AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಕೊನೆಯ ಎಪಿಸೋಡ್​ನಲ್ಲಿ ವಿನ್ನರ್​ ಘೋಷಿಸಿದ ಸುದೀಪ್​; ಅಚ್ಚರಿ ಮೂಡಿಸಿದ ಕಿಚ್ಚನ ಮಾತು

Bigg Boss Kannada 8 Winner: ಪ್ರತಿಬಾರಿ ಬಿಗ್​ ಬಾಸ್​ ಕೊನೆಯ ದಿನ ಗ್ರ್ಯಾಂಡ್​ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ.

ಬಿಗ್​ ಬಾಸ್​ ಕೊನೆಯ ಎಪಿಸೋಡ್​ನಲ್ಲಿ ವಿನ್ನರ್​ ಘೋಷಿಸಿದ ಸುದೀಪ್​; ಅಚ್ಚರಿ ಮೂಡಿಸಿದ ಕಿಚ್ಚನ ಮಾತು
ಕಿಚ್ಚ ಸುದೀಪ್​
ರಾಜೇಶ್ ದುಗ್ಗುಮನೆ
|

Updated on: May 12, 2021 | 3:57 PM

Share

 ಕನ್ನಡ ಬಿಗ್​ ಬಾಸ್ ಸೀಸನ್​ 8 ಶೋನ​ ಕೊನೆಯ ದಿನ ಏನೆಲ್ಲ ಆಯಿತು ಎಂಬುದನ್ನು ಕಲರ್ಸ್​ ಕನ್ನಡ ವಾಹಿನಿ ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡುತ್ತಿದೆ. ಇಂದು (ಮೇ 12) ಕೊನೆಯ ಎಪಿಸೋಡ್​ ಪ್ರಸಾರವಾಗುತ್ತಿದೆ. ಬಿಗ್​ ಬಾಸ್​ ಶೋ ಸುದೀಪ್​ ಮಾತಿಲ್ಲದೆ ಕೊನೆಗೊಳ್ಳುವುದೇ ಇಲ್ಲ. ಸೀಸನ್​ 8 ಅರ್ಧಕ್ಕೆ ನಿಂತರೂ ಕೊನೆಯಲ್ಲಿ ಸುದೀಪ್​ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅವರು ಕುತೂಹಲ ಎನಿಸುವ ಮಾತೊಂದನ್ನು ಹೇಳಿದ್ದಾರೆ.

ಕೊರೊನಾ ವೈರಸ್ ಎರಡನೇ ಅಲೆ​ ಮಿತಿಮೀರಿದ್ದರಿಂದ ಬಿಗ್​ ಬಾಸ್​ ಶೋ ನಿಲ್ಲಿಸುವುದಾಗಿ ಕಲರ್ಸ್​ ಕನ್ನಡ ವಾಹಿನಿ ಶನಿವಾರ ಘೋಷಣೆ ಮಾಡಿತ್ತು. ಭಾನುವಾರ ಶೂಟ್​ ಮಾಡಲಾದ ಕೊನೆಯ ದಿನದ ಎಪಿಸೋಡ್​ನ ಕೆಲ ಪ್ರಮುಖ ಘಟನೆಗಳನ್ನು ಮಂಗಳವಾರ ಪ್ರಸಾರ ಮಾಡಲಾಗಿದೆ. ಬುಧವಾರವೂ ಇದು ಮುಂದುವರಿಯಲಿದೆ.

ಪ್ರತಿಬಾರಿ ಬಿಗ್​ ಬಾಸ್​ ಕೊನೆಯ ದಿನ ಗ್ರ್ಯಾಂಡ್​ ಆಗಿ ಫಿನಾಲೆ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗುತ್ತಿರುವುದರಿಂದ ಯಾವುದೇ ರೀತಿಯ ಸಂಭ್ರಮ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೊನೆಯ ದಿನದ ಕಾರ್ಯಕ್ರಮವನ್ನು ಮಾಡಲಾಗಿದೆ. ಕೊನೆಯ ದಿನ ಸುದೀಪ್​ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಅಚ್ಚರಿ ವಿಚಾರವೊಂದಿತ್ತು.

ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಸುದೀಪ್​ ಮಾತನಾಡಿದ್ದಾರೆ. ಎಲ್ಲರಿಗೂ ಕಿಚ್ಚನ ನಮಸ್ಕಾರ. ಒಂದೆರಡು ವಾರ ಕಾಲ ನಾನು ಬರಲಿಲ್ಲ. ಆಮೇಲೆ ಪ್ರೋಟೋಕಾಲ್​ ಇರುವ ಕಾರಣ ಶೋ ನಡೆಸೋಕೆ ಆಗಿಲ್ಲ. ಈ ಪರಿಸ್ಥಿತಿಯಿಂದ ನನಗೆ ಬಹಳ ಬೇಸರವಾಗುತ್ತಿದೆ. ನನ್ನ ಪ್ರಕಾರ ನೀವೆಲ್ಲರೂ ವಿನ್ನರ್​ಗಳು ಎಂದು ಸುದೀಪ್​ ಹೇಳಿದ್ದಾರೆ.

ಕಳೆದ ಬಾರಿ ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಮಲಯಾಳಂ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆ ವೇಳೆ ಅಲ್ಲಿ ವಿನ್ನರ್​ ಯಾರು ಎಂಬುದನ್ನು ಘೋಷಣೆ ಮಾಡಿರಲಿಲ್ಲ. ಈಗ ಕನ್ನಡ ಬಿಗ್​ ಬಾಸ್​ ಸೀಸನ್​ 8 ಕೂಡ ಅದೇ ರೀತಿಯಲ್ಲಿ ಅಂತ್ಯಕಂಡಿದೆ. ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಿವಿ ಮೂಲಕ ತೋರಿಸಲಾಯಿತು. ಅಲ್ಲದೆ, ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ ಎಂಬುದನ್ನು ಘೋಷಿಸಲಾಗಿದೆ.

ಇದನ್ನೂ ಓದಿ: Manju Pavagada: ಉಳಿದವರು ಸೆಟಲ್​ ಆಗಿರಬಹುದು, ಆದರೆ ನನ್ನ ಜೀವನ ಹಾಗಲ್ಲ; ಇದು ಮಂಜು ದುರಾದೃಷ್ಟ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?