AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gun Shot: ಚಲಿಸುವ ಕಾರಿನಲ್ಲಿ ಸ್ವಂತ ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ

US State of Florida: ಅಮೆರಿಕದ ಫ್ಲೋರಿಡಾದ ನಾರ್ತ್ ಪೋರ್ಟ್​ನಲ್ಲಿ ಕಾರು ಚಲಾಯಿಸುತ್ತಿದ್ದ 57 ವರ್ಷದ ಮಹಿಳೆ ಮೇಲೆ ಆಕೆಯ 6 ವರ್ಷದ ಮೊಮ್ಮಗಳು ಹಿಂಬದಿ ಸೀಟಿನಿಂದ ಗುಂಡು ಹೊಡೆದ ಘಟನೆ ಫೆ. 16ರಂದು ನಡೆದಿದೆ.

Gun Shot: ಚಲಿಸುವ ಕಾರಿನಲ್ಲಿ ಸ್ವಂತ ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ
ಚಲಿಸುವ ಕಾರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2023 | 3:21 PM

Share

ಫ್ಲೋರಿಡಾ: ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಶೂಟೌಟ್ ಘಟನೆಗಳು (US Shootout) ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಇದೀಗ ಫ್ಲೋರಿಡಾ ರಾಜ್ಯದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಅಜ್ಜಿಯ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಮುಕ್ತವಾಗಿ ಗನ್ ಲೈಸೆನ್ಸ್ (Gun License) ನೀಡುವ ಬಗ್ಗೆ ಸಾಕಷ್ಟು ಚರ್ಚೆ, ವಾದ ಪ್ರತಿವಾದಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಮೊಮ್ಮಗಳಿಂದ ಗುಂಡು ಬಡಿದ ಮಹಿಳೆಗೆ ಪ್ರಾಣಾಪಾಯವಾಗಿಲ್ಲ. 57 ವರ್ಷದ ಈಕೆಗೆ ಬೆನ್ನಿನ ಕೆಳಭಾಗದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫ್ಲೋರಿಡಾದ ನಾರ್ತ್ ಪೋರ್ಟ್ ನಗರದಲ್ಲಿ ಫೆಬ್ರುವರಿ 16ರಂದು ಈ ದುರಂತ ಸಂಭವಿಸಿದೆ. 6 ವರ್ಷದ ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಕೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು ಎಂಬ ವಿಚಾರ ಸದ್ಯಕ್ಕೆ ಗೊತ್ತಾಗಿದೆ.

ದುರಂತ ನಡೆದಾಗ 57 ವರ್ಷದ ಮಹಿಳೆ ಕಾರು ಚಲಾಯಿಸುತ್ತಿದ್ದರು. ಹಿಂಬದಿ ಸೀಟಿನಲ್ಲಿ 6 ವರ್ಷದ ಆಕೆಯ ಮೊಮ್ಮಗಳಿದ್ದಳು. ಕಾರಿನ ಬ್ಯಾಕ್​ಸೀಟಿನಲ್ಲಿದ್ದ ಪಿಸ್ತೂಲನ್ನು ಬಾಲಕಿ ಕೈಯಲ್ಲಿಡಿದುಕೊಂಡಿದ್ದಾಳೆ. ಗನ್ ಲೋಡ್ ಆಗಿತ್ತೋ ಇಲ್ಲವೋ ತಿಳಿದಿಲ್ಲ, ಟ್ರಿಗರ್ ಒತ್ತಿದಾಗ ಡ್ರೈವರ್ ಸೀಟಿನ ಹಿಂಬದಿಯಿಂದ ಗುಂಡು ಸೀಳಿಹೋಗಿ ವೃದ್ಧೆಯ ಬೆನ್ನ ಕೆಳಭಾಗಕ್ಕೆ ಹೊಕ್ಕಿದೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದಕ್ಕೆ 17ರ ಬಾಲಕಿ ಮೇಲೆ ಆ್ಯಸಿಡ್ ದಾಳಿ, ಮಿಂಟೋದಲ್ಲಿ ಬಾಲಕಿಯ ಆರೋಗ್ಯ ವಿಚಾರಿಸಿದ ಸಚಿವ ಹಾಲಪ್ಪ ಆಚಾರ್

ತೀವ್ರವಾಗಿ ಗಾಯಗೊಂಡ ಈ ಮಹಿಳೆ ಹಾಗೂ ಹೀಗೂ ಕಾರನ್ನು ಮನೆಯವರೆಗೆ ಚಲಾಯಿಸಿಕೊಂಡು ಹೋಗಿ ಎಮರ್ಜನ್ಸಿ ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿದ್ದಾರೆ. ಆ ಬಳಿಕ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ ಕೈಗೆ ಪಿಸ್ತೂಲು, ಗನ್​ನಂತಹ ಶಸ್ತ್ರಗಳು ಸಿಕ್ಕದಂತೆ ಎಚ್ಚರ ವಹಿಸಬೇಕಾದ್ದು ಪೋಷಕರ ಕರ್ತವ್ಯ. ಈ ಘಟನೆ ಎಲ್ಲರಿಗೂ ಎಚ್ಚರಿಕೆ ಕರೆಗಂಟೆ ಎಂದು ನಾರ್ತ್ ಪೋರ್ಟ್ ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ಹೇಳಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು