ವಿಜಯ್ ಸೂಟು-ಸ್ಟಾಲಿನ್ ಪಂಚೆ: ಅಣ್ಣಾಮಲೈ ಸಖತ್ ಟಾಂಗ್

Thalapathy Vijay-K Annamalai: ರಾಜಕಾರಣಿಗಳು, ಬಿಳಿ ಬಣ್ಣದ ಶರ್ಟ್ ಪಂಚೆ ಅಥವಾ ಧೋತಿಗಳನ್ನು ಉಡುವುದು ರೂಢಿ ಆದರೆ ವಿಜಯ್ ಅವರ ಸಂಪ್ರದಾಯ ಮರಿದು ಕಪ್ಪು ಬಣ್ಣದ ಸೂಟು, ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿ ಬಂದಿದ್ದರು. ಈ ಬಗ್ಗೆ ತಮಿಳುನಾಡು ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇದೀಗ ತಮಿಳುನಾಡಿ ಬಿಜೆಪಿ ಮುಖಂಡ ಅಣ್ಣಾಮಲೈ ವಿಜಯ್ ಸೂಟನ್ನು ಸ್ಟಾಲಿನ್ ಅವರ ಪಂಚೆಯೊಂದಿಗೆ ಹೋಲಿಸಿ ತಮಾಷೆ ಮಾಡಿದ್ದು, ಅಣ್ಣಾಮಲೈ ಅವರ ಟೀಕೆ ಬಹಳ ರಚನಾತ್ಮಕವಾಗಿದೆ.

ವಿಜಯ್ ಸೂಟು-ಸ್ಟಾಲಿನ್ ಪಂಚೆ: ಅಣ್ಣಾಮಲೈ ಸಖತ್ ಟಾಂಗ್
Vijay Stalin Annamalai

Updated on: May 12, 2026 | 12:29 PM

ದಳಪತಿ ವಿಜಯ್ (Thalapathy Vijay) ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 60 ವರ್ಷಗಳ ಡಿಎಂಕೆ ಮತ್ತು ಎಐಎಡಿಎಂಕೆಯ ಸತತ ಪ್ರಾಬಲ್ಯವನ್ನು ವಿಜಯ್ ಮುರಿದಿದ್ದಾರೆ. ವಿಜಯ್ ಅವರು ತಮ್ಮ ಪ್ರಮಾಣ ವಚನಕ್ಕೆ ಕಪ್ಪು ಬಣ್ಣದ ಸೂಟು ಧರಿಸಿ ಆಗಮಿಸಿದ್ದರು. ಸಾಮಾನ್ಯವಾಗಿ ರಾಜಕಾರಣಿಗಳು, ಬಿಳಿ ಬಣ್ಣದ ಶರ್ಟ್ ಪಂಚೆ ಅಥವಾ ಧೋತಿಗಳನ್ನು ಉಡುವುದು ರೂಢಿ ಆದರೆ ವಿಜಯ್ ಅವರ ಸಂಪ್ರದಾಯ ಮರಿದು ಕಪ್ಪು ಬಣ್ಣದ ಸೂಟು, ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿ ಬಂದಿದ್ದರು. ಈ ಬಗ್ಗೆ ತಮಿಳುನಾಡು ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಇದೀಗ ತಮಿಳುನಾಡಿ ಬಿಜೆಪಿ ಮುಖಂಡ ಅಣ್ಣಾಮಲೈ ವಿಜಯ್ ಸೂಟನ್ನು ಸ್ಟಾಲಿನ್ ಅವರ ಪಂಚೆಯೊಂದಿಗೆ ಹೋಲಿಸಿ ತಮಾಷೆ ಮಾಡಿದ್ದು, ಅಣ್ಣಾಮಲೈ ಅವರ ಟೀಕೆ ಬಹಳ ರಚನಾತ್ಮಕವಾಗಿದೆ.

ಅಣ್ಣಾಮಲೈ ಅವರು ಯುಎಸ್​​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಒಂದೇ ವಾಕ್ಯದಲ್ಲಿ ತಮಿಳುನಾಡಿನ ಕುಟುಂಬ ರಾಜಕಾರಣ ಮತ್ತು ವಿಜಯ್ ಅವರ ಮುಂದಿರುವ ಸವಾಲುಗಳ ಬಗ್ಗೆ ತಮಾಷೆಯ ಧಾಟಿಯಲ್ಲಿ ವಿವರಿಸಿದರು. ‘1970ರಲ್ಲಿ ತಮಿಳುನಾಡಿನ ಪ್ರವಾಹದ ಒಂದು ಜನಪ್ರಿಯ ಫೊಟೊ ಇದೆ, ಫೋಟೊನಲ್ಲಿ ಕರುಣಾನಿಧಿ ಅವರು ಪ್ರವಾಹದ ನೀರಿನಲ್ಲಿ ತಮ್ಮ ಪಂಚೆಯನ್ನು ಮೊಳಕಾಲಿನ ವರೆಗೆ ಎತ್ತಿಕೊಂಡು ನಡೆಯುತ್ತಿದ್ದಾರೆ. ಬಳಿಕ 2000 ರಲ್ಲಿ ಪ್ರಹಾವದಲ್ಲಿ ಅವರ ಮಗ ಸ್ಟಾಲಿನ್ (ಮಾಜಿ ಸಿಎಂ) ಅವರು ಪ್ರವಾಹದ ನೀರಿನಲ್ಲಿ ಪಂಚೆ ಎತ್ತಿ ನಡೆಯುತ್ತಿರುವ ಫೋಟೊ ಸಹ ಇದೆ. ಇತ್ತೀಚೆಗೆ ಬಂದ ಪ್ರವಾಹದಲ್ಲಿ ಸ್ಟಾಲಿನ್ ಅವರ ಮಗ ಉದಯನಿಧಿ (ಮಾಜಿ ಡಿಸಿಎಂ) ಪ್ರವಾಹದ ನೀರಿನಲ್ಲಿ ನಿಂತಿರುವ ಫೋಟೊ ಇದೆ. ಈಗ ವಿಜಯ್ ಅವರ ಸೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಪ್ರವಾಹದ ನೀರಿನಲ್ಲಿ ಹೇಗೆ ನಡೆಯುತ್ತಾರೆಯೋ ನೋಡಬೇಕು’ ಎಂದಿದ್ದಾರೆ.

ಇದನ್ನೂ ಓದಿ:‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್

ಮೇಲ್ನೋಟಕ್ಕೆ ಇದು ವಿಜಯ್ ಅವರು ಸೂಟು ಧರಿಸಿ ಸಿಎಂ ಆಗಿದ್ದಾರೆ ಅವರು ಪ್ರವಾಹದ ಸಮಯದಲ್ಲಿ ನೀರಿಗಿಳಿಯುವುದು ಕಷ್ಟವಾಗುತ್ತದೆ ಅಥವಾ ನೀರಿಗೆ ಇಳಿಯಲಾರರೇನೋ ಎಂದು ಅಣ್ಣಾಮಲೈ ಹೇಳಿದಂತೆ ತೋರುತ್ತಿದೆ. ಆದರೆ ಅಣ್ಣಾಮಲೈ ಅವರು ತಮಿಳುನಾಡಿನ ಕುಟುಂಬ ರಾಜಕಾರಣ ಮತ್ತು ಅವರು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವ ರೀತಿ ಹಾಗೂ ವಿಜಯ್ ಅವರ ಮುಂದಿರುವ ಸವಾಲುಗಳ ಬಗ್ಗೆ ಹೇಳಿದ್ದಾರೆ.

ಕಳೆದ 50 ವರ್ಷದಿಂದಲೂ ಚೆನ್ನೈನಲ್ಲಿ ಪ್ರವಾಹಗಳು ಬರುತ್ತಲೇ ಇವೆ. ಕರುಣಾನಿಧಿ, ಅವರ ಬಳಿಕ ಸ್ಟಾಲಿನ್, ಅವರ ಜೊತೆಗೆ ಉದಯನಿಧಿ ಸ್ಟಾಲಿನ್ ಅವರುಗಳು ಪ್ರವಾಹದ ಸಮಯದಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆಯೇ ಹೊರತು ಆ ಪ್ರವಾಹದಿಂದ ಆಗುತ್ತಿರುವ ಹಾನಿಯನ್ನು ತಡೆಯಲು ಅವರಿಗೆ ಸಾಧ್ಯವಾಗಿಲ್ಲ. ಈಗ ವಿಜಯ್ ಅವರ ಮುಂದೆ ಅದೇ ಸವಾಲು ಇದೆ, ಅದನ್ನು ಅವರು ಹೇಗೆ ಎದುರಿಸುತ್ತಾರೋ ನೋಡಬೇಕಿದೆ ಎಂಬ ಒಳ ಅರ್ಥ ಅಣ್ಣಾಮಲೈ ಅವರ ಮಾತುಗಳಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us