AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು. ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು […]

ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?
ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Sep 07, 2020 | 9:53 AM

Share

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು. ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು ನಿಜವೇ, ಆದರೆ ಅವಳಲ್ಲಿ ಈ ಪಾಟಿ ಧೈರ್ಯವೇ ಅಂತ ಜನ ಮಾತಾಡಿಕೊಳ್ಳುತ್ತಿರುವುದು ಉಪ ಮುಖ್ಯಮಂತ್ರಿಗಳಿಗೆ ಗೊತ್ತಿದ್ದಂತಿಲ್ಲ.

ಸಿಸಿಬಿ ಅಧಿಕಾರಿಗಳಿಂದ ರಾಗಿಣಿ ವಿಚಾರಣೆ ಶುರುವಾಗುವ ಮೊದಲೇ, ಆಕೆ ಹೆಚ್ಚು ಪ್ರಶ್ನೆಗಳನ್ನು ಕೇಳಬೇಡಿ, ಬೇಗ ವಾಪಸ್ಸು ಕಳಸಿಬಿಡಿ ಅಂತ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ತಾರೆಯರು ಫೋನ್ ಮಾಡಿದರಂತೆ. ಆಕೆಯ ರೀಚ್ ಬಗ್ಗೆ ನಿಜಕ್ಕೂ ದಿಗ್ಭ್ರಮೆ ಉಂಟಾಗುತ್ತದೆ. ನೀವ್ಯಾಕೆ ಅವಳ ಪರವಾಗಿ ಮಾತಾಡುತ್ತಿರುವಿರಿ ಅಂತ ಪೊಲೀಸರು ಪ್ರಶ್ನಿದರೋ ಇಲ್ಲವೋ ಅಂತ ಜನಕ್ಕಿನ್ನೂ ಗೊತ್ತಾಗಿಲ್ಲ. 

ಯಾಱರು ಫೋನ್ ಮಾಡಿರಬಹುದೆಂಬ ಒಂದು ಚಿಕ್ಕ ಸುಳಿವೇನಾದರೂ ಕಾರಜೋಳ ಅವರಲ್ಲಿರಬಹುದೆ? ಒಂದು ಮಾತ್ರ ನಿಜ, ಈ ರಾಗಿಣಿ ಸಾಮಾನ್ಯವಾದವಳಲ್ಲ. ಆಕೆಯ ರಕ್ಷಣೆಗೆ ದೊಡ್ಡ ಹಿಂಡೇ ಟೊಂಕಕಟ್ಟಿ ನಿಂತಿರುವಂತಿದೆ. ಆಕೆ ಬಾಯಿ ಬಿಟ್ಟರೆ, ರಾಜಕಾರಣಿಗಳು ಸೇರಿದಂತೆ ಹಲವಾರು ಸೆಲಿಬ್ರಿಟಿಗಳ ಜಾತಕ ಬಯಲಾಗುವುದು ನಿಶ್ಚಿತ.

ಆದರೆ, ಪೊಲೀಸರಿಗೆ ಬೇಕಾಗಿರುವುದೇನೆಂದರೆ ಅವರ ತನಿಖೆಯಲ್ಲಿ ತೊಡರುಗಾಲು ಹಾಕದೆ, ಮುಕ್ತವಾಗಿ ಮತ್ತು ನಿರ್ಭೀತಿಯಿಂದ ತನಿಖೆ ಮಾಡಲು ಬಿಡೋದು. ಅದು ಸಾಧ್ಯವಿದೆಯೇ ಎಂಬ ಶಂಕೆ ಜನರಲ್ಲಿ ಅದಾಗಲೇ ಮೂಡಿದೆ.

Published On - 7:47 pm, Sat, 5 September 20

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ