AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Supari Killing | 100 ಕೋಟಿ ಮೌಲ್ಯದ ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿಸಿದ ಮಗ, ಸಹೋದರ ಅರೆಸ್ಟ್

100 ಕೋಟಿ ಮೌಲ್ಯದ ಆಸ್ತಿಗಾಗಿ ಮಗನೇ ಅಪ್ಪನ ಹತ್ಯೆಗೆ ಸುಪಾರಿ ನೀಡಿ ಅಪ್ಪನನ್ನ ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಘಟನೆ ನಡೆದಿದ್ದು ಪಾಪಿ ಪುತ್ರನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

Supari Killing | 100 ಕೋಟಿ ಮೌಲ್ಯದ ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿಸಿದ ಮಗ, ಸಹೋದರ ಅರೆಸ್ಟ್
ಆರೋಪಿ ಹರಿಕೃಷ್ಣ, ಆರೋಪಿ ಶಿವರಾಮ್ ಪ್ರಸಾದ್ ಹಾಗೂ ಕೊಲೆಯಾದ ಮಾಧವ್
ಆಯೇಷಾ ಬಾನು
| Updated By: Digi Tech Desk|

Updated on:Feb 16, 2021 | 9:03 AM

Share

ಬೆಂಗಳೂರು: 100 ಕೋಟಿ ಮೌಲ್ಯದ ಆಸ್ತಿಗಾಗಿ ಮಗನೇ ಅಪ್ಪನ ಹತ್ಯೆಗೆ ಸುಪಾರಿ ನೀಡಿ ಅಪ್ಪನನ್ನ ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಘಟನೆ ನಡೆದಿದ್ದು ಪಾಪಿ ಪುತ್ರನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ವರ್ಷದ ಬಳಿಕ ಇಬ್ಬರು ಮಾಸ್ಟರ್‌ಮೈಂಡ್‌ಗಳ ಬಂಧನವಾಗಿದೆ. ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತರು. ಈ ಘಟನೆ ನಡೆದಿದ್ದು 2020ರ ಫೆಬ್ರವರಿ 14ರಂದು. ಬರೊಬ್ಬರಿ ವರ್ಷದ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಂದೆ ಮಾಧವ್ ಹತ್ಯೆಗೆ ಪುತ್ರ ಹರಿಕೃಷ್ಣ ಸುಪಾರಿ ನೀಡಿದ್ದ. ಅದರಂತೆ 2020ರ ಫೆಬ್ರವರಿ 14ರಂದು ಬೆಂಗಳೂರಿನ ಗುಬ್ಬಲಾಳ ರಸ್ತೆಯಲ್ಲಿ ಮಾಧವ್ ಎಂಬುವವರ ಕೊಲೆಯಾಗಿತ್ತು. ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆಸ್ತಿಗಾಗಿ ತಂದೆಯ ಹತ್ಯೆಗೆ ಮಗ ಹರಿಕೃಷ್ಣ 25 ಲಕ್ಷ ಸುಪಾರಿ ನೀಡಿದ್ದ. ಇನ್ನು ಹರಿಕೃಷ್ಣನ ಈ ಕೃತ್ಯಕ್ಕೆ ಆತನ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಕೂಡ ಸಾಥ್ ನೀಡಿದ್ದ. ಇವರಿಬ್ಬರು ಸೇರಿಕೊಂಡು ಮಾಧವ್ ಕೊಲೆ ಮಾಡಿಸಿದ್ದರು. ಹತ್ಯೆ ಬಳಿಕ ಐವರು ಆರೋಪಿಗಳನ್ನ ತಲಘಟ್ಟಪುರ ಪೊಲೀಸರು ಕಳೆದ ವರ್ಷವೇ ಬಂಧಿಸಿದ್ದರು. ರಿಯಾಜ್ ಅಹಮದ್, ಶಾರುಖ್ ಖಾನ್, ಸೈಯ್ಯದ್ ಸಲ್ಮಾನ್, ಆದಿಲ್‌ ಖಾನ್, ಷಹಬಾಜ್ ನಜೀರ್ ಬಂಧಿತ ಆರೋಪಿಗಳು. ಆದ್ರೆ ಕೊಲೆ ಹಿಂದಿದ್ದ ಮಾಸ್ಟರ್‌ಮೈಂಡ್‌ಗಳು ಒಂದು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾರೆ. ಮಾಧವ್ ಸಹೋದರ ಶಿವರಾಮ್ ಪ್ರಸಾದ್ ಮತ್ತು ಪುತ್ರ ಹರಿಕೃಷ್ಣನನ್ನು ಬಂಧಿಸಲಾಗಿದೆ.

ಕೊಲೆಯಾದ ಮಾಧವ್ ಗಣಿಗಾರಿಕಾ ಉದ್ಯಮಿಯಾಗಿದ್ದ. 100 ಕೋಟಿ ಬೆಲೆ ಬಾಳುವ ಬಳ್ಳಾರಿ ಸ್ಟೀಲ್ & ಅಲಾಯ್ ಲಿಮಿಟೆಡ್ ಕಂಪನಿಗಳಿಗೆ ಮಾಲೀಕನಾಗಿದ್ದ. ಮೈನಿಂಗ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದ. ಆಸ್ತಿ ಮಾರಾಟ ಮಾಡುವಂತೆ ಮಾಧವ್​ಗೆ ಮಗ ಹಾಗೂ ಸಹೋದರ ಸೂಚಿಸಿದ್ದರಂತೆ. ಸಲಹೆಯನ್ನ ತಳ್ಳಿ ಹಾಕಿದಾಗ ಮಾಧವ್ ಹತ್ಯೆಗೆ ಆರೋಪಿಗಳು ನಿರಂತರ ಪ್ರಯತ್ನ ನಡೆಸಿದ್ದು ಸುಪಾರಿ ಹಂತಕರ ನೆರವಿನಿಂದ ಮಾಧವ್ ಕೊಲೆ ಮಾಡಿಸಿದ್ದರು.

ಇದನ್ನೂ ಓದಿ: ಆಸ್ತಿಗಾಗಿ.. ಅಪ್ಪನ ಸಾವಿಗೆ ಕಾರಣನಾದ ಅಣ್ಣನನ್ನು ಕತ್ತು ಹಿಸುಕಿ ಕೊಲೆ ಮಾಡಿದ ತಮ್ಮ

Published On - 7:58 am, Tue, 16 February 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್