AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Career Options After KCET: ಕೆಸಿಇಟಿ ಫಲಿತಾಂಶ ಪ್ರಕಟ; ಮುಂದೆ ಯಾವ ಕೋರ್ಸ್​​​​​ ಆಯ್ಕೆ ಮಾಡಬೇಕು?

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025 ರ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಫಾರ್ಮಸಿ ಮುಂತಾದ ಹಲವು ವೃತ್ತಿ ಆಯ್ಕೆಗಳು ಲಭ್ಯವಿದೆ. ಈ ಲೇಖನದಲ್ಲಿ ವಿವಿಧ ಕೋರ್ಸ್‌ಗಳು, ಪ್ರಮುಖ ಕಾಲೇಜುಗಳು ಮತ್ತು ಭವಿಷ್ಯದ ವೃತ್ತಿಪರ ಆಯ್ಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ಆಸಕ್ತಿ ಮತ್ತು ರ‍್ಯಾಂಕ್ ಆಧರಿಸಿ ಸೂಕ್ತವಾದ ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ.

Career Options After KCET: ಕೆಸಿಇಟಿ ಫಲಿತಾಂಶ ಪ್ರಕಟ; ಮುಂದೆ ಯಾವ ಕೋರ್ಸ್​​​​​ ಆಯ್ಕೆ ಮಾಡಬೇಕು?
Career Options After KCET
ಅಕ್ಷತಾ ವರ್ಕಾಡಿ
|

Updated on:May 24, 2025 | 12:58 PM

Share

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025 ರ ಫಲಿತಾಂಶವು ಪ್ರಕಟಗೊಂಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಂದು ಮಧ್ಯಾಹ್ನ 2:00 ಗಂಟೆಗೆ  KEA ಅಧಿಕೃತ ವೆಬ್‌ಸೈಟ್ cetonline.karnataka.gov.in ಮೂಲಕ ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಈ ಪರೀಕ್ಷೆಯು ಕರ್ನಾಟಕದಾದ್ಯಂತ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕೆ ನಿರ್ಣಾಯಕವಾಗಿದೆ. ಆದ್ದರಿಂದ ಕೆಸಿಇಟಿ (KCET) ಪರೀಕ್ಷೆಯ ನಂತರ ನಿಮಗೆ ಲಭ್ಯವಿರುವ ವೃತ್ತಿಪರ ಆಯ್ಕೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

1. ಎಂಜಿನಿಯರಿಂಗ್ (B.E/B.Tech):

PCM (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) ತೆಗೆದುಕೊಂಡ ವಿದ್ಯಾರ್ಥಿಗಳಿಗೆ:

  • ಕಂಪ್ಯೂಟರ್ ಸೈನ್ಸ್
  • ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್
  • ಮೆಕ್ಯಾನಿಕಲ್
  • ಸಿವಿಲ್
  • ಎಲೆಕ್ಟ್ರಿಕಲ್ ಆ್ಯಂಡ್​​ ಎಲೆಕ್ಟ್ರಾನಿಕ್ಸ್
  • ಇನ್‌ಫರ್ಮೇಶನ್ ಸೈನ್ಸ್
  • ಎಐ ಆ್ಯಂಡ್ ಎಂಎಲ್ (Artificial Intelligence and Machine Learning)

ಪ್ರಮುಖ ಕಾಲೇಜುಗಳು:

  • ಆರ್ವಿ ಇಂಜಿನಿಯರಿಂಗ್ ಕಾಲೇಜು
  • ಬಿಎಂಎಸ್ ಇಂಜಿನಿಯರಿಂಗ್
  • ಎಂಎಸ್‌ಆರ್‌ಐಟಿ
  • ಪಿಇಎಸ್ ವಿಶ್ವವಿದ್ಯಾಲಯ
  • ಎಸ್‌ಜೆಸಿಇ, ಎನ್‌ಐಇ (ಮೈಸೂರು)

2. ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳು:

PCB (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ವಿದ್ಯಾರ್ಥಿಗಳಿಗೆ KCET ಮೂಲಕ ಲಭ್ಯವಿರುವ ಕೋರ್ಸ್‌ಗಳು :

  • BAMS (ಆಯುರ್ವೇದ)
  • BHMS (ಹೋಮಿಯೋಪಥಿ)
  • BUMS (ಯುನಾನಿ)
  • BNYS (ನ್ಯಾಚುರೋಪಥಿ)
  • B.Sc. ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ
  • B.VSc. (ಪಶು ವೈದ್ಯಕೀಯ)
  • B.Pharm / D.Pharm (ಫಾರ್ಮಸಿ)

ಇದನ್ನೂ ಓದಿ: ನೀಟ್ ಇಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ಪಡೆಯುವುದು ಹೇಗೆ?

3. ಕೃಷಿ ಮತ್ತು ಸಂಬಂಧಿತ ಕೋರ್ಸ್‌ಗಳು:

  • B.Sc. ಕೃಷಿ
  • B.Sc. ಸೆರಿಕಲ್ಚರ್ (ರೇಷ್ಮೆ ಕೃಷಿ)
  • B.Sc. ತೋಟಗಾರಿಕೆ
  • B.Sc. ಅರಣ್ಯಶಾಸ್ತ್ರ
  • B.Tech. ಆಹಾರ ತಂತ್ರಜ್ಞಾನ, ಡೇರಿ ತಂತ್ರಜ್ಞಾನ, ಕೃಷಿ ಎಂಜಿನಿಯರಿಂಗ್

4. ಫಾರ್ಮಸಿ ಮತ್ತು ಸೈನ್ಸ್ ಕೋರ್ಸ್‌ಗಳು:

  • B.Pharm (ಫಾರ್ಮಸಿ)
  • D.Pharm (ಡಿಪ್ಲೊಮಾ ಫಾರ್ಮಸಿ)
  • B.Sc. ನರ್ಸಿಂಗ್
  • B.Sc. ಪ್ಯಾರಾಮೆಡಿಕಲ್ (ಬೇರೊಂದು ಪರೀಕ್ಷೆಯ ಮೂಲಕ ಅಥವಾ ಡೈರೆಕ್ಟ್ ಎಡ್ಮಿಷನ್)

5. ಆರ್ಕಿಟೆಕ್ಚರ್ (B.Arch):

  • KCET + NATA ಸ್ಕೋರ್ ಅಗತ್ಯ
  • ವೃತ್ತಿಗಳು: ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನರ್, ಅರ್ಬನ್ ಪ್ಲಾನರ್

6. ಇತರ ವೃತ್ತಿ ಮಾರ್ಗಗಳು:

KCET ಮುಗಿದ ಬಳಿಕ ಬೇರೇನು ಮಾಡಬಹುದು:

  • BBA, B.Com, BA, B.Sc. (ಸಾಮಾನ್ಯ ಪದವಿ ಕೋರ್ಸ್‌ಗಳು)
  • ಸ್ಪರ್ಧಾತ್ಮಕ ಪರೀಕ್ಷೆಗಳು (KPSC, UPSC, ಬ್ಯಾಂಕ್, SSC)
  • ಡಿಸೈನ್ (NID/NIFT), ಮಾಧ್ಯಮ, ಹೋಟೆಲ್ ಮ್ಯಾನೇಜ್ಮೆಂಟ್

7. ಇತರ ರಾಜ್ಯ/ವಿದೇಶ ಅಧ್ಯಯನ:

KCET ಅನ್ನು ಬ್ಯಾಕಪ್ ಆಗಿ ಇಟ್ಟುಕೊಂಡು COMEDK, JEE, NEET ಅಥವಾ ವಿದೇಶದಲ್ಲಿ (SAT/IELTS) ಪರೀಕ್ಷೆಗಳಿಗೆ ಪ್ರಯತ್ನಿಸಬಹುದು. ನಿಮ್ಮ ವಿಷಯ (PCM ಅಥವಾ PCB), ರ್ಯಾಂಕ್, ಅಥವಾ ಆಸಕ್ತಿಗಳ ಆಧಾರದ ಮೇಲೆ ನಿಖರವಾಗಿ ಯಾವುದು ಉತ್ತಮವೆಂದು ಆಯ್ಕೆ ಮಾಡಿಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sat, 24 May 25

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!