ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!

Anekal Assembly constituency: ಬಿಜೆಪಿಯಿಂದ‌ 3 ಅಭ್ಯರ್ಥಿಗಳ ಹೆಸರು‌ ಚಾಲ್ತಿಯಲ್ಲಿದೆ. ಆರ್ ಎಸ್ ಎಸ್ ಹಿನ್ನೆಲೆಯ ಹುಲ್ಲಳ್ಳಿ ‌ಶ್ರೀನಿವಾಸ್ ಟಿಕೆಟ್ ಸಿಗುವ ಭರವಸೆಯಿಂದ ‌ಗ್ರೌಂಡ್ ವರ್ಕ್ ಶುರುಮಾಡಿಕೊಂಡಿದ್ರೆ, ಮಾಜಿ ‌ಕೆ‌ಎ‌ಎಸ್ ಅಧಿಕಾರಿ ಕೆ ಶಿವರಾಮ್ ಟಿಕೆಟ್ ಗಾಗಿ ಯಡಿಯೂರಪ್ಪ ಅಂಡ್ ಟೀಂ ಸುತ್ತಾ ಗಿರಿಕಿ ಹೊಡೆಯುತ್ತಿದೆ. ‌

ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!
ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ
Follow us
| Updated By: ಸಾಧು ಶ್ರೀನಾಥ್​

Updated on: Apr 04, 2023 | 12:39 PM

ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ (Karnataka Assembly Elections 2023) ರಾಗಿನಾಡು ಆನೇಕಲ್ (Anekal)ನಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿ ಕಾಂಗ್ರೆಸ್ (Congress) ಇದ್ದರೆ, ಕಳೆದ ಬಾರಿ ಸ್ಪರ್ಧೆ ಮಾಡದ ಜೆಡಿಎಸ್ (JDS) ತನ್ನ ತಾಕತ್ತು ತೋರಿಸಲು ಫೀಲ್ಡಿಗಿಳಿದಿದೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಸರ್ಕಸ್ ಈಗಲೂ ನಡೆಯುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಾ ಇದೆ. ಹತ್ತಾರು ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರಾನೇರ ಫೈಟ್ ಇರುತ್ತಿತ್ತು. ಆದರೆ ಈ ಬಾರಿ ಜೆಡಿಎಸ್ ಪಕ್ಷದ ಕೆಪಿ ರಾಜು ಎಂಟ್ರಿ ಕೊಟ್ಟು ಎರಡೂ ಪಕ್ಷಗಳಿಗೆ ಶಾಕ್ ನೀಡಿದ್ದಾರೆ. 2013 ಮತ್ತು 2019 ರ ಚುನಾವಣೆಯಲ್ಲಿ ಎರಡು ಬಾರಿ ಗೆಲುವಿನ‌ ನಗಾರಿ ಬಾರಿಸಿದ್ದ ಆನೇಕಲ್ ಶಾಸಕ‌ ಬಿ ಶಿವಣ್ಣ, ಮೂರನೇ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದರೆ, ಬಿಜೆಪಿ (BJP) ಪಾಳಯ ಇನ್ನೂ ಅಭ್ಯರ್ಥಿ ಆಯ್ಕೆಯನ್ನು ಫೈನಲ್ ಮಾಡಿಕೊಂಡಿಲ್ಲ.

ಸಧ್ಯ ಬಿಜೆಪಿಯಿಂದ‌ ಮೂವರು ಅಭ್ಯರ್ಥಿಗಳ ಹೆಸರು‌ ಪ್ರಬಲವಾಗಿ ಚಾಲ್ತಿಯಲ್ಲಿದೆ. ಆರ್ ಎಸ್ ಎಸ್ ಹಿನ್ನೆಲೆಯಿಂದ‌ ಬಂದ ಹುಲ್ಲಳ್ಳಿ ‌ಶ್ರೀನಿವಾಸ್ ಟಿಕೆಟ್ ಸಿಗುವ ಭರವಸೆಯಿಂದ ‌ಗ್ರೌಂಡ್ ವರ್ಕ್ ಶುರುಮಾಡಿಕೊಂಡಿದ್ರೆ, ಮಾಜಿ ‌ಕೆ‌ಎ‌ಎಸ್ ಅಧಿಕಾರಿ ಕೆ ಶಿವರಾಮ್ ಟಿಕೆಟ್ ಗಾಗಿ ಯಡಿಯೂರಪ್ಪ ಅಂಡ್ ಟೀಂ ಸುತ್ತಾ ಗಿರಿಕಿ ಹೊಡೆಯುತ್ತಿದೆ. ‌ಇನ್ನು ಯುವ ಘಟಕ ಅಧ್ಯಕ್ಷ ಸಂದೀಪ್ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದಾರೆ.

Also Read:

ಸಿದ್ದರಾಮಯ್ಯ ಸ್ಪಷ್ಟನೆ : ಡಿಕೆ ಶಿವಕುಮಾರ್​ನನ್ನು ಹೈಕಮಾಂಡ್​ ಸಿಎಂ ಮಾಡಲ್ಲ ಎಂದು ನಾನು ಹೇಳಿಲ್ಲ

ಆದರೆ ಯಾರಿಗೆ ಟಿಕೆಟ್ ಅನ್ನೋದು ಸಧ್ಯ ಈಗಲೂ ಗೊತ್ತಿರದ ವಿಚಾರ. ಕೆಲ ದಿನಗಳ ಹಿಂದೆ ವಿದೇಶಾಂಗ ಸಚಿವ ಆರ್ ಜಯಶಂಕರ್ ಹುಲ್ಲಳ್ಳಿ ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟಿದ್ದು, ಹಾಗೂ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಗಳಲ್ಲಿ ಹುಲ್ಲಳ್ಳಿ ಶ್ರೀನಿವಾಸ್ ಅವರಿಗೆ ಪ್ರಾಮುಖ್ಯತೆ ಕೊಟ್ಟಿರುವುದನ್ನು ಗಮನಿಸಿದರೆ ಬಹುತೇಕ ಹುಲ್ಲಳ್ಳಿ ಶ್ರೀನಿವಾಸ್ ಗೆ ಟಿಕೆಟ್ ಅನೌನ್ಸ್ ಆಗುಬಹುದು ಅಂತ ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಕಡೇ ಕ್ಷಣದಲ್ಲೂ ಬದಲಾವಣೆ ಆದ್ರೂ ಆಗಬಹುದು.

ಇನ್ನು ಚುನಾವಣಾ ಸ್ಪರ್ಧೆ ವಿಚಾರಕ್ಕೆ ಬಂದ್ರೆ, ಕಳೆದ ಬಾರಿ ಜೆಡಿಎಸ್ ಅನುಪಸ್ಥತಿಯಲ್ಲಿ ಬಿಜೆಪಿ ಪಕ್ಷದ ಎ‌ ನಾರಾಯಣ ಸ್ವಾಮಿ ವಿರುದ್ಧ 8,627 ಮತಗಳ ಅಂತರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಬಿ‌ ಶಿವಣ್ಣ, ಈ ಬಾರಿ ಜೆಡಿಎಸ್ ಎಂಟ್ರಿಯಿಂದ ಶಾಕ್ ಆಗಿದ್ದಾರೆ. ಜೆಡಿಎಸ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಈ ಬಾರಿ ಆನೇಕಲ್ ಕೈ ತಪ್ಪಬಹದು ಅನ್ನೋ ಭೀತಿ ಶುರುವಾಗಿದೆ. ತಮ್ಮ ಕಾರ್ಯಕರ್ತರು ಜೆಡಿಎಸ್ ಕಡೆಗೆ ಚದುರಿ ಹೋಗದಂತೆ ಪ್ರಯತ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಯಾರೂ ಅಂತ ಗೊತ್ತಾಗದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಗೇಮ್ ಪ್ಲ್ಯಾನ್ ಮಾಡದೇ ಅಬ್ಸರ್​​ವೇಶನ್ ಮೋಡ್​ನಲ್ಲಿವೆ.

ವರದಿ: ಸಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್

ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ