AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​

ಮುಂಬೈ: ಡ್ರಗ್ಸ್‌ ವಿವಾದ ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್‌ಗೂ ಕಂಟಕವಾಗುತ್ತಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತರ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್‌ ಪ್ರಕರಣ ಈಗ ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಬಾಲಿವುಡ್‌ನ ನಟಿ ಕಂಗನಾ ರನಾವತ್‌ ಈಗ ಬಾಲಿವುಡ್‌ನ ಸೂಪರ್ ‌ಸ್ಟಾರ್‌ಗಳಾದ ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌ ಮತ್ತು ವಿಕ್ಕಿ ಕೌಶಾಲ್‌ರ ಮೇಲೆ ಡ್ರಗ್ಸ್‌ ಸೇವನೆಯ ಪರೋಕ್ಷ ಆರೋಪ ಮಾಡಿದ್ದು, ಡ್ರಗ್ಸ್‌ ಟೆಸ್ಟ್‌ಗೆ ಒಳಗಾಗುವಂತೆ ಅವರಿಗೆ ಚಾಲೆಂಜ್‌ ಮಾಡಿದ್ದಾಳೆ. ಈ ಸಂಬಂಧ ತನ್ನ ಟ್ವೀಟರ್ […]

ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​
Follow us
Guru
| Updated By: ಸಾಧು ಶ್ರೀನಾಥ್​

Updated on: Sep 02, 2020 | 1:34 PM

ಮುಂಬೈ: ಡ್ರಗ್ಸ್‌ ವಿವಾದ ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್‌ಗೂ ಕಂಟಕವಾಗುತ್ತಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ನಂತರ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್‌ ಪ್ರಕರಣ ಈಗ ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ.

ಬಾಲಿವುಡ್‌ನ ನಟಿ ಕಂಗನಾ ರನಾವತ್‌ ಈಗ ಬಾಲಿವುಡ್‌ನ ಸೂಪರ್ ‌ಸ್ಟಾರ್‌ಗಳಾದ ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌ ಮತ್ತು ವಿಕ್ಕಿ ಕೌಶಾಲ್‌ರ ಮೇಲೆ ಡ್ರಗ್ಸ್‌ ಸೇವನೆಯ ಪರೋಕ್ಷ ಆರೋಪ ಮಾಡಿದ್ದು, ಡ್ರಗ್ಸ್‌ ಟೆಸ್ಟ್‌ಗೆ ಒಳಗಾಗುವಂತೆ ಅವರಿಗೆ ಚಾಲೆಂಜ್‌ ಮಾಡಿದ್ದಾಳೆ. ಈ ಸಂಬಂಧ ತನ್ನ ಟ್ವೀಟರ್ ಅಕೌಂಟ್‌ನಲ್ಲಿ ಕಂಗನಾ ಪೋಸ್ಟ್‌ ಮೂಲಕ ಈ ನಟರ ಮೇಲೆ ಗದಾ ಪ್ರಹಾರ ಮಾಡಿದ್ದಾಳೆ.

ಕಂಗನಾ ಕೇವಲ ಬಾಲಿವುಡ್‌ ನಟರ ಮೇಲೆ ಮಾತ್ರ ಗದಾ ಪ್ರಹಾರ ಮಾಡಿಲ್ಲ, ಮುಂಬೈ ಪೊಲೀಸರ ಮೇಲೂ ಡ್ರಗ್ಸ್‌ ದಂದೆ ಕುರಿತು ಆರೋಪ ಮಾಡಿದ್ದಾಳೆ. ಪೊಲೀಸ್‌ ಹೆಸರಿಗೆ ನೀವೊಬ್ಬ ಕಳಂಕ ಎಂದು ತನ್ನ ಟ್ವೀಟರ್‌ನಲ್ಲಿ ಮುಂಬೈ ಪೊಲೀಸ್‌ ಡಿಪಾರ್ಟ್‌ಮೆಂಟ್‌ಗೆ ಛೀಮಾರಿ ಹಾಕಿದ್ದಾಳೆ.

ಕಂಗನಾಳ ಈ ಓಪನ್‌ ಚಾಲೆಂಜ್‌ ಈಗ ಬಾಲಿವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹಲವಾರು ನೆಟ್ಟಿಗರು ಕಂಗನಾಳ ಈ ಓಪನ್‌ ಚಾಲೆಂಜ್‌ಗೆ ಬೆಂಬಲ ಕೂಡಾ ವ್ಯಕ್ತಪಡಿಸುತ್ತಿದ್ದಾರೆ. ಈ ಮೊದಲು ಸುಶಾಂತ್‌ ಸಾವಿನಲ್ಲಿ ಡ್ರಗ್ಸ್‌ ಪಾತ್ರವೂ ಇದೆ ಎಂಬ ಕಾರಣಕ್ಕೆ ಎನ್‌ಸಿಬಿ ಅಧಿಕಾರಿಗಳು ಹಲವರ ವಿಚಾರಣೆ ನಡೆಸುತ್ತಿದ್ದು, ಒಬ್ಬನನ್ನು ಅರೆಸ್ಟ್‌ ಕೂಡಾ ಮಾಡಿದ್ದಾರೆ.

ಈಗ ಕಂಗನಾ ರನವಾತ್‌ಳಂಥ ಟಾಪ್‌ ನಟಿ ನೇರವಾಗಿ ಸೂಪರ್‌ ಸ್ಟಾರ್‌ಗಳಿಗೆ ಚಾಲೆಂಜ್‌ ಮಾಡಿರೋದು ಬಾಲಿವುಡ್‌ನಲ್ಲಿ ಕೂಡಾ ಡ್ರಗ್ಸ್‌ ದಂಧೆ ಬೇರು ಮಟ್ಟದಲ್ಲಿ ನಡೆಯುತ್ತಿರೋದು ಈಗ ಕನ್ಫರ್ಮ್‌ ಆಗಿದೆ. ಯಾಕಂದ್ರೆ ಇದುವರೆಗೆ ಗುಸುಗುಸು ಮಾತಾಗಿದ್ದ ಡ್ರಗ್ಸ್‌ ಹಾವಳಿ ಈಗ ಖುಲ್ಲಂ ಖುಲ್ಲಾ ಆಗಿದ್ದು ಇನ್ನು ಯಾವ ಯಾವ ತಿಮಿಂಗಲುಗಳ ಹೆಸರು ಹೊರಗೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು