AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಕರ್ಮಕಾಂಡ ಹೊರ ಬೀಳುತ್ತಿದ್ದಂತೆ ಮಾನ್ಯತೆ ಹೊಂದಿದ ಸಿಬಿಎಸ್​ಇ ಶಾಲೆಗಳಿಗೆ ಹೆಚ್ಚಿದ ಬೇಡಿಕೆ

ಸಿಬಿಎಸ್​ಇ ಮಾನ್ಯತೆ ಇಲ್ಲದೆ ಸಿಬಿಎಸ್​ಇ ಪಾಠ ಹೇಳಿ ಕೊಡುತ್ತಿದ್ದ ಸುಮಾರು 200 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಕೊಡುತ್ತಿದ್ದಂತೆ ಶಾಲೆಗಳ ಕರ್ಮಕಾಂಡದಿಂದ ಬೇಸತ್ತ ಪೋಷಕರು ಅನಧಿಕೃತ ಶಾಲೆಗಳಿಂದ ಮಕ್ಕಳ ದಾಖಲಾತಿ ಬದಲಾಯಿಸಲು ಮುಂದಾಗಿದ್ದು, ಪರಿಣಾಮವಾಗಿ ಬೆಂಗಳೂರಿನಲ್ಲಿ ಸಿಬಿಎಸ್​ಇ ಮಾನ್ಯತೆ ಹೊಂದಿರುವ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳ ಕರ್ಮಕಾಂಡ ಹೊರ ಬೀಳುತ್ತಿದ್ದಂತೆ ಮಾನ್ಯತೆ ಹೊಂದಿದ ಸಿಬಿಎಸ್​ಇ ಶಾಲೆಗಳಿಗೆ ಹೆಚ್ಚಿದ ಬೇಡಿಕೆ
ಸಿಬಿಎಸ್​ಇ
TV9 Web
| Edited By: |

Updated on:Feb 16, 2023 | 9:11 PM

Share

ಬೆಂಗಳೂರು: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಹೈಟೆಕ್ ಫೆಸಿಲಿಟಿ ಲಭ್ಯ ಇರಬೇಕು ಅಂತಾ ನೂರಾರು ಕನಸು ಆಸೆ ಹೊತ್ತು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇತ್ತಿಚ್ಚಿನ ದಿನಗಳಲ್ಲಿ ಸುಲಿಗೆಯ ಜೊತೆಗೆ ಕಳ್ಳಾಟ ಶುರು ಮಾಡಿಕೊಂಡಿದ್ದು ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಹೈಟೆಕ್ ಅ್ಯಂಡ್ ಇಂಟರ್ ನ್ಯಾಷನಲ್ ಸಿಬಿಎಸ್​ಇ (CBSE) ಸಿಲೆಬಸ್ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಲಕ್ಷ ಲಕ್ಷ ಫೀಸ್ ಇದ್ದರೂ ಪರವಾಗಿಲ್ಲ ಅಂತಾ ಹಿಂದೆ ಮುಂದೆ ನೋಡದೆ ಶಾಲೆಗೆ ಮಕ್ಕಳನ್ನ ದಾಖಲಾತಿ ಮಾಡಿರುವ ಪೋಷಕರು ಅಕ್ಷರಶಃ ಇಂದು ಪರದಾಡುವ ಸ್ಥಿತಿ ಎದುರಾಗಿದೆ. ಆರ್ಕಿಡ್ (Orchid School) ಸೇರಿದಂತೆ ಬೆಂಗಳೂರಿನ 200ಕ್ಕೂ ಹೆಚ್ಚು ಶಾಲೆಗಳ ಈ ಕಳ್ಳಾಟ ಹೊರ ಬರ್ತಿದ್ದಂತೆ ಪೋಷಕರು ಕಂಗಲಾಗಿದ್ದಾರೆ. ಇದೀಗ ಪೋಷಕರು ಮಾನ್ಯತೆ ಪಡೆದ ಸಿಬಿಎಸ್​​ಇ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದು, ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

ಸಿಬಿಎಸ್​ಇ ಮಾನ್ಯತೆ ಇಲ್ಲದೆ ಸಿಬಿಎಸ್​ಇ ಪಾಠ ಹೇಳಿ ಕೊಡುತ್ತಿದ್ದ ಸುಮಾರು 200 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಕೊಡುತ್ತಿದ್ದಂತೆ ಶಾಲೆಗಳ ಕರ್ಮಕಾಂಡದಿಂದ ಬೇಸತ್ತ ಪೋಷಕರು ಅನಧಿಕೃತ ಶಾಲೆಗಳಿಂದ ಮಕ್ಕಳ ದಾಖಲಾತಿ ಬದಲಾಯಿಸಲು ಮುಂದಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಸಿಬಿಎಸ್​ಇ ಮಾನ್ಯತೆ ಹೊಂದಿರುವ ಶಾಲೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.

ಲಕ್ಷ ಲಕ್ಷ ಫೀಸ್ ಕೊಡುತ್ತೇವೆ ಅಂದರೂ ಸಿಬಿಎಸ್​ಇ ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಅಡ್ಮಿಷನ್ ಸಿಗುತ್ತಿಲ್ಲ. ಇಷ್ಟಕ್ಕೆಲ್ಲ ಕಾರಣ ಅಂದರೆ ಬೆಂಗೂರಿನಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳ ಹಾವಳಿ. ಹೌದು, ಕಳೆದ ಹದಿನೈದು ದಿನಗಳಿಂದ ಆರ್ಕಿಡ್ ಶಿಕ್ಷಣ ಸಂಸ್ಥೆ ಸೇರಿದಂತೆ ಸಾಲು ಸಾಲು ಅನಧಿಕೃತ ಶಾಲೆಗಳ ಬಣ್ಣ ಬಯಲಾಗುತ್ತಿದ್ದಂತೆ ಪೋಷಕರು ಪುಲ್ ಟೆನ್ಷನ್ ಆಗಿದ್ದಾರೆ.

ಇದನ್ನೂ ಓದಿ: ಸಿಬಿಎಸ್​ಇ ಸುಳ್ಳು ನೆಪ ಹೇಳಿ ಲಕ್ಷಾಂತರ ಶುಲ್ಕ: ಆರ್ಕಿಡ್ ಇಂಟರ್​ನ್ಯಾಷನಲ್ ಸ್ಕೂಲ್ ವಿರುದ್ಧ ಪೋಷಕರ ಪ್ರತಿಭಟನೆ

ಶಾಲೆ ನಮಗೆ ಸಿಬಿಎಸ್​​ಇ ಸಿಲೆಬಸ್ ಅಂತಾ ಇಷ್ಟು ದಿನ ಮೋಸ ಮಾಡಿದೆ ಅಂತಾ ಬೇಸತ್ತು ಅನಧಿಕೃತ ಶಾಲೆಗಳಿಂದ ಟಿಸಿ ಪಡೆದು ಸಿಬಿಎಸ್​ಇ ಮಾನ್ಯತೆ ಹೊಂದಿರುವ ಶಾಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಶಾಲೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಇನ್ನು ಈಗಾಗಲೇ ಬಹುತೇಕ ಸಿಬಿಎಸ್​ಇ ಶಾಲೆಗಳಲ್ಲಿ ದಾಖಲಾತಿ ಮುಗಿದ ಹಿನ್ನಲೆ ಪೋಷಕರು ದಾಖಲಾತಿಗೆ ಪರದಾಡು ಸ್ಥಿತಿ ಎದುರಾಗಿದೆ. ಮಕ್ಕಳ ಭವಿಷ್ಯ ಕಲಿಕೆ ಮುಖ್ಯ ಅಂತಾ ಲಕ್ಷ ಲಕ್ಷ ಶುಲ್ಕವಾದರೂ ಪರವಾಗಿಲ್ಲ ಅಂತಾ ಸಿಬಿಎಸ್​ಇ ಶಾಲೆಗಳನ್ನ ಹುಡುಕುತ್ತಿದ್ದಾರೆ. ಆದರೆ ಎಲ್ಲೂ ಶಾಲೆಗಳು ಸಿಗುತ್ತಿಲ್ಲ. ಹೀಗಾಗಿ ಪರದಾಡುವ ಸ್ಥಿತಿ ಪೋಷಕರಿಗ ಎದುರಾಗಿದೆ. ಇನ್ನು ಕೆಲವು ಸಿಬಿಎಸ್​ಇ ಶಾಲೆಗಳು ಇದನ್ನೇ ಬಂಡವಾಳ ಮಾಡಿಕೊಂಡು ಮುಂದಿನ ವರ್ಷದ ಅಡ್ಮಿಷನ್​ಗೂ ಈಗಲೇ ಶುಲ್ಕ ಪಡೆದು ದಾಖಲಾತಿ ಪಡೆಯುತ್ತಿರುವುದರಿಂದ ಸಿಬಿಎಸ್​ಇ ಶಾಲೆಗಳು ಇಲ್ಲದೆ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಪೋಷಕಿ ಅರ್ಚನಾ ಹೇಳುತ್ತಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಕೆಲವು ಖಾಸಗಿ ಶಾಲೆಗಳ ಬಣ್ಣ ಬಯಲಾಗುತ್ತಿದ್ದಂತೆ ಪೇಕ್ ಸಿಬಿಎಸ್​ಇ ಶಾಲೆಗಳ ಕರ್ಮಕಾಂಡದ ಬಳಿಕ ಪೋಷಕರು ಮಾನ್ಯತೆ ಹೊಂದಿರುವ ಶಾಲೆಗಳನ್ನ ಪರಶೀಲಿಸಿ ದಾಖಲಾತಿಗೆ ಮುಂದಾಗಿರೊದರಿಂದ ಏಕಾಏಕಿ ಮಾನ್ಯತೆ ಹೊಂದಿರುವ ಸಿಬಿಎಸ್​ಇ ಶಾಲೆಗಳಿಗೆ ಬೇಡಿಕೆ ಹೆಚ್ಚಾದಂತಾಗಿದೆ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Thu, 16 February 23

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?