AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Elections 2023: ಪ್ರಧಾನಿ ಮೋದಿ ರೋಡ್ ಶೋ, ಜನರ ಜೊತೆಗಿನ ನೇರ ಸಂಬಂಧದ ಪ್ರಚಾರ

ಕಳೆದ ಮೂರು ತಿಂಗಳಲ್ಲಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ, ಹಲವು ಕಡೆ ರೋಡ್ ಶೋ ನಡೆಸಿದ್ದರು. ಚುನಾವಣಾ ತಯಾರಿ ಮಾಡುತ್ತಿರುವಾಗಲೇ ರೋಡ್ ಶೋ ಮಾಡಿ, ಬಿಜೆಪಿ ಹವಾ ಹುಟ್ಟು ಹಾಕಲು ಅವರು ಪ್ರಯತ್ನಿಸಿದ್ದರು.

Karnataka Elections 2023: ಪ್ರಧಾನಿ ಮೋದಿ ರೋಡ್ ಶೋ, ಜನರ ಜೊತೆಗಿನ ನೇರ ಸಂಬಂಧದ ಪ್ರಚಾರ
ಮೋದಿ ರೋಡ್​ ಶೋ (ಸಂಗ್ರಹ ಚಿತ್ರ)
ಡಾ. ಭಾಸ್ಕರ ಹೆಗಡೆ
|

Updated on:Apr 20, 2023 | 5:02 PM

Share

ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕ ವಿಧಾನಸಭೆ ಚುನಾವಣಾ (Karnataka Assembly Elections 2023) ಪ್ರಚಾರಕ್ಕೆ ಅಧಿಕೃತವಾಗಿ ಇಳಿಯಲಿದ್ದಾರೆ ಮತ್ತು ಪಕ್ಷದ ಉಮೇದುವಾರರ ಪರವಾಗಿ, ಖುದ್ದು ಮತ ಕೇಳಲಿದ್ದಾರೆ. ನಾಡಿದ್ದು ಶನಿವಾರದಿಂದ ಪ್ರಾರಂಭವಾಗುವ ಅವರ ಭೇಟಿ ಹಲವಾರು ರೂಪದಲ್ಲಿರುತ್ತದೆ; ಬೃಹತ್ ಬಹಿರಂಗ ಸಭೆ, ರೋಡ್ ಶೋ ಇತ್ಯಾದಿ. ಕಳೆದ ಮೂರು ತಿಂಗಳಲ್ಲಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ, ಹಲವು ಕಡೆ ರೋಡ್ ಶೋ ನಡೆಸಿದ್ದರು. ಚುನಾವಣಾ ತಯಾರಿ ಮಾಡುತ್ತಿರುವಾಗಲೇ ರೋಡ್ ಶೋ ಮಾಡಿ, ಬಿಜೆಪಿ ಹವಾ ಹುಟ್ಟು ಹಾಕಲು ಅವರು ಪ್ರಯತ್ನಿಸಿದ್ದರು.

ಅತ್ಯಂತ ಕಠಿಣ ಭದ್ರತೆ ಇರುವ ಗಣ್ಯ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಆದರೂ ಮೋದಿ, ರೋಡ್ ಶೋ ಮಾಡಿ, ಜನರ ಜೊತೆ ಬೆರೆಯಲು ಪ್ರಯತ್ನಿಸುತ್ತಾರೆ. ಈ ಹಿಂದೆ, ಹುಬ್ಬಳ್ಳಿ ಇರಬಹುದು, ಮೈಸೂರು ಇರಬಹುದು ಎಲ್ಲಾ ಕಡೆ ರೋಡ್ ಶೋ ಮಾಡಿದಾಗಲೂ, ಅವರಿಗೆ ಅಭೂತಪೂರ್ವ ಸ್ವಾಗತ ಅವರಿಗೆ ಸಿಕ್ಕಿತ್ತು. ಅಷ್ಟೇ ಅಲ್ಲ, ಅವರು ಸಹ ಅದೇ ರೀತಿಯಲ್ಲಿ ಜನರ ಪ್ರೀತಿಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Karnataka Assembly Elections 2023: ಚುನಾವಣೆಗೆ ಮತದಾರರು ಗಮನ ಸೆಳೆದ ವಿಷಯಗಳೇನು?

ರೋಡ್ ಶೋ ಮೂಲಕ ಪ್ರಚಾರ ಸಾಧ್ಯವೇ? ಸಾಮಾನ್ಯ ನಾಯಕರು ರೋಡ್ ಶೋ ಮಾಡಿದರೆ, ಅವು ಉದ್ದೇಶಿತ ಫಲ ನೀಡಲಿಕ್ಕಿಲ್ಲ. ಆದರೆ, ಮೋದಿ ಹಾಗಲ್ಲ. ಅಲ್ಲೊಂದು ಹವಾ ಹುಟ್ಟಿರುತ್ತೆ. ಚುನಾವಣಾ ಪ್ರಚಾರ ಸಭೆಯಲ್ಲಿ, ನಾಯಕ ವೇದಿಕೆ ಮೇಲೆ ನಿಂತು ಮಾತನಾಡುವುದು ಸರ್ವೇ ಸಾಮಾನ್ಯ. ಪಕ್ಷದ ಬೆಂಬಲಿಗರು ಮತ್ತು ಸಾಮಾನ್ಯ ನಾಗರಿಕರು ಕೆಳಗೆ ಕುಳಿತು ಅಥವಾ ನಿಂತು ಭಾಷಣ ಕೇಳುತ್ತಾರೆ. ಇಲ್ಲಿ, ನಾಯಕ ಮತ್ತು ಕಾರ್ಯಕರ್ತರ ನಡುವೆ ಅಂತರ ಜಾಸ್ತಿ. ನಾಯಕ ಮತ್ತು ಜನರ ನಡುವೆ ಒಂದು ರಾಜಕೀಯ ಸಂಬಂಧ (political equations) ಕಾಣುತ್ತದೆ. ಅದೇ ರೋಡ್​ ಶೋ ನಲ್ಲಿ ಹಾಗಲ್ಲ. ಅಲ್ಲಿ, ನಾಯಕ ರಸ್ತೆಯಲ್ಲಿ ಬರುತ್ತಾರೆ. ವಾಹನದಲ್ಲಿ ಬರುವಾಗ, ಅತೀ ಹತ್ತಿರದಿಂದ ಕೈ ಬೀಸುತ್ತಾರೆ. ಇಲ್ಲಿ, ಓರ್ವ ಫ್ಯಾನ್​ ಮತ್ತು ಅವರ ಆರಾಧ್ಯ ದೈವದ ಸಂಬಂಧವನ್ನು ಕಾಣಬಹುದು. ಈ intimacy ಗೆ ರಾಜಕೀಯ ಲೇಪ ಇದ್ದೇ ಬಿಡುತ್ತದೆ ಎಂದು ಹೇಳಲಾಗದು. ಪ್ರಾಯಶಃ, ಪ್ರಧಾನಿ ಮೋದಿ ಮತ್ತು ಜನರ ನಡುವೆ ಇಂತಹ ಒಂದು ಸಂಬಂಧವನ್ನು ಕಾಣಬಹುದು.

ಈ ಹಿಂದೆ ಬಿಜೆಪಿಯ ಹಲವಾರು ಜವಾಬ್ದಾರಿಯನ್ನು ನಿರ್ವಹಿಸಿರುವ, ವಾಮನ ಆಚಾರ್ಯ ಇದರ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದು ಹೀಗೆ; ನೋಡಿ, ನಮ್ಮ ಜನರಿಗೆ ಮೋದಿ ಮೇಲೆ ಅತೀವ ಪ್ರೀತಿ ಮತ್ತು ವಿಶ್ವಾಸ ಇದೆ. ಹಾಗಾಗಿಯೇ, ಬಿಸಿಲನ್ನು ಲೆಕ್ಕಿಸದೇ ಅವರು, ರಸ್ತೆ ಪಕ್ಕದಲ್ಲಿ ನಿಂತು ಕಾಯತ್ತಾರೆ. ಮೋದಿಯವರ ರೋಡ್ ಶೋ ಕೂಡ ಚುನಾವಣಾ ಪ್ರಚಾರ ಎನ್ನುವುದಕ್ಕೆ ಒಂದು ಕಾರಣ ಇದೆ. ಪ್ರಾಮಾಣಿಕತೆ, ನಿಷ್ಠೆಯಿಂದ ಅವರು ದೇಶದ ಸೇವೆ ಮಾಡುತ್ತಾರೆ ಎಂಬುದು ಜನರಿಗಿರುವ ದೃಢ ನಂಬಿಕೆ. ಹಾಗಾಗಿ ಅವರಿಗೆ ಮೋದಿ ನೋಡಿ ಬರೀ ಖುಷಿ ಆಗಲ್ಲ. ಅವರನ್ನು ನೋಡಿ ಒಂದು ರೀತಿ ಮಂತ್ರಮುಗ್ಧರಾಗುತ್ತಾರೆ. ಆಗ ಏನಾಗುತ್ತೆ ಅಂತ ಕೇಳಬಹುದು? ಯಾವ ಅಭ್ಯರ್ಥಿಯ ಮುಖ ನೋಡಿ ಮತ ಹಾಕೋದು ಬೇಡ, ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕೋಣ ಎಂಬ ನಿರ್ಧಾರಕ್ಕೆ ಜನ ಬರಬಹುದು. ಈ ದೃಷ್ಟಿಕೋನದಿಂದ ಮೋದಿ ಅವರ ರೋಡ್ ಶೋ ಎಲ್ಲ ಕಡೆ ಯಶಸ್ವಿಯಾಗುತ್ತೆ.” ಆಚಾರ್ಯ ಅವರ ಪ್ರಕಾರ ಮೋದಿ ರೋಡ್ ಶೋ ಬಿಜೆಪಿಗೆ ಖಂಡಿತಾ ಸಹಾಯ ಆಗಬಹುದು. ಯಾಕೆಂದರೆ, ತುಂಬಾ ಜನರಿಗೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಅವಕಾಶ ಸಿಗಲ್ಲ. ಹಾಗಾಗಿ ಈ ರೋಡ್ ಶೋ, ಅಂತಹ ಜನರನ್ನು ಸೆಳೆಯಲು ಅನುಕೂಲ ಆಗುತ್ತದೆ, ಅಷ್ಟೇ ಅಲ್ಲ, ಅದನ್ನು ಟಿವಿಯಲ್ಲಿ ನೋಡುವ ಜನ ಸಹಪ್ರಭಾವಿತರಾಗುವ ಸಾಧ್ಯತೆ ಇರುತ್ತದೆ ಎಂಬುದು ಆಚಾರ್ಯ ಅವರ ಅಭಿಪ್ರಾಯ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:45 pm, Thu, 20 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ