AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ […]

ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ
ಸಾಧು ಶ್ರೀನಾಥ್​
|

Updated on:Dec 22, 2019 | 2:13 PM

Share

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ.

ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಾಸುಕಿ ವೈಭವ್​ ಅವರ ಸಾಹಿತ್ಯ, ಕಾರ್ತಿಕ್​ ಎಸ್​ ಛಾಯಾಗ್ರಹಣ, ಸಾಯಿವಂಶಿ ಸಂಗೀತ, ಅನಿಲ್​ ಬಿಲ್ಲವ ಸಂಕಲನ ಚಿತ್ರಕ್ಕೆ ಇರಲಿದೆ.

ಜನವರಿ 1 ರಿಂದ ಚಿತ್ರೀಕರಣ ಪ್ರಾರಂಭ ಚಿತ್ರದ ಶೂಟಿಂಗ್​ಗೆ ಭರದ ಸಿದ್ಧತೆ ನಡೆದಿದ್ದು ಮುಂದಿನ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 30 ವರ್ಷಗಳ ಹಿಂದಿನ ಕಥೆಯನ್ನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರದ ಮೂಲಕ ತೆರೆ ಮೇಲೆ ತರುವ ಪ್ರಯತ್ನಕ್ಕೆ ನಿರ್ದೇಶಕ ಕೃಷ್ಣಮೂರ್ತಿ ಕೈ ಹಾಕಿದ್ದಾರೆ. 30 ವರ್ಷದ ಹಿಂದೆ ಹಳ್ಳಿ-ಹಳ್ಳಿಗಳಿಗೆ ಹೋಗಿ ನಾಟಕ ಮಾಡಿಕೊಂಡು ಜೀವನ ನಡೆಸುವವರ ರೀತಿ-ನೀತಿ, ಪದ್ಧತಿಯನ್ನ ಸಿನಿಮಾದಲ್ಲಿ ಎಳೆಎಳೆಯಾಗಿ ತೊರಿಸಲಾಗುತ್ತೆ.

12 ವರ್ಷದ ಬಾಲಕನ ತರಲೆ, 30 ವರ್ಷಗಳ ಹಿಂದಿನ ಬೆಳವಣಿಗೆಯನ್ನು ಹೊಂದಿದ್ದು, ಕಥೆಯ ಕೊನೆ ಕ್ಷಣದಲ್ಲಿ ಇವನ ಧೈರ್ಯ, ಸಾಹಸ ಜನರಿಗೆ ನಾಯಕತ್ವ ತೋರುತ್ತದೆ. ಊರಿನ ರಾಕ್ಷರ ಕೋಟೆಯೊಂದರಲ್ಲಿ ಸಿಲುಕಿ ಭಯದಿಂದ ಜೀವನ ದೂಡೂತ್ತಿದ್ದ ಜನರ ಪಾಲಿಗೆ 12 ವರ್ಷದ ಹುಡುಗನ ಆಗಮನ, ಅವನ ಧೈರ್ಯ, ಸಾಹಸ ಕಂಡು ಭಯದಲ್ಲಿದ್ದ ಜನರಿಗೆ ತಮ್ಮನ್ನು ರಕ್ಷಣೆ ಮಾಡಲು ಬಂದ ಹನುಮಾನ್​ ರೂಪದಲ್ಲಿ ಕಾಣುತ್ತಾನೆ. ಇದು ಗ್ರಾಮಸ್ಥರಲ್ಲಿ ವಿನಂತಿ ಚಿತ್ರದ ಕಥಾ ಸಾರಂಶವಾಗಿದೆ.

ಈ ಎಲ್ಲಾ ಸನ್ನಿವೇಶಗಳನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ ಒಂದು ಒಳ್ಳೆ ಸಂದೇಶದೊಂದಿಗೆ ಜನರ ಮುಂದೆ ತರಲು ಚಿತ್ರತಂಡ ಹೊರಟಿದೆ. ಚಿತ್ರತಂಡಕ್ಕೆ ನಾವು-ನೀವು ಆಲ್​ ದಿ ಬೆಸ್ಟ್​ ಹೋಳೋಣ, ಆಲ್​ ದಿ ಬೆಸ್ಟ್​ .. ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರತಂಡ.

Published On - 10:25 am, Sat, 21 December 19

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ