ಆರೋಪಿಯನ್ನ ಬಂಧಿಸಲು ಹೋಗಿದ್ದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿತ; ಮುಂದೆನಾಯ್ತು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 3:18 PM

ಸದಾಶಿವನಗರ(Sadashivanagar)ಪೊಲೀಸ್ ಹೆಡ್​ಕಾನ್ಸ್ ಟೇಬಲ್(Head Constable)ಸೈಯದ್ ಸಮೀವುಲ್ಲಾ ಅವರು ಸಿಸಿಬಿಯ ಓ.ಸಿ.ಡಬ್ಲ್ಯೂ ವಿಭಾಗದ ಸಿಬ್ಬಂದಿ ಸೂಚನೆ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಖಚಿತ ಮಾಹಿತಿ ಮೇರೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಸನ್ ಖಾನ್, ಹೆಚ್.ಕೆ.ಪಿ ದರ್ಗಾದ ಸರ್ಕಲ್​ನ ಗೂಡ್ಸ್‌ ಆಟೋಸ್ಟ್ಯಾಂಡ್​ನ ಬಳಿ ನಿಂತಿದ್ದ. ಈ ವೇಳೆ ಹಿಡಿಯಲು ಹೋದ ಸೈಯದ್ ಸಮೀವುಲ್ಲಾಗೆ ಸಾರ್ವಜನಿಕರ ಎದುರೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.

ಆರೋಪಿಯನ್ನ ಬಂಧಿಸಲು ಹೋಗಿದ್ದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿತ; ಮುಂದೆನಾಯ್ತು?
ಚಾಕು ಇರಿದ ಆರೋಪಿ
Follow us on

ಬೆಂಗಳೂರು, ಅ.18: ಆರೋಪಿ ಬಂಧಿಸಲು ಹೋಗಿದ್ದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿದ ಘಟನೆ ಬೆಂಗಳೂರಿನ ಹೆಚ್​​​​ಕೆಪಿ ದರ್ಗಾದ ಸರ್ಕಲ್ ಬಳಿ ನಡೆದಿದೆ. ಸದಾಶಿವನಗರ(Sadashivanagar)ಪೊಲೀಸ್ ಹೆಡ್​ಕಾನ್ಸ್ ಟೇಬಲ್(Head Constable)ಸೈಯದ್ ಸಮೀವುಲ್ಲಾ ಅವರು ಸಿಸಿಬಿಯ ಓ.ಸಿ.ಡಬ್ಲ್ಯೂ ವಿಭಾಗದ ಸಿಬ್ಬಂದಿ ಸೂಚನೆ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಖಚಿತ ಮಾಹಿತಿ ಮೇರೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಸನ್ ಖಾನ್, ಹೆಚ್.ಕೆ.ಪಿ ದರ್ಗಾದ ಸರ್ಕಲ್​ನ ಗೂಡ್ಸ್‌ ಆಟೋಸ್ಟ್ಯಾಂಡ್​ನ ಬಳಿ ನಿಂತಿದ್ದ. ಈ ವೇಳೆ ಹಿಡಿಯಲು ಹೋದ ಸೈಯದ್ ಸಮೀವುಲ್ಲಾಗೆ ಸಾರ್ವಜನಿಕರ ಎದುರೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರ ನೆರವಿನಿಂದ ಬಚಾವ್ ಆದ ಪೊಲೀಸ್ ಹೆಡ್ ಕಾನ್ಸ್​ಟೇಬಲ್ ಸೈಯದ್ ಸಮಿವುಲ್ಲಾ ಅವರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಲ್ಲಿನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

ಹಾಸನ: ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಬರ್ಬರ ಹತ್ಯೆ ಮಾಡಲಾಗಿದೆ. ಹಾಸನ ನಗರದ ಕಾಟೀಹಳ್ಳಿ‌ ಬಡಾವಣೆಯಲ್ಲಿ‌ ಬೆತ್ತಲೆ ಸ್ಥಿತಿಯಲ್ಲಿ ಕಾಂತರಾಜು(45) ಎಂಬುವರ ಮೃತದೇಹ ಪತ್ತೆ ಆಗಿದೆ. ರಾತ್ರಿ ಸ್ನೇಹಿತರೊಂದಿಗೆ ಮದ್ಯಸೇವಿಸಿ ಗಲಾಟೆ ಮಾಡಿಕೊಂಡು, ಬಳಿಕ ಡಿದ ಅಮಲಿನಲ್ಲಿ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ. ಹತ್ಯೆಯಾದ ಕಾಂತರಾಜು ಅರಕಲಗೂಡು ಪಟ್ಟಣದ ನಿವಾಸಿಯಾಗಿದ್ದು, ಕಾಟೀಹಳ್ಳಿ‌ ಬಡಾವಣೆ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಘಟನೆ ಕುರಿತು ಕಾಟೀಹಳ್ಳಿ‌ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:Chikkaballapur: ಹೆಂಡತಿ ಮಕ್ಕಳಿದ್ದರೂ ಪಕ್ಕದ ಮನೆಯಾಕೆ ಜೊತೆ ಮದುವೆಗೆ ಪ್ಲಾನ್, ಪ್ರಶ್ನಿಸಿದ ಯುವತಿಯ ತಾಯಿಗೆ ಚಾಕು ಇರಿತ

 

ಅಪ್ಡೇಟ್​ ಆಗುತ್ತಿದೆ….