ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ

Aishwarya Rai: ಮುಂಬೈ ಇವೆಂಟ್​​ನಲ್ಲಿ ವೇದಿಕೆ ಮೇಲೆ ಮಣಿರತ್ನಂ, ಐಶ್ವರ್ಯಾ ರೈ ಮೊದಲಾದವರು ಇದ್ದರು. ಮಣಿರತ್ನಂ ಅವರ ಮಾತನ್ನು ಕೇಳುತ್ತಿದ್ದಂತೆ ಅವರ ಕಾಲಿಗೆ ಐಶ್ವರ್ಯಾ ನಮಸ್ಕರಿಸಿದ್ದಾರೆ.

ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ
ಮಣಿರತ್ನಂ-ಐಶ್ವರ್ಯಾ ರೈ

Updated on: Apr 26, 2023 | 10:28 AM

‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ (Ponniyin Selvan: 2) ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಮ್, ತ್ರಿಷಾ, ಜಯಮ್ ರವಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಎಲ್ಲ ಕಡೆಗಳಲ್ಲಿ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಮುಂಬೈನಲ್ಲಿ ಮಂಗಳವಾರ (ಏಪ್ರಿಲ್ 25) ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ವೇಳೆ ನಿರ್ದೇಶಕ ಮಣಿರತ್ನಂ ಕಾಲನ್ನು ಮುಟ್ಟಿ ಐಶ್ವರ್ಯಾ ರೈ ಅವರು ಆಶೀರ್ವಾದ ಪಡೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಮಣಿರತ್ನಂ ಬಗ್ಗೆ ಐಶ್ವರ್ಯಾ ರೈಗೆ (Aishwarya Rai) ವಿಶೇಷ ಗೌರವ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

1997ರಲ್ಲಿ ರಿಲೀಸ್ ಆದ ‘ಇರುವರ್’ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಇತ್ತು. ಇದರಲ್ಲಿ ಐಶ್ವರ್ಯಾ ರೈ ನಟಿಸಿದ್ದರು. 2007ರಲ್ಲಿ ಬಂದ ‘ಗುರು’ ಸಿನಿಮಾ ಸೂಪರ್ ಹಿಟ್ ಆಯಿತು. ಅಭಿಷೇಕ್​ ಬಚ್ಚನ್-ಐಶ್ವರ್ಯಾ ರೈ ಒಟ್ಟಾಗಿ ನಟಿಸಿದ ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಇತ್ತು. ಬಳಿಕ ಐಶ್ವರ್ಯಾ ಹಾಗೂ ಮಣಿರತ್ನಂ ಅವರು ‘ರಾವಣ್​’, ‘ಪೊನ್ನಿಯಿನ್​ ಸೆಲ್ವನ್ 1’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದರು. ಈಗ ಈ ಚಿತ್ರದ ಸೀಕ್ವೆಲ್​​ ಕೂಡ ಸಿದ್ಧಗೊಂಡಿದೆ. ಮಣಿರತ್ನಂ ಹಾಗೂ ಐಶ್ವರ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ.

ಮುಂಬೈ ಇವೆಂಟ್​​ನಲ್ಲಿ ವೇದಿಕೆ ಮೇಲೆ ಮಣಿರತ್ನಂ, ಐಶ್ವರ್ಯಾ ರೈ ಮೊದಲಾದವರು ಇದ್ದರು. ಮಣಿರತ್ನಂ ಅವರ ಮಾತನ್ನು ಕೇಳುತ್ತಿದ್ದಂತೆ ಅವರ ಕಾಲಿಗೆ ಐಶ್ವರ್ಯಾ ನಮಸ್ಕರಿಸಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: Aishwarya Rai: ‘ಪೊನ್ನಿಯಿನ್ ಸೆಲ್ವನ್ 2’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಮಿಂಚಿದ ಐಶ್ವರ್ಯಾ ರೈ; ಇಲ್ಲಿವೆ ಫೋಟೋಸ್

‘ಸಿನಿಮಾ ಮಾಡುವವರು ತುಂಬಾನೇ ಸ್ವಾರ್ಥಿಗಳು. ಅವರು ಕಾಳಜಿ ವಹಿಸುವ ಏಕೈಕ ವಿಷಯವೆಂದರೆ ಅದು ಸಿನಿಮಾ. ಅದೇನೇ ಇರಲಿ, ನನಗೆ ಐಶ್ವರ್ಯಾ ಅವರನ್ನು ಕಂಡರೆ ವಿಶೇಷ ಪ್ರೀತಿ ಇದೆ. ಅವರು ಪಾತ್ರಕ್ಕೆ ಸೂಕ್ತ ಎನಿಸಿದರೆ ಮಾತ್ರ ನಾನು ಅವರನ್ನು ಕೇಳುತ್ತೇನೆ. ಅವರು ಎಂದಿಗೂ ನೋ ಎಂದಿಲ್ಲ’ ಎಂದಿದ್ದಾರೆ ಮಣಿರತ್ನಂ.

ಐಶ್ವರ್ಯಾ ರೈ ಅವರು ಮದುವೆ ಬಳಿಕ ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ತಮ್ಮ ಪಾಲಿಗೆ ಬಂದ ಎಲ್ಲಾ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾನ ಅವರು ಒಪ್ಪಿ ನಟಿಸುತ್ತಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us