PM Narendra Modi: ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಪ್ರಧಾನಿ ಮೋದಿ: ಇಲ್ಲಿದೆ ಮೋದಿ ಯೋಜನೆಯ ಸಂಪೂರ್ಣ ಮಾಹಿತಿ

ರಾಜಭವನದಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದು, ಕೋಲಾರ, ಚನ್ನಪಟ್ಟಣ, ಬೇಲೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ.

PM Narendra Modi: ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಪ್ರಧಾನಿ ಮೋದಿ: ಇಲ್ಲಿದೆ ಮೋದಿ ಯೋಜನೆಯ ಸಂಪೂರ್ಣ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ
Follow us
|

Updated on:Apr 29, 2023 | 9:47 PM

ಬೆಂಗಳೂರು: ಶನಿವಾರ ಬೀದರ್​ಗೆ ಆಗಮಿಸಿದ್ದ ಪ್ರಧಾನಿ ಮೋದಿ (PM Modi) ಹುಮ್ನಾಬಾದ್​, ವಿಜಯಪುರ, ಕುಡಚಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಮಾಗಡಿ ರಸ್ತೆಯ ನೈಸ್​ ಜಂಕ್ಷನ್​ನಿಂದ ಸುಮನಹಳ್ಳಿವರೆಗೆ ಬೃಹತ್​ ರೋಡ್​ ಶೋ ಮಾಡಿದರು. ಸದ್ಯ ರಾಜಭವನದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಿದ್ದಾರೆ. ನಾಳೆಯೂ ಭರ್ಜರಿ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ, ಭಾನುವಾರ ಬೆಳಗ್ಗೆ 10.35ಕ್ಕೆ ರಾಜಭವನದಿಂದ ಹೆಲಿಪ್ಯಾಡ್​ಗೆ ತೆರಳಲಿದ್ದಾರೆ. ಬಳಿಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಮೈಸೂರಿನಲ್ಲಿ ರೋಡ್​ ಶೋ ನಡೆಸಲಿದ್ದಾರೆ.

ಭಾನುವಾರದ ಪ್ರಧಾನಿ ಮೋದಿ ಯೋಜನೆ ಹೀಗಿದೆ

  • ಬೆಳಗ್ಗೆ 10.45ಕ್ಕೆ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ
  • ಬೆಳಗ್ಗೆ 10.50ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಕೋಲಾರದತ್ತ ಪ್ರಯಾಣ
  • ಬೆಳಗ್ಗೆ 11.20ಕ್ಕೆ ಕೋಲಾರ​​ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಬೆಳಗ್ಗೆ 11.25ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದತ್ತ ಪ್ರಧಾನಿ ಪ್ರಯಾಣ
  • ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ
  • ಬೆಳಗ್ಗೆ 11.30ರಿಂದ ಮಧ್ಯಾಹ್ನ 12.15ರವರೆಗೆ ಸಮಾವೇಶದಲ್ಲಿ ಭಾಗಿ
  • ಮಧ್ಯಾಹ್ನ 12.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಮಧ್ಯಾಹ್ನ 12.25ಕ್ಕೆ ಹೆಲಿಪ್ಯಾಡ್​​ ತಲುಪಲಿರುವ ಪ್ರಧಾನಿ ನರೇಂದ್ರಮೋದಿ
  • ಮಧ್ಯಾಹ್ನ 12.30ಕ್ಕೆ MI-17 ಕಾಪ್ಟರ್​​ನಲ್ಲಿ ಚನ್ನಪಟ್ಟಣದತ್ತ ಪ್ರಯಾಣ
  • ಮಧ್ಯಾಹ್ನ 1.15ಕ್ಕೆ ಚನ್ನಪಟ್ಟಣ ಹೆಲಿಪ್ಯಾಡ್​ಗೆ ಬಂದಿಳಿಯಲಿರುವ ಮೋದಿ
  • ಮಧ್ಯಾಹ್ನ 1.20ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
  • ಮಧ್ಯಾಹ್ನ 1.25ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
  • ಮಧ್ಯಾಹ್ನ 1.30ರಿಂದ 2.15ರವರೆಗೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಭಾಗಿ
  • ಮಧ್ಯಾಹ್ನ 2.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಮಧ್ಯಾಹ್ನ 2.25ಕ್ಕೆ ಹೆಲಿಪ್ಯಾಡ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ
  • ಮಧ್ಯಾಹ್ನ 2.30ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಬೇಲೂರಿನತ್ತ ಪ್ರಯಾಣ
  • ಮಧ್ಯಾಹ್ನ 3.30ಕ್ಕೆ ಬೇಲೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಮಧ್ಯಾಹ್ನ 3.35ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
  • ಮಧ್ಯಾಹ್ನ 3.40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
  • ಮಧ್ಯಾಹ್ನ 3.45ರಿಂದ ಸಂಜೆ 4.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
  • ನಾಳೆ ಸಂಜೆ 4.35ಕ್ಕೆ ಸಮಾವೇಶದ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಸಂಜೆ 4.40ಕ್ಕೆ ಬೇಲೂರು ಹೆಲಿಪ್ಯಾಡ್​ಗೆ​​ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 4.45ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಮೈಸೂರಿನತ್ತ ಮೋದಿ ಪ್ರಯಾಣ
  • ಸಂಜೆ 5.35ಕ್ಕೆ ಮೈಸೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 5.40ಕ್ಕೆ ಹೆಲಿಪ್ಯಾಡ್​​ನಿಂದ ವಿದ್ಯಾಪೀಠ ವೃತ್ತದತ್ತ ಮೋದಿ ಪ್ರಯಾಣ
  • ಸಂಜೆ 5.45ಕ್ಕೆ ಮೈಸೂರು ವಿದ್ಯಾಪೀಠ ವೃತ್ತ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 5.45ರಿಂದ ಸಂಜೆ 6.30ರವರೆಗೆ ರೋಡ್​ ಶೋ ನಡೆಸಲಿರುವ ಪ್ರಧಾನಿ
  • ಸಂಜೆ 6.35ಕ್ಕೆ ಬನ್ನಿಮಂಟಪದ LIC ವೃತ್ತದಿಂದ ಏರ್​ಪೋರ್ಟ್​​ನತ್ತ ಮೋದಿ
  • ಸಂಜೆ 6.55ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 7 ಗಂಟೆಗೆ ಸೇನಾ ವಿಮಾನದಲ್ಲಿ ದೆಹಲಿಯತ್ತ ಪ್ರಧಾನಿ ಮೋದಿ ಪ್ರಯಾಣ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Sat, 29 April 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ