಾಂಗ್ ರೂಮ್​ನ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮೆಷಿನ್​ ಬಳಸಿ ಕೊರೆಯೋಕೆ ಮುಂದಾದರು. ಆದರೆ, ಮೆಷೀನ್​ನ ಬಿಟ್​ ಸಿಲುಕಿಕೊಂಡು ಇದು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಖದೀಮರಿಗೆ ಇದನ್ನ ಬಿಡಿಸಲು ಆಗಲಿಲ್ಲ

ಹಾಗಾಗಿ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದು ಕಂಪ್ಯೂಟರ್ ಶಾಪ್ ಆಗಿದ್ದ ಮೇಲಿನ ಅಂಗಡಿಯಲ್ಲಿದ್ದ ಎರಡು ಸಾವಿರ ರೂಪಾಯಿ ನಗದು, ಸಿಸಿ ಕ್ಯಾಮಾರಾ ಹಾಗೂ ಡಿವಿಆರ್ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗಾಗಿ ಖಾಗಿ ಬಲೆ ಬೀಸಿದೆ.

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು