MBBS Deadline: 9 ವರ್ಷದೊಳಗೆ ಎಂಬಿಬಿಎಸ್ ಮುಗಿಸಬೇಕು: ನ್ಯಾಷನಲ್ ಮೆಡಿಕಲ್ ಕಮಿಷನ್​ನಿಂದ ಹೊಸ ನಿಯಮಾವಳಿ

NMC Regulations On Medical Education: ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು, ಈ ಕೋರ್ಸ್​ಗೆ ದಾಖಲಾದ ದಿನದಿಂದ ಆರಂಭವಾಗಿ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. 9 ವರ್ಷದ ಬಳಿಕ ವಿದ್ಯಾರ್ಥಿಗೆ ಈ ಕೋರ್ಸ್ ಮುಂದುವರಿಸಲು ಅವಕಾಶ ಇರುವುದಿಲ್ಲ. ಇದು ಎನ್​ಎಂಸಿ ಹೊರಡಿಸಿರುವ ಹೊಸ ನಿಯಮಾವಳಿಯಲ್ಲಿದೆ.

MBBS Deadline: 9 ವರ್ಷದೊಳಗೆ ಎಂಬಿಬಿಎಸ್ ಮುಗಿಸಬೇಕು: ನ್ಯಾಷನಲ್ ಮೆಡಿಕಲ್ ಕಮಿಷನ್​ನಿಂದ ಹೊಸ ನಿಯಮಾವಳಿ
ಎಂಬಿಬಿಎಸ್ ವಿದ್ಯಾರ್ಥಿ
Follow us
|

Updated on: Jun 12, 2023 | 6:37 PM

ನವದೆಹಲಿ: ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. ಮೊದಲ ವರ್ಷದ ಕೋರ್ಸ್ ಅನ್ನು ಪೂರ್ಣಗೊಳಿಸಲು ಗರಿಷ್ಠ 4 ಪ್ರಯತ್ನಗಳು ಮಾತ್ರ ಇರುತ್ತವೆ. ಇವು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC- National Medical Commission) ಪ್ರಕಟಿಸಿರುವ ಹೊಸ ನಿಯಮಾವಳಿಗಳಲ್ಲಿ ಪ್ರಸ್ತಾಪಿತವಾಗಿವೆ. ಅಲ್ಲದೇ, ನೀಟ್ ಪರೀಕ್ಷೆಯಲ್ಲಿ (NEET UG Exam) ಬಂದ ಶ್ರೇಯಾಂಕ ಪಟ್ಟಿಯ ಪ್ರಕಾರ ದೇಶದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್​ಗಳ ದಾಖಲಾತಿಗಾಗಿ ಕಾಮನ್ ಕೌನ್ಸಲಿಂಗ್ ಇರಲಿದೆ ಎಂದು ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ರೆಗ್ಯುಲೇಶನ್ಸ್ 2023 (GMER-23) ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜೂನ್ 2ರಂದು ನ್ಯಾಷನಲ್ ಮೆಡಿಕಲ್ ಕಮಿಷನ್ ಈ ಹೊಸ ನಿಯಮಾವಳಿಗಳ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಎನ್​ಎಂಸಿ ಒದಗಿಸುವ ಸೀಟ್ ಮ್ಯಾಟ್ರಿಕ್ಸ್ ಆಧಾರದ ಮೇಲೆ ಕೌನ್ಸಲಿಂಗ್ ಇರುತ್ತದೆ. ಅಗತ್ಯ ಇದ್ದಲ್ಲಿ ಒಂದಕ್ಕಿಂತ ಹೆಚ್ಚು ಸುತ್ತುಗಳ ಕೌನ್ಸಲಿಂಗ್​ಗೆ ಅವಕಾಶ ಇರುತ್ತದೆ. ಅಂಡರ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಬೋರ್ಡ್ (UGMEB) ಕಾಮನ್ ಕೌನ್ಸಲಿಂಗ್ ಹೇಗೆ ನಡೆಯಬೇಕೆಂದು ಮಾರ್ಗಸೂಚಿ ಪ್ರಕಟಿಸುತ್ತದೆ. ಅದರ ಪ್ರಕಾರ ಸೆಕ್ಷನ್ 17ರ ಅಡಿಯಲ್ಲಿ ನಿಯೋಜಿತ ಅಧಿಕಾರಿಯಿಂದ ಕೌನ್ಸಲಿಂಗ್ ನಡೆಯಬೇಕು ಎಂದು ಎನ್​ಎಂಸಿ ಗೆಜೆಟ್​ನಲ್ಲಿ ತಿಳಿಸಲಾಗಿದೆ. ಕೌನ್ಸಲಿಂಗ್​ಗೆ ನಿಯೋಜಿತ ಅಧಿಕಾರಿಯನ್ನು ಸರ್ಕಾರವೇ ನೇಮಿಸಲಿದೆ. ಈ ನಿಯಮಾವಳಿಗಳನ್ನು ಮೀರಿ ಯಾವ ಶಿಕ್ಷಣ ಸಂಸ್ಥೆಯೂ ಅಭ್ಯರ್ಥಿಯನ್ನು ದಾಖಲಿಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.

ಇದನ್ನೂ ಓದಿUPSC Prelims Result 2023: UPSC ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ

ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಲು ಗಡುವು

ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು, ಈ ಕೋರ್ಸ್​ಗೆ ದಾಖಲಾದ ದಿನದಿಂದ ಆರಂಭವಾಗಿ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. 9 ವರ್ಷದ ಬಳಿಕ ವಿದ್ಯಾರ್ಥಿಗೆ ಈ ಕೋರ್ಸ್ ಮುಂದುವರಿಸಲು ಅವಕಾಶ ಇರುವುದಿಲ್ಲ. ಮೊದಲ ವರ್ಷದ ಶಿಕ್ಷಣವನ್ನು ಗರಿಷ್ಠ 4 ಅಟೆಂಪ್ಟ್​ನಲ್ಲಿ ಮುಗಿಸಲು ಅವಕಾಶ ನೀಡಲಾಗಿದೆ. ಮೆಡಿಕಲ್ ಇಂಟರ್ನ್​ಶಿಪ್ ಮುಗಿದ ಬಳಿಕವಷ್ಟೇ ಗ್ರಾಜುಯೇಶನ್ ಪೂರ್ಣಗೊಂಡಂತೆ. ಈ ಎಲ್ಲಾ ಅಂಶಗಳು ಎನ್​ಎಂಸಿ ಹೊರಡಿಸಿದ ಹೊಸ ನಿಯಮಾವಳಿಗಳಲ್ಲಿ ಇವೆ.

ಶಿಕ್ಷಣ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು