ಕಾಂಗ್ರೆಸ್ ಘರ್ ಘರ್ ಗ್ಯಾರಂಟಿ; ಐದು ನ್ಯಾಯ, 25 ಭರವಸೆಗಳು ಯಾವುವು? ಇಲ್ಲಿದೆ ಪಟ್ಟಿ

|

Updated on: Apr 03, 2024 | 5:41 PM

Congress Ghar Ghar Guarantee List: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏಪ್ರಿಲ್ 3ರಂದು ಐದು ನ್ಯಾಯ, ಇಪ್ಪತ್ತೈದು ಗ್ಯಾರಂಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಘರ್ ಘರ್ ಗ್ಯಾರಂಟಿ ಗೆಲುವು ತಂದುಕೊಡಬಲ್ಲುದಾ? ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಹಿಂದುಳಿದವರು ಇಷ್ಟೂ ವರ್ಗದ ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳನ್ನು ಕೊಟ್ಟಿದೆ. ಅದರ ಪಟ್ಟಿ ಇಲ್ಲಿದೆ.

ಕಾಂಗ್ರೆಸ್ ಘರ್ ಘರ್ ಗ್ಯಾರಂಟಿ; ಐದು ನ್ಯಾಯ, 25 ಭರವಸೆಗಳು ಯಾವುವು? ಇಲ್ಲಿದೆ ಪಟ್ಟಿ
ಮಲ್ಲಿಕಾರ್ಜುನ ಖರ್ಗೆ
Follow us on

ನವದೆಹಲಿ, ಏಪ್ರಿಲ್ 3: ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು (Five Guarantees) ಯಶಸ್ವಿಯಾದ ಹಿನ್ನೆಲೆಯಲ್ಲಿ ಅದೇ ರೀತಿಯ ಸೂತ್ರವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮೋದಿ ಸಾಮ್ರಾಜ್ಯವನ್ನು ಕೆಡವಲು ಮುಂದಾಗಿದೆ. ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಈ ಐದು ನ್ಯಾಯಗಳ ಜೊತೆ 25 ಭರವಸೆಗಳನ್ನು ಕೊಟ್ಟಿದೆ. ಇಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಕಾತಿಯಾವಾಡದ ಉಸ್ಮಾನ್​ಪುರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಘರ್ ಘರ್ ಗ್ಯಾರಂಟಿ’ (Ghar Ghar Guarantee) ಯೋಜನೆ ಅನಾವರಣಗೊಳಿಸಿದ್ದಾರೆ. ಐದು ನ್ಯಾಯ, ಇಪ್ಪತ್ತೈದು ಗ್ಯಾರಂಟಿಗಳಿರುವ ಕರಪತ್ರಗಳನ್ನು ಹಂಚಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲ್ಲಲು ಹೊರಟಿರುವ ಎನ್​ಡಿಎ ಪ್ರಯತ್ನಕ್ಕೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೂಲಕ ತೊಡರುಗಾಲು ಹಾಕಲು ಯಶಸ್ವಿಯಾಗುತ್ತದಾ ಕಾದುನೋಡಬೇಕು.

ಕಾಂಗ್ರೆಸ್ ಐದು ನ್ಯಾಯಗಳು

  1. ಯುವ ನ್ಯಾಯ
  2. ನಾರಿ ನ್ಯಾಯ
  3. ಕಿಸಾನ್ ನ್ಯಾಯ
  4. ಶ್ರಮಿಕ್ ನ್ಯಾಯ
  5. ಸಮಾನತೆ ನ್ಯಾಯ

ಇದನ್ನೂ ಓದಿ: ಬಾಕ್ಸರ್ ವಿಜೇಂದರ್ ಸಿಂಗ್ ಬಿಜೆಪಿ ಸೇರ್ಪಡೆ; ಮಥುರಾದಲ್ಲಿ ಹೇಮಮಾಲಿನಿ ಬದಲು ಅವರಿಗೆ ಟಿಕೆಟ್ ಸಾಧ್ಯತೆ

ಲೋಕಸಭಾ ಚುನಾವಣೆ: ಕಾಂಗ್ರೆಸ್​ನ ಯುವ ನ್ಯಾಯ

  1. ಮೊದಲ ಉದ್ಯೋಗ ಖಾತ್ರಿ: ಓದಿದ ಯುವಕ, ಯುವತಿಯರಿಗೆ ವರ್ಷಕ್ಕೆ ಒಂದು ಲಕ್ಷ ರೂ ಅಪ್ರೆಂಟಿಸ್​ಶಿಪ್
  2. ನೇಮಕಾತಿ ಖಾತ್ರಿ: 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ
  3. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಹೊಸ ನೀತಿ ಮತ್ತು ಕಾನೂನು
  4. ಗುತ್ತಿಗೆ ಆಧಾರಿತ ಅಥವಾ ಅರೆಕಾಲಿಕ ಉದ್ಯೋಗಿಗಳ ರಕ್ಷಣೆ
  5. ಯುವ ರೋಷನಿ: ಯುವಸಮುದಾಯದವರಿಗೆ 5,000 ಕೋಟಿ ರೂಗಳ ಸ್ಟಾರ್ಟಪ್ ಫಂಡ್

ಲೋಕಸಭಾ ಚುನಾವಣೆ: ಕಾಂಗ್ರೆಸ್​ನ ನಾರಿ ನ್ಯಾಯ

  1. ಮಹಾಲಕ್ಷ್ಮೀ: ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೂ ವರ್ಷಕ್ಕೆ 1 ಲಕ್ಷ ರೂ ಧನಸಹಾಯ
  2. ಕೇಂದ್ರ ಸರ್ಕಾರದ ಹೊಸ ಉದ್ಯೋಗ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ
  3. ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚಿನ ಸಂಬಳ
  4. ಅಧಿಕಾರ ಮೈತ್ರಿ: ಪ್ರತಿಯೊಂದು ಪಂಚಾಯಿತಿಯಲ್ಲೂ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಕಾನೂನು ಹಕ್ಕುಗಳ ಬಗ್ಗೆ ಮಾಹಿತಿ ಕೊಡುವ ಅಧಿಕಾರಸಖಿಗಳ ಲಭ್ಯತೆ
  5. ಸಾವಿತ್ರಿಬಾಯಿ ಫುಲೆ ಹಾಸ್ಟಲ್: ಉದ್ಯೋಗಸ್ಥ ಮಹಿಳೆಯರಿಗೆ ಈ ಹಾಸ್ಟಲ್ ಸಂಖ್ಯೆ ಎರಡು ಪಟ್ಟು ಹೆಚ್ಚಿಸಲಾಗುವುದು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಬಿಜೆಪಿಗೆ ಸೇರ್ಪಡೆ: ಸುಮಲತಾ

ಲೋಕಸಭಾ ಚುನಾವಣೆ: ಕಾಂಗ್ರೆಸ್​ನ ರೈತ ನ್ಯಾಯ

  1. ನ್ಯಾಯ ಬೆಲೆ: ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಎಂಎಸ್​ಪಿಗೆ ಕಾನೂನು ಗ್ಯಾರಂಟಿ ನೀಡಲಾಗುವುದು.
  2. ಸಾಲ ಮನ್ನಾ ಜಾರಿಗೊಳಿಸಲು ಖಾಯಂ ಆಯೋಗ ರಚನೆ
  3. ಬೆಳೆ ವಿಮೆ ಮಾಡಿಸಿದವರಿಗೆ ಬೆಳೆ ನಷ್ಟವಾದರೆ ಪರಿಹಾರ ಹಣವನ್ನು 30 ದಿನದೊಳಗೆ ನೇರವಾಗಿ ಖಾತೆಗೆ ಹಾಕಲಾಗುತ್ತದೆ.
  4. ಆಮದು ರಫ್ತು ನೀತಿ: ರೈತರ ಸಲಹೆ ಪಡೆದು ಹೊಸ ಆಮದು ಮತ್ತು ರಫ್ತು ನೀತಿ ರೂಪಿಸಲಾಗುವುದು.
  5. ಕೃಷಿಗಾರಿಕೆಯಲ್ಲಿ ಜಿಎಸ್​ಟಿಯಿಂದ ಮುಕ್ತಗೊಳಿಸಲಾಗುವುದು. ಯಾವುದಕ್ಕೂ ತೆರಿಗೆ ಇರುವುದಿಲ್ಲ.

ಲೋಕಸಭಾ ಚುನಾವಣೆ: ಕಾಂಗ್ರೆಸ್​ನ ಕಾರ್ಮಿಕ ನ್ಯಾಯ

  1. ಮನ್​ರೇಗಾ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರಿಗೂ 400 ರೂ ದಿನಗೂಲಿ
  2. ಸರ್ವರಿಗೂ ಆರೋಗ್ಯ ಹಕ್ಕು: ಪ್ರತಿಯೊಬ್ಬರಿಗೂ 25 ಲಕ್ಷ ರೂ ಆರೋಗ್ಯ ವಿಮೆ: ಉಚಿತ ಚಿಕಿತ್ಸೆ, ಆಸ್ಪತ್ರೆ, ವೈದ್ಯ, ಔಷಧ, ಪರೀಕ್ಷೆ, ಸರ್ಜರಿ ಇತ್ಯಾದಿ ವೆಚ್ಚವನ್ನೂ ಭರಿಸಲಾಗುತ್ತದೆ.
  3. ನಗರ ಉದ್ಯೋಗ ಗ್ಯಾರಂಟಿ: ಮನ್​ರೇಗಾದಂತಹ ಹೊಸ ಯೋಜನೆಗಳನ್ನು ನಗರಗಳಲ್ಲೂ ತರಲಾಗುವುದು.
  4. ಸಾಮಾಜಿಕ ಭದ್ರತೆ: ಅಸಂಘಟಿತ ವಲಯದ ಕಾರ್ಮಿಕರಿಗೆ ಲೈಫ್ ಇನ್ಷೂರೆನ್ಸ್ ಮತ್ತು ಆ್ಯಕ್ಸಿಡೆಂಟ್ ಇನ್ಷೂರೆನ್ಸ್.
  5. ಉದ್ಯೋಗ ಭದ್ರತೆ: ಮುಖ್ಯ ಸರ್ಕಾರಿ ಕಾರ್ಯಗಳಿಗೆ ಗುತ್ತಿಗೆ ಆಧಾರಿತ ವೇತನ ನಿಲ್ಲಿಸಲಾಗುವುದು.

ಇದನ್ನೂ ಓದಿ: ರಾಹುಲ್ ಗಾಂಧಿ ಇಂದು ವಯನಾಡಿನಲ್ಲಿ ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ: ಕಾಂಗ್ರೆಸ್​ನ ಸಮಾನತೆ ನ್ಯಾಯ

  1. ಪ್ರತಿಯೊಂದು ವರ್ಗ, ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತೆ ಮಾಡಲಾಗುವುದು.
  2. ಸಂವಿಧಾನಿಕ ತಿದ್ದುಪಡಿ ತರುವ ಮೂಲಕ ಶೇ. 50ರಷ್ಟಿರುವ ಮೀಸಲಾತಿ ಮಿತಿಯನ್ನು ತೆಗೆದು, ಎಸ್​ಎಸ್ ಎಸ್​ಟಿ ಒಬಿಸಿ ವರ್ಗದವರಿಗೆ ಸಂಪೂರ್ಣ ಮೀಸಲಾತಿ ಹಕ್ಕು ನೀಡಲಾಗುವುದು.
  3. ಎಸ್​ಸಿ ಎಸ್​ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್​ನಲ್ಲಿ ಅವರಿಗೆ ಹೆಚ್ಚು ಪಾಲು.
  4. ಜಲ, ಅರಣ್ಯ ಮತ್ತು ಭೂಮಿಯ ಕಾನೂನು ಹಕ್ಕು: ಅರಣ್ಯ ಹಕ್ಕು ಕಾಯ್ದೆ ಅಡಿ ಒಂದು ವರ್ಷಕ್ಕೆ ಗುತ್ತಿಗೆಗಳನ್ನು ನೀಡಲು ನಿರ್ಧರಿಸಲಾಗುವುದು.
  5. ನಮ್ಮ ಭೂಮಿ ನಮ್ಮ ಆಡಳಿತ: ಪರಿಶಿಷ್ಟ ಪಂಗಡದವರ ಸಂಖ್ಯೆ ಹೆಚ್ಚಿರುವ ಕಡೆ PESA ಜಾರಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Wed, 3 April 24