AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಟ್ಲೆ ತಾಳಲಾರದೆ ಗುರುವನ್ನೇ ಮುಗಿಸಿದ ಶಿಷ್ಯರು!

ಹಾಸನ: ಆತ ರೌಡಿಶೀಟರ್. ಇತ್ತೀಚೆಗೆ ಜೈಲಿಗೆ ಹೋಗಿ ರಿಲೀಸ್ ಕೂಡ ಆಗಿದ್ದ. ಇದೇ ಖುಷಿಯಲ್ಲಿ ತನ್ನ ಶಿಷ್ಯರಿಗೆ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದ. ಆದ್ರೆ, ಅಲ್ಲಿ ರೌಡಿಯೇ ಖತಂ ಆಗಿಬಿಡ್ತಾನೆ. ಈ ಕೇಸ್​ನ ಹಿಂದೆ ಬಿದ್ದ ಖಾಕಿ ಪಾಪಿಗಳ ಜಾಲ ಭೇದಿಸಿದೆ. ವಿಶಾಲವಾದ ಜಾಗ. ಸುತ್ತಲು ರೈತರ ಬೆಳೆ. ನಡುವಲ್ಲಿ ಒಂದು ಮರ. ಆವತ್ತು ಇದೇ ಜಾಗದಲ್ಲಿ ನೆತ್ತರು ಹರಿದಿತ್ತು. ರೌಡಿಶೀಟರ್​ನ ಚಾಪ್ಟರ್ ಕ್ಲೋಸ್ ಆಗಿತ್ತು. ಸ್ಪಾಟ್​ಗೆ ಬಂದ ಖಾಕಿಗೆ ಹೆಜ್ಜೆ ಹಜ್ಜೆಗೂ ಸುಳಿವು ಸಿಕ್ಕಿತ್ತು. ಅದ್ರಲ್ಲು […]

ಕ್ವಾಟ್ಲೆ ತಾಳಲಾರದೆ ಗುರುವನ್ನೇ ಮುಗಿಸಿದ ಶಿಷ್ಯರು!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 03, 2020 | 3:33 PM

Share

ಹಾಸನ: ಆತ ರೌಡಿಶೀಟರ್. ಇತ್ತೀಚೆಗೆ ಜೈಲಿಗೆ ಹೋಗಿ ರಿಲೀಸ್ ಕೂಡ ಆಗಿದ್ದ. ಇದೇ ಖುಷಿಯಲ್ಲಿ ತನ್ನ ಶಿಷ್ಯರಿಗೆ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದ. ಆದ್ರೆ, ಅಲ್ಲಿ ರೌಡಿಯೇ ಖತಂ ಆಗಿಬಿಡ್ತಾನೆ. ಈ ಕೇಸ್​ನ ಹಿಂದೆ ಬಿದ್ದ ಖಾಕಿ ಪಾಪಿಗಳ ಜಾಲ ಭೇದಿಸಿದೆ.

ವಿಶಾಲವಾದ ಜಾಗ. ಸುತ್ತಲು ರೈತರ ಬೆಳೆ. ನಡುವಲ್ಲಿ ಒಂದು ಮರ. ಆವತ್ತು ಇದೇ ಜಾಗದಲ್ಲಿ ನೆತ್ತರು ಹರಿದಿತ್ತು. ರೌಡಿಶೀಟರ್​ನ ಚಾಪ್ಟರ್ ಕ್ಲೋಸ್ ಆಗಿತ್ತು. ಸ್ಪಾಟ್​ಗೆ ಬಂದ ಖಾಕಿಗೆ ಹೆಜ್ಜೆ ಹಜ್ಜೆಗೂ ಸುಳಿವು ಸಿಕ್ಕಿತ್ತು. ಅದ್ರಲ್ಲು ಮುಖ್ಯವಾದದ್ದು ಕೆಲವು ಎಣ್ಣೆ ಬಾಟಲ್ಸ್, ಇನ್ನೊಂದು ಆಟೋ.

ಗುರುವಿನ ಕಥೆ ಮುಗಿಸಲು ಕಾಯುತ್ತಿದ್ರು ಶಿಷ್ಯರು! ಅದು ಕಳೆದ ಡಿಸೆಂಬರ್ 27, ಹಾಸನ ತಾಲೂಕಿನ ಶಾಂತಿಗ್ರಾಮ. ಊರ ಹೊರಗಿನ ಹೊಲ. ಇಲ್ಲಿಗೆ ವಲ್ಲಭಾಯ್ ರಸ್ತೆಯ ನಿವಾಸಿ ರೌಡಿಶೀಟರ್ ಲೋಕೇಶ್ ಆಗಮಿಸಿದ್ದ. ತನ್ನ ಜೊತೆಗೆ ಶಿಷ್ಯರಾದ ಭರತ್, ಆಟೋ ಚಾಲಕ ಲೋಕೇಶ್, ಸುದೀಪ್, ಅರ್ಜುನ್, ಜಯಂತ್​ನನ್ನ ಕರೆದುಕೊಂಡು ಬಂದಿದ್ದ. ಎಲ್ರು ಸೇರಿ ಫುಲ್ ಪಾರ್ಟಿ ಮಾಡಿದ್ರು. ತಮಗೆ ಎಷ್ಟು ಬೇಕೋ ಅಷ್ಟು ಕುಡಿದಿದ್ರು. ಆದ್ರೆ, ಇನ್ನೇನು ಮನೆಗೆ ಹೋಗ್ಬೇಕು ಎನ್ನುವಷ್ಟರಲ್ಲಿ ಎಲ್ರು ಸೇರ್ಕೊಂಡು ಲೋಕೇಶ್​ನ ಮೇಲೆ ಮುಗಿಬಿದ್ದಿದ್ರು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿ ಆಗಿದ್ರು.

ಗುರುವಿನ ಕ್ವಾಟ್ಲೆ ತಾಳಲಾರದೆ ತಿರುಗಿಬಿದ್ದಿದ್ರು ಶಿಷ್ಯರು! ಆಟೋ ಡ್ರೈವರ್ ಆಗಿದ್ದ ಲೋಕೇಶ್ ಪುಡಿ ರೌಡಿಯಂತೆ ಎಗರಾಡ್ತಿದ್ದ. ಆಟೋ ಸ್ಟ್ಯಾಂಡ್​ನಲ್ಲಿ ನಾನ್ ಹೇಳಿದ ಹಾಗೆ ನಡೀಬೇಕು ಅಂತಾ ಕ್ವಾಟ್ಲೆ ಕೊಡ್ತಿದ್ದ. ಅಷ್ಟೇ ಅಲ್ಲ. ಇವನ ಮೇಲೆ 13ಕೇಸ್​ಗಳಿತ್ತು. ಇತ್ತೀಚೆಗೆ ದರೋಡೆ ಪ್ರಕರಣದಲ್ಲಿ ಜೈಲು ಸೇರಿ, 15ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದ. ಈ ವೇಳೆ ಸುಮ್ಮನೆ ಇರೋದು ಬಿಟ್ಟು ಮತ್ತೆ ಕಿರಿಕ್ ಪಾರ್ಟಿಯಂತೆ ಆಡ್ತಿದ್ದ. ಇದ್ರಿಂದ ಶಿಷ್ಯರೇ ಲೋಕೇಶ್​​ನ ಕಥೆ ಮುಗಿಸಲು ಸಿದ್ಧರಾಗಿದ್ರು. ಒಳ್ಳೆ ಸಮಯಕ್ಕಾಗಿ ಕಾದುಕುಳಿತಿದ್ರು. ಈ ನಡುವೆಯೇ ಲೋಕೇಶ್ ಶಿಷ್ಯರಿಗೆ ಪಾರ್ಟಿ ಕೊಡಿಸಲು ಕರೆದಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶಿಷ್ಯರು ಲೋಕೇಶ್​ನ ಜೊತೆ ಎಣ್ಣೆ ಕುಡಿದು, ಕೊನೆಗೆ ಅವನ ಕಥೆಯನ್ನೇ ಮುಗಿಸಿದ್ರು.

Follow Us
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ