AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು. ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು […]

ಇಷ್ಟಕ್ಕೂ ರಾಗಿಣಿ ಬಯಲು ಮಾಡುವಳೇ ಸೆಲಿಬ್ರಿಟಿಗಳ ಜಾತಕ?
ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Sep 07, 2020 | 9:53 AM

Share

ಸ್ಯಾಂಡಲ್​ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಯೊಂದನ್ನು ನೀಡಿ ಕೇಸ್​ನಲ್ಲಿ ಭಾಗಿಯಾಗಿರುವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಂಧಿಸಲಾಗುವುದು ಅಂತ ಹೇಳಿದರು. ಮೇಲ್ನೋಟಕ್ಕೆ ಕಾರಜೋಳ ಅವರ ಹೇಳಿಕೆ ಬರೀ ಜೊಳ್ಳು ಎನಿಸುತ್ತಿದೆ. ರಾಗಿಣಿ ದ್ವಿವೇದಿಯಂಥ ಒಬ್ಬ ಯಕಶ್ಚಿತ್ ನಟಿ ಪೊಲೀಸರು ವಿಚಾರಣೆಗೆ ಕರೆದರೆ ಇವತ್ತಾಗಲ್ಲ, ಒಂದೆರಡು ದಿನಗಳ ನಂತರ ಬರ್ತೀನಿ ಅಂತಾಳೆ. ಭಂಡರಿಗೆ ಧೈರ್ಯ ಜಾಸ್ತಿ ಅನ್ನೋದು ನಿಜವೇ, ಆದರೆ ಅವಳಲ್ಲಿ ಈ ಪಾಟಿ ಧೈರ್ಯವೇ ಅಂತ ಜನ ಮಾತಾಡಿಕೊಳ್ಳುತ್ತಿರುವುದು ಉಪ ಮುಖ್ಯಮಂತ್ರಿಗಳಿಗೆ ಗೊತ್ತಿದ್ದಂತಿಲ್ಲ.

ಸಿಸಿಬಿ ಅಧಿಕಾರಿಗಳಿಂದ ರಾಗಿಣಿ ವಿಚಾರಣೆ ಶುರುವಾಗುವ ಮೊದಲೇ, ಆಕೆ ಹೆಚ್ಚು ಪ್ರಶ್ನೆಗಳನ್ನು ಕೇಳಬೇಡಿ, ಬೇಗ ವಾಪಸ್ಸು ಕಳಸಿಬಿಡಿ ಅಂತ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ತಾರೆಯರು ಫೋನ್ ಮಾಡಿದರಂತೆ. ಆಕೆಯ ರೀಚ್ ಬಗ್ಗೆ ನಿಜಕ್ಕೂ ದಿಗ್ಭ್ರಮೆ ಉಂಟಾಗುತ್ತದೆ. ನೀವ್ಯಾಕೆ ಅವಳ ಪರವಾಗಿ ಮಾತಾಡುತ್ತಿರುವಿರಿ ಅಂತ ಪೊಲೀಸರು ಪ್ರಶ್ನಿದರೋ ಇಲ್ಲವೋ ಅಂತ ಜನಕ್ಕಿನ್ನೂ ಗೊತ್ತಾಗಿಲ್ಲ. 

ಯಾಱರು ಫೋನ್ ಮಾಡಿರಬಹುದೆಂಬ ಒಂದು ಚಿಕ್ಕ ಸುಳಿವೇನಾದರೂ ಕಾರಜೋಳ ಅವರಲ್ಲಿರಬಹುದೆ? ಒಂದು ಮಾತ್ರ ನಿಜ, ಈ ರಾಗಿಣಿ ಸಾಮಾನ್ಯವಾದವಳಲ್ಲ. ಆಕೆಯ ರಕ್ಷಣೆಗೆ ದೊಡ್ಡ ಹಿಂಡೇ ಟೊಂಕಕಟ್ಟಿ ನಿಂತಿರುವಂತಿದೆ. ಆಕೆ ಬಾಯಿ ಬಿಟ್ಟರೆ, ರಾಜಕಾರಣಿಗಳು ಸೇರಿದಂತೆ ಹಲವಾರು ಸೆಲಿಬ್ರಿಟಿಗಳ ಜಾತಕ ಬಯಲಾಗುವುದು ನಿಶ್ಚಿತ.

ಆದರೆ, ಪೊಲೀಸರಿಗೆ ಬೇಕಾಗಿರುವುದೇನೆಂದರೆ ಅವರ ತನಿಖೆಯಲ್ಲಿ ತೊಡರುಗಾಲು ಹಾಕದೆ, ಮುಕ್ತವಾಗಿ ಮತ್ತು ನಿರ್ಭೀತಿಯಿಂದ ತನಿಖೆ ಮಾಡಲು ಬಿಡೋದು. ಅದು ಸಾಧ್ಯವಿದೆಯೇ ಎಂಬ ಶಂಕೆ ಜನರಲ್ಲಿ ಅದಾಗಲೇ ಮೂಡಿದೆ.

Published On - 7:47 pm, Sat, 5 September 20

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!