ಗೋಶಾಲೆಗೆ ಮೇವು ದಾನ: ಹುಟ್ಟುಹಬ್ಬ ಸರಳವಾಗಿ ಆಚರಿಸಲು ದಚ್ಚು ಮನವಿ

ಮಂಡ್ಯ: ಪ್ರಾಣಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೋಶಾಲೆಗೆ 15 ಟ್ರ್ಯಾಕ್ಟರ್ ಮೇವು ನೀಡಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆಗೆ ಸ್ವತಹ ಭೇಟಿ ನೀಡಿ ದರ್ಶನ್ ಮೇವು ನೀಡಿದ್ದಾರೆ. ದವಸ ಧಾನ್ಯ ತರಲು ದಾಸ ಮನವಿ: ಫೆ.16ರಂದು ದರ್ಶನ್ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ಸರಳ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಹುಟ್ಟುಹಬ್ಬದಂದು ಬ್ಯಾನರ್, ಕೇಕ್, ಹಾರಗಳನ್ನ ತರಬೇಡಿ. ಬದಲಿಗೆ ದವಸ ಧಾನ್ಯಗಳನ್ನ ನೀಡಿ. ಅಗತ್ಯ […]

ಗೋಶಾಲೆಗೆ ಮೇವು ದಾನ: ಹುಟ್ಟುಹಬ್ಬ ಸರಳವಾಗಿ ಆಚರಿಸಲು ದಚ್ಚು ಮನವಿ
ಸಾಧು ಶ್ರೀನಾಥ್​

Updated on: Jan 19, 2020 | 7:06 PM

ಮಂಡ್ಯ: ಪ್ರಾಣಿಗಳ ಮೇಲೆ ಅಪಾರ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಗೋಶಾಲೆಗೆ 15 ಟ್ರ್ಯಾಕ್ಟರ್ ಮೇವು ನೀಡಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿಯ ಚೈತ್ರಾ ಗೋಶಾಲೆಗೆ ಸ್ವತಹ ಭೇಟಿ ನೀಡಿ ದರ್ಶನ್ ಮೇವು ನೀಡಿದ್ದಾರೆ.

ದವಸ ಧಾನ್ಯ ತರಲು ದಾಸ ಮನವಿ:
ಫೆ.16ರಂದು ದರ್ಶನ್ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ಸರಳ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಹುಟ್ಟುಹಬ್ಬದಂದು ಬ್ಯಾನರ್, ಕೇಕ್, ಹಾರಗಳನ್ನ ತರಬೇಡಿ. ಬದಲಿಗೆ ದವಸ ಧಾನ್ಯಗಳನ್ನ ನೀಡಿ. ಅಗತ್ಯ ಇರೋರಿಗೆ ಅವುಗಳನ್ನು ತಲುಪಿಸುತ್ತೇನೆ ಎಂದು ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಲ್ಲಿ ದಚ್ಚು ಮನವಿ ಮಾಡಿದ್ದಾರೆ. ಇದಿಷ್ಟೇ ಅಲ್ಲದೆ ಹುಟ್ಟುಹಬ್ಬದ ದಿನ ಅನುಚಿತ ವರ್ತನೆ ಮೂಲಕ ಅಕ್ಕಪಕ್ಕದ ಮನೆಯವ್ರಿಗೆ ತೊಂದರೆ ಕೊಡಬಾರದೆಂದು ಸಹ ಮನವಿ ಮಾಡಿಕೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us