AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JNU ಆಯ್ತು ಈಗ ಹೊಸ ಸಂಕಷ್ಟ ಶುರುವಾಯ್ತು, ವಿವಾದದ ಸುಳಿಯಲ್ಲಿ ದೀಪಿಕಾ

ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಯಾಂಡಲ್​ವುಡ್​ನ ಐಶ್ವರ್ಯ, ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್​ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ […]

JNU ಆಯ್ತು ಈಗ ಹೊಸ ಸಂಕಷ್ಟ ಶುರುವಾಯ್ತು,  ವಿವಾದದ ಸುಳಿಯಲ್ಲಿ ದೀಪಿಕಾ
ಸಾಧು ಶ್ರೀನಾಥ್​
|

Updated on: Jan 19, 2020 | 1:21 PM

Share

ಯಾಕೋ ಸದ್ಯದ ಮಟ್ಟಿಗೆ ದೀಪಿಕಾ ಪಡುಕೋಣೆ ಟೈಂ ಸರಿಯಾಗಿಲ್ಲ ಅಂತಾ ಕಾಣುತ್ತೆ. ಆ ಕಡೆ ಬಹುನಿರೀಕ್ಷಿತ ಚಿತ್ರ ‘ಛಪಾಕ್’ ಮಕಾಡೆ ಮಲಗಿದ್ರೆ, ಇನ್ನೊಂದ್ಕಡೆ ಅದೇ ಸಿನಿಮಾದ ಪ್ರಮೋಷನ್ ಮಾಡೋಕೆ ಹೋಗಿ ಡಿಪ್ಪಿ ಎಡವಟ್ಟು ಮಾಡ್ಕೊಂಡಿದ್ದಾಳೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀಪಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಯಾಂಡಲ್​ವುಡ್​ನ ಐಶ್ವರ್ಯ, ಬಾಲಿವುಡ್​ನ ಪದ್ಮಾವತಿ ದೀಪಿಕಾ ಪಡುಕೋಣೆಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಿವೆ. ಅದ್ಯಾವಾಗ ಜೆಎನ್​ಯು ಹೋರಾಟ ನಡೆಯುತ್ತಿದ್ದ ಜಾಗಕ್ಕೆ ದೀಪಿಕಾ ಹೋಗಿ ಬಂದ್ರೋ, ಆಹೊತ್ತಿನಿಂದ ಇಲ್ಲಿಯವರೆಗೆ ದೀಪಿಕಾಗೆ ನೆಮ್ಮದಿಯೇ ಇಲ್ಲ. ಆಕಡೆ ‘ಛಪಾಕ್’ ಸಿನಿಮಾ ಮಕಾಡೆ ಮಲಗಿದೆ. ಇನ್ನು ಇದೇ ‘ಛಪಾಕ್’ ಚಿತ್ರಕ್ಕಾಗಿ ಪ್ರಮೋಷನ್ ಮಾಡಲು ಹೋಗಿ ದೀಪಿಕಾ ಎಡವಿದ್ದಾರೆ.

ಪ್ರಚಾರದ ಅಬ್ಬರದಲ್ಲಿ ದೀಪಿಕಾ ಎಡವಟ್ಟು! ಅಂದಹಾಗೆ ವಿಭಿನ್ನ ಕಥೆಯ ಮೂಲಕವೇ ಇಡೀ ಭಾರತ ಸಿನಿಮಾರಂಗದ ಗಮನ ಸೆಳೆದಿದ್ದ ಛಪಾಕ್ ಮೂವಿ, ಅಟ್ಟರ್ ಫ್ಲಾಪ್ ಆಗಿದೆ. ಅತ್ತ ಜನರಿಂದಲೂ ದೀಪಿಕಾ ಕೆಂಗಣ್ಣಿಗೆ ಗುರಿಯಾಗಿರುವಾಗಲೇ, ಇತ್ತ ಬಾಕ್ಸ್ ಆಫೀಸ್​ನಲ್ಲು ಸದ್ದು ಮಾಡುತ್ತಿಲ್ಲ. ಹೀಗಾಗಿ ಚಿತ್ರ ಬಿಡುಗಡೆಯಾಗಿ 1 ವಾರದ ನಂತರವೂ ಪ್ರಮೋಷನ್​ಗಾಗಿ ಡಿಪ್ಪಿ ಹೊಸದೊಂದು ಪ್ರಯತ್ನ ಮಾಡಿದ್ದರು. ಟಿಕ್​ಟಾಕ್ ಮೂಲಕ ಪ್ರಮೋಟ್ ಮಾಡಲು ಹೋಗಿದ್ದಾಗ, ಆಸಿಡ್ ಸಂತ್ರಸ್ತರಿಗೆ ಅವಮಾನ ಮಾಡಲಾಗಿದೆ ಅಂತಾ ದೀಪಿಕಾ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ.

ದೀಪಿಕಾ ಸಿನಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ? ಇನ್ನು ಈ ಘಟನೆಗಳೆಲ್ಲಾ ನೇರ ಪರಿಣಾಮ ಬೀರುತ್ತಿರೋದು ದೀಪಿಕಾ ಪಡುಕೋಣೆಯ ಸಿನಿ ಭವಿಷ್ಯದ ಮೇಲೆ. ಒಂದ್ಕಡೆ ಜಾಹೀರಾತು ಕಂಪೆನಿಗಳು ಕೂಡ ಹೆದರಿಕೊಂಡಿದ್ದರೆ, ಮುಂದೆ ದೀಪಿಕಾಗೆ ಬರುವ ಸಿನಿಮಾ ಆಫರ್​ಗಳಿಗೂ ಪ್ರಸಕ್ತ ಘಟನೆಗಳು ಎಫೆಕ್ಟ್ ಕೊಡುವ ಸಾಧ್ಯತೆ ದಟ್ಟವಾಗಿದೆ.

ಒಟ್ನಲ್ಲಿ ದೀಪಿಕಾ ಏನೋ ಮಾಡಲು ಹೋಗಿ ಏನೋ ಮಾಡ್ಕೊಂಡಿದ್ದಾರೆ. ಪ್ರಮೋಷನ್​ನಲ್ಲಿ ಮಾಡಿಕೊಂಡ ಯಡವಟ್ಟು ಮತ್ತೊಂದು ಎಫೆಕ್ಟ್ ಕೊಡುತ್ತಿದೆ. ಆದರೆ ಇದನ್ನೆಲ್ಲಾ ದೀಪಿಕಾ ಭವಿಷ್ಯದಲ್ಲಿ ಹೇಗೆ ಫೇಸ್ ಮಾಡುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು