AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ, ಎರಡು ಕುಟುಂಬಗಳು ಕಣ್ಣೀರು ಕಣ್ಣೀರು

ಸಂಜಯ ಸಂಜೆಯಾದ್ರೇ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಇದರಿಂದ ಆಕ್ರೋಶಗೊಂಡು ಈ ರೀತಿ ಕುಡಿಯುವುದು ಸರಿಯಲ್ಲ, ನೀನು ಮದುವೆ ಮಾಡಿಕೊಂಡು ನಿನ್ನ ಜೀವನ ನಡೆಸು ಅಂತಾ ದೊಡ್ಡಮ್ಮ ಮಂಗಲಾ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಜನವರಿ 8ರಂದು ರಾತ್ರಿ...

ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ, ಎರಡು ಕುಟುಂಬಗಳು ಕಣ್ಣೀರು ಕಣ್ಣೀರು
ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದುಬಿಟ್ಟ ಮಗ
Follow us
Sahadev Mane
| Updated By: ಸಾಧು ಶ್ರೀನಾಥ್​

Updated on: Jan 13, 2024 | 2:44 PM

ಆತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಡ್ರೈವರ್ ಕೆಲಸ ಮಾಡಿಕೊಂಡಿದ್ದವನ ತಾಯಿ ತೀರಿ ಹೋಗಿ ದೊಡ್ಡಮ್ಮನ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಆತನಿಗೆ ಆಗಾಗ ದೊಡ್ಡಮ್ಮ ಬೈದು ಬುದ್ದಿವಾದ ಹೇಳುತ್ತಿದ್ದಳು. ಮೊನ್ನೆ ಅದೊಂದು ಸಣ್ಣ ವಿಚಾರಕ್ಕೆ ಸಾಕುತ್ತಿದ್ದ ದೊಡ್ಡಮ್ಮನ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಕೊಲೆ ಮಾಡಿ ಪರಾರಿಯಾಗಿದ್ದವ ಕಡೆಗೂ ಅಂದರ್ ಆಗಿದ್ದು, ಅಷ್ಟಕ್ಕೂ ಅದ್ಯಾವ ಕಾರಣಕ್ಕೆ ದೊಡ್ಡಮ್ಮನನ್ನ ಕೊಂದ ಅಂತೀರಾ ಈ ಸ್ಟೋರಿ ನೋಡಿ.

ಫೋಟೊದಲ್ಲಿರುವ ಯುವಕನ ಹೆಸರು ಸಂಜಯ್ ಸಾವಡ್ಕರ್ ಅಂತಾ, 27 ವರ್ಷದ ಈತ ತನ್ನ ದೊಡ್ಡಮ್ಮನನ್ನೇ ಕೊಂದು ಇದೀಗ ಜೈಲು ಸೇರಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ (Athani, Belagavi) ಸಂಜಯ್, ಟಿಪ್ಪರ್ ಡ್ರೈವರ್ ಆಗಿದ್ದ. ಈತ ಇನ್ನೂ ಮದುವೆ ಆಗಿಲ್ಲ. ಮೂರು ತಿಂಗಳ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ, ಈತನ ತಂದೆಯೂ ಮಗಳ ಮನೆ ಸೇರಿಕೊಂಡಿದ್ದ. ಇನ್ನು ಒಬ್ಬನೇ ಇದ್ದ ಈತ ತನ್ನ ದೊಡ್ಡಮ್ಮ ಮಂಗಲಾ ಸಾವಡ್ಕರ್ ಮನೆಯಲ್ಲೇ ಊಟ ಮಾಡಲು ಹೇಳಿದ್ದರು.

ಅಲ್ಲಿಯೇ ಇದ್ದ ಸಂಜಯ್ ಸಂಜೆಯಾದ್ರೇ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಇದರಿಂದ ಆಕ್ರೋಶಗೊಂಡು ಈ ರೀತಿ ಕುಡಿಯುವುದು ಸರಿಯಲ್ಲ, ನೀನು ಮದುವೆ ಮಾಡಿಕೊಂಡು ನಿನ್ನ ಜೀವನ ನಡೆಸು ಅಂತಾ ಮಂಗಲಾ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಜನವರಿ 8ರಂದು ಒಳ್ಳೆಯ ದಿನ ಅಂತಾ ಮಂಗಲಾ ಮಕ್ಕಳು ಸೇರಿಕೊಂಡು ಹೊಸದೊಂದು ಸ್ಕೂಟಿ ಖರೀದಿಸಿಕೊಂಡು ಬಂದಿದ್ದಾರೆ.

ಸಂಜೆ ಪೂಜೆ ಮಾಡಿಕೊಂಡು ಮನೆ ಮುಂದೆ ಸ್ಕೂಟಿ ನಿಲ್ಲಿಸಿದ್ದಾರೆ. ಈತ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಸ್ಕೂಟಿ ನೋಡಿ ಹದಿನೈದು ವರ್ಷದ ತನ್ನ ತಂಗಿ ಬಳಿ ಕೀ ಕೊಡುವಂತೆ ಕೇಳಿದ್ದಾನೆ. ಆಗ ಕೊಡಲ್ಲ ಅಂತಾ ತನ್ನ ತಾಯಿ ಮಂಗಲಾ ಕೈಯಲ್ಲಿ ಕೀ ನೀಡಿದ್ದಾಳೆ. ಈ ವೇಳೆ ಕೀ ಕೊಡಲ್ಲ, ನೀನು ಕುಡಿದು ಬಂದಿದೀಯಾ ಅಂತಾ ಮಂಗಲಾ ಹೇಳಿದ್ದಾರೆ. ಅದಾಗಿಯೂ ಕೀ ಬೇಕು ಅಂತ ಹಠ ಹಿಡಿದಾಗ ಬೈಯ್ದು ಹೊರ ಕಳ್ಸಿದ್ದಾರೆ.

ರಾತ್ರಿ ಊಟ ಮಾಡಿದ ಬಳಿಕ ಮನೆಯಿಂದ ಹೊರ ಬಂದು ನಿಂತಿದ್ದ ಮಂಗಲಾಗೆ ಹಿಂಬದಿಯಿಂದ ರಾಡ್ ನಿಂದ ತಲೆ ಭಾಗಕ್ಕೆ ಹೊಡೆದೇ ಬಿಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಗಲಾಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ರಾಡ್ ನಿಂದ ಹೊಡೆದ ಸಂಜಯ್ ಕೂಡಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಅಥಣಿ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಕೂಡಲೇ ಶವವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಿ ಜ. 9ರಂದು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಸಂಜಯ್ ಗೆ ಹಿಡಿಶಾಪ ಹಾಕ್ತಾನೇ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Also Read: ಪ್ರವಾಸೀ ತಾಣ ಹೊಸಪೇಟೆಯಲ್ಲಿ ವೇಶ್ಯಾವಾಟಿಕೆ, ಲಾಡ್ಜ್ ಸಿಬ್ಬಂದಿಯ ಏರ್ಪಾಟು ನೋಡಿ ಪೊಲೀಸರಿಗೇ ಶಾಕ್!

ಇತ್ತ ತಪ್ಪಿಸಿಕೊಂಡು ಓಡಿ ಹೋಗಿದ್ದ ಆರೋಪಿ ಸಂಜಯ್ ನನ್ನು ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳ್ಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ ಪಿ ಡಾ. ಭೀಮಾಶಂಕರ್ ಗುಳೇದ್ ಕೊಲೆ ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದಾಗ ಸ್ಕೂಟಿ ಕೀ ವಿಚಾರಕ್ಕೆ ಗಲಾಟೆ ಆಗಿ ಕೊಲೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದ್ದು ಈಗಾಗಲೇ ಆರೋಪಿಯನ್ನ ಬಂಧಿಸಿ ಮುಂದಿನ ತನಿಖೆ ನಡೆದಿದೆ ಎಂದಿದ್ದಾರೆ.

ಒಟ್ಟಿನಲ್ಲಿ ತಾಯಿಯಿಲ್ಲದ ಮಗೂ ಅಂತಾ ಮಗನಂತೆ ನೋಡಿಕೊಳ್ತಿದ್ದ ದೊಡ್ಡಮ್ಮನನ್ನೇ ಪಾಪಿ ಕೊಂದಿದ್ದಾನೆ. ಸಣ್ಣ ವಿಚಾರಕ್ಕೆ ಕುಡಿದ ನಶೆಯಲ್ಲಿ ಹೊಡೆದು ಸಾಯಿಸಿ ಜೈಲು ಸೇರಿದ್ದಾನೆ. ಇದ್ದೊಬ್ಬ ಮಗನ ಕಿರಿಕಿರಿ ತಾಳಲಾರದೇ ಇರೋ ಮನೆ ಬಿಟ್ಟು ತಂದೆ ಮಗಳ ಮನೆ ಸೇರಿಕೊಂಡಿದಾನೆ. ಒಟ್ಟಿನಲ್ಲಿ ಒಬ್ಬನ ಕ್ರೌರ್ಯಕ್ಕೆ ಇದೀಗ ಎರಡು ಕುಟುಂಬಗಳು ಕಣ್ಣೀರಿಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ