ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ

ಪ್ರಥಮ್​, ಸಿಹಿಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ತಮ್ಮದೇ ಆದಂತಹ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಈಗ ಹೊಸ ಕಾರ್ಯಕ್ರಮದ ಸಲುವಾಗಿ ಈ ಮೂವರು ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ
ಸಿಹಿಕಹಿ ಚಂದ್ರು, ಪ್ರಥಮ್​, ಅಕುಲ್​ ಬಾಲಾಜಿ
Edited By: ಆಯೇಷಾ ಬಾನು

Updated on: Mar 15, 2021 | 6:42 AM

ಕಿರುತೆರೆಯಲ್ಲಿ ಒಂದೆಡೆ ಧಾರಾವಾಹಿಗಳು ಸದ್ದು ಮಾಡಿದರೆ, ಇನ್ನೊಂದೆಡೆ ನಾನ್​-ಫಿಕ್ಷನ್​ ಶೋಗಳು ಗಮನ ಸೆಳೆಯುತ್ತವೆ. ಈ ಎರಡೂ ವಿಭಾಗಗಳ ನಡುವೆ ಯಾವಾಗಲೂ ಒಂದು ಬಗೆಯ ಪೈಪೋಟಿ ಇದ್ದೇ ಇರುತ್ತದೆ. ಈಗ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೊಸದೊಂದು ಕಾರ್ಯಕ್ರಮ ಶುರು ಆಗುತ್ತಿದೆ. ಅದರಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂವರಿಗೂ ಕಿರುತೆರೆ ಹೊಸದೇನಲ್ಲ. ಸಿಹಿ-ಕಹಿ ಚಂದ್ರು ಮತ್ತು ಅಕುಲ್​ ಬಾಲಾಜಿ ಅವರು ಅನೇಕ ಕಾರ್ಯಕ್ರಮಗಳ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಪ್ರಥಮ್​ ಕೂಡ ಬಿಗ್​ ಬಾಸ್​, ‘ಸಂಜು ಮತ್ತು ನಾನು’ ಮುಂತಾದ ಕಾರ್ಯಕ್ರಮಗಳ ಮೂಲಕ ಕಿರುತೆರೆ ಜೊತೆ ಒಡನಾಟ ಬೆಳೆಸಿಕೊಂಡಿದ್ದಾರೆ. ಈ ಮೂವರಿಗೆ ತಮ್ಮದೇ ಆದಂತಹ ಫ್ಯಾನ್​ ಫಾಲೋಯಿಂಗ್​ ಇದೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಈ ಮೂವರು ಒಂದಾಗುತ್ತಿದ್ದಾರೆ.

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ‘ಕುಕ್ಕು ವಿಥ್​ ಕಿರಿಕ್ಕು’ ಎಂಬ ಕಾರ್ಯಕ್ರಮ ಶೀಘ್ರದಲ್ಲೇ ಶುರು ಆಗಲಿದೆ. ಇದೊಂದು ಅಡುಗೆ ಕಾರ್ಯಕ್ರಮ ಆಗಿದ್ದರೂ ಕೂಡ ಇದರ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಭಾಗವಹಿಸಲಿದ್ದಾರೆ. ಬಗೆಬಗೆಯ ಅಡುಗೆ ಮಾಡುವುದರ ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿ ಕೂಡ ಇರಲಿದೆ ಎಂಬುದು ವಿಶೇಷ.

ಸದ್ಯಕ್ಕೆ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ರಿಲೀಸ್​ ಆಗಿದೆ. ಸಖತ್​ ಕಲರ್​ಫುಲ್​ ಆಗಿ ಮೂಡಿಬಂದಿರುವ ಈ ಪ್ರೋಮೋ ನೋಡಿದ ಬಳಿಕ ವೀಕ್ಷಕರಲ್ಲಿ ಕೌತುಕ ಹೆಚ್ಚಿದೆ. ಈಗಾಗಲೇ ಬೊಂಬಾಟ್​ ಬೋಜನ ಕಾರ್ಯಕ್ರಮದ ಮೂಲಕ ಅನೇಕ ಅಡುಗೆಗಳನ್ನು ವೀಕ್ಷಕರಿಗೆ ಪರಿಚಯಿಸಿರುವ ಸಿಹಿ ಕಹಿ ಚಂದ್ರು ಅವರು ಈಗ ‘ಕುಕ್ಕು ವಿಥ್​ ಕಿರಿಕ್ಕು’ ಕಾರ್ಯಕ್ರಮದಲ್ಲಿ ಹೊಸದೇನನ್ನು ಹೇಳಿಕೊಡಲಿದ್ದಾರೆ? ಇಂಥ ಅಡುಗೆ ಶೋನಲ್ಲಿ ಅಕುಲ್​ ಬಾಲಾಜಿ ಮತ್ತು ಪ್ರಥಮ್​ಗೆ ಏನು ಕೆಲಸ? ಈ ಎಲ್ಲ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

Published On - 6:41 am, Mon, 15 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us