AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಬಿಐ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದಿವಂಗತ ನಟ ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿತು.  ತನಿಖಾಧಿಕಾರಿಗಳು, ಪ್ಲ್ಯಾಟ್‌ನಲ್ಲಿ ಸುಶಾಂತ್​ನೊಂದಿಗೆ ವಾಸವಿದ್ದ ಸಿದ್ಧಾರ್ಥ ಪಿತಾನಿ, ನಟನ ಅಡಿಗೆಯವ ನೀರಜ್ ಹಾಗೂ ಅಪಾರ್ಟ್​ಮೆಂಟ್ ಹೌಸ್​ಕೀಪಿಂಗ್​ ವಿಭಾಗದಲ್ಲಿ ಕೆಲಸ ಮಾಡುವ ದೀಪೇಶ್ ಅವರ ವಿಚಾರಣೆ ನಡೆಸಿದರು. ಜೂನ್ 13 ಮತ್ತು 14 ರಂದು ಫ್ಲ್ಯಾಟ್​ನಲ್ಲಿ ಏನು ನಡೆಯಿತೆನ್ನುವ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದರೆಂದು ತಿಳಿದು […]

ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಬಿಐ
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2020 | 4:26 PM

Share

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದಿವಂಗತ ನಟ ವಾಸವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿತು. 

ತನಿಖಾಧಿಕಾರಿಗಳು, ಪ್ಲ್ಯಾಟ್‌ನಲ್ಲಿ ಸುಶಾಂತ್​ನೊಂದಿಗೆ ವಾಸವಿದ್ದ ಸಿದ್ಧಾರ್ಥ ಪಿತಾನಿ, ನಟನ ಅಡಿಗೆಯವ ನೀರಜ್ ಹಾಗೂ ಅಪಾರ್ಟ್​ಮೆಂಟ್ ಹೌಸ್​ಕೀಪಿಂಗ್​ ವಿಭಾಗದಲ್ಲಿ ಕೆಲಸ ಮಾಡುವ ದೀಪೇಶ್ ಅವರ ವಿಚಾರಣೆ ನಡೆಸಿದರು. ಜೂನ್ 13 ಮತ್ತು 14 ರಂದು ಫ್ಲ್ಯಾಟ್​ನಲ್ಲಿ ಏನು ನಡೆಯಿತೆನ್ನುವ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದರೆಂದು ತಿಳಿದು ಬಂದಿದೆ.

ಏತನ್ಮಧ್ಯೆ, ಸುಶಾಂತ್ ಅವರ ಸಂಬಂಧಿಕ ಹಾಗೂ ಬಿಜೆಪಿ ಶಾಸಕರಾಗಿರುವ ನೀರಜ್ ಕುಮಾರ ಬಬ್ಲೂ, ‘‘ಸಿಬಿಐ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತಿದೆ,’’ ಎಂದು ಟ್ವೀಟ್ ಮಾಡಿದ್ದಾರೆ.