AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್ ನನ್ನ ಆತ್ಮೀಯ, ಆತನನ್ನು Sir ಜೀ ಎಂದು ಹೇಗೆ ಕರೆಯಲಿ? ಅಷ್ಟಕ್ಕೇ..

ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಹಠಾತ್ ಅಗಲಿಕೆಯ ಬಳಿಕ ಬಾಲಿವುಡ್​ ಚಿತ್ರರಂಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಮಧ್ಯೆ ಒಂದು ಹಳೇ ಪ್ರಸಂಗ ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದು ಯಾವುದೆಂದರೆ ಬಾಲಿವುಡ್​ ದಂತಕಥೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಖ್ಯಾತ ಹಾಸ್ಯ ನಟ-ಸಂಭಾಷಣೆಕಾರ ಖಾದರ್​ ಖಾನ್​ರ ಸ್ನೇಹ ಮತ್ತು ವಿರಸ. 80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚುತ್ತಿದ್ದ ಅಮಿತಾಭ್​ ಮತ್ತು ತಮ್ಮ ಹರಿತವಾದ ಬರವಣಿಗೆಯಿಂದ ಫೇಮಸ್​ ಆಗಿದ್ದ ಸಂಭಾಷಣೆಕಾರ ಖಾದರ್​ ಖಾನ್ ನಡುವೆ […]

ಅಮಿತಾಭ್ ನನ್ನ ಆತ್ಮೀಯ, ಆತನನ್ನು Sir ಜೀ ಎಂದು ಹೇಗೆ ಕರೆಯಲಿ? ಅಷ್ಟಕ್ಕೇ..
KUSHAL V
| Edited By: |

Updated on:Jul 23, 2020 | 1:48 PM

Share

ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಹಠಾತ್ ಅಗಲಿಕೆಯ ಬಳಿಕ ಬಾಲಿವುಡ್​ ಚಿತ್ರರಂಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಮಧ್ಯೆ ಒಂದು ಹಳೇ ಪ್ರಸಂಗ ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದು ಯಾವುದೆಂದರೆ ಬಾಲಿವುಡ್​ ದಂತಕಥೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಖ್ಯಾತ ಹಾಸ್ಯ ನಟ-ಸಂಭಾಷಣೆಕಾರ ಖಾದರ್​ ಖಾನ್​ರ ಸ್ನೇಹ ಮತ್ತು ವಿರಸ.

80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚುತ್ತಿದ್ದ ಅಮಿತಾಭ್​ ಮತ್ತು ತಮ್ಮ ಹರಿತವಾದ ಬರವಣಿಗೆಯಿಂದ ಫೇಮಸ್​ ಆಗಿದ್ದ ಸಂಭಾಷಣೆಕಾರ ಖಾದರ್​ ಖಾನ್ ನಡುವೆ ಅಗಾಧವಾದ ಸ್ನೇಹವಿತ್ತು. ಅದೆಷ್ಟೋ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ದೋಸ್ತಿಗಳು ಸಾಕಷ್ಟು ಯಶಸ್ಸನ್ನೂ ಕಂಡಿದ್ದರು.

ಈ ಮಧ್ಯೆ ಒಂದು ಸಣ್ಣ ಘಟನೆ, ಒಂದು ಸಣ್ಣ ಅಪಾರ್ಥ ದೋಸ್ತಿಗಳ ನಡುವೆ ವಿರಸ ತಂದುಬಿಟ್ಟಿತು. ಈ ಬಗ್ಗೆ ಖುದ್ದು ಖಾದರ್​ ಖಾನ್​ರವರೇ ಟಿ.ವಿ. ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು. ಆ ಸಂದರ್ಶನದ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

‘ಅಮಿತ್ ಯಾವಾಗಿನಿಂದ Sir ಜೀ ಆದ?’ ನಾನು ಅಮಿತಾಭ್​ರನ್ನ ಯಾವಾಗಲೂ ಅಮಿತ್​ ಎಂದು ಅಕ್ಕರೆಯಿಂದ ಕರೆಯುತ್ತಿದ್ದೆ. ಅದೊಂದು ದಿನ ಚಿತ್ರವೊಂದರ ಶೂಟಿಂಗ್​ ವೇಳೆ ಸಿನಿಮಾದ ನಿರ್ಮಾಪಕರೊಬ್ಬರು.. ನನಗೆ ನೀವು Sir ಜೀ ರನ್ನ ಭೇಟಿಯಾದ್ರಾ ಅಂತಾ ಕೇಳಿದ್ರು. ನಾನು ಯಾವ Sir ಜೀ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ನಿಮಗೆ Sir ಜೀ ಯಾರೆಂದು ಗೊತ್ತಿಲ್ಲವೇ? ಎಂದು ಹೇಳಿ ಅನತಿ ದೂರದಲ್ಲಿದ್ದ ಅಮಿತಾಭ್​ ಕಡೆ ಸನ್ನೆ ಮಾಡಿದ್ದರು. ಆಗ ನಾನು ಅದು ಅಮಿತ್​. ಆತ ಯಾವಾಗಿನಿಂದ Sir ಜೀ ಎಂದು ಕರೆಸಿಕೊಳ್ಳಲು ಶುರುಮಾಡಿದ ಎಂದು ಹೇಳಿಬಿಟ್ಟೆ. ಅಷ್ಟೇ..

ಅಮಿತಾಭ್ ನನ್ನ ಆತ್ಮೀಯ. ಹೀಗಾಗಿ, ನನ್ನ ಮನಸ್ಸು ಅವರನ್ನ Sir ಜೀ ಎಂದು ಸಂಬೋಧಿಸಲು ಒಪ್ಪಲಿಲ್ಲ. ಆದರೆ, ಆ ಒಂದು ಮಾತೇ ನಮ್ಮಿಬ್ಬರ ಸ್ನೇಹ ಮುರಿಯಲು ಕಾರಣವಾಯ್ತು ಎಂದು ಖಾದರ್​ ಇದೀಗ ವಿಡಿಯೋದಲ್ಲಿ  ಹೇಳಿದ್ದಾರೆ.

ಇದೊಂದೇ ಮಾತಿಗೋ ಏನೋ ಗೊತ್ತಿಲ್ಲ.. ಚಿತ್ರರಂಗದಲ್ಲಿ ಖಾದರ್​ ಖಾನ್​ಗೆ ಇದ್ದ ಬಹುಬೇಡಿಕೆ ಕಾಲಕ್ರಮೇಣ ಕಡಿಮೆಯಾಗ್ತಾ ಹೋಯ್ತಂತೆ. ಸಾಕಷ್ಟು ಒಳ್ಳೇ ಅವಕಾಶಗಳನ್ನು ಸಹ ಕಳೆದುಕೊಂಡರಂತೆ. ಬಳಿಕ, ಇಬ್ಬರಿಗೂ ಮತ್ತೆ ಒಂದಾಗುವ ಸಂದರ್ಭವೇ ಒದಗಿಬರಲಿಲ್ಲವಂತೆ. ಒಟ್ನಲ್ಲಿ, ಒಂದು ಸಣ್ಣ ಅಪಾರ್ಥ ಅಥವಾ ಅಹಂ ಭಾವನೆಯಿಂದ ಬಾಲಿವುಡ್​ ಅತ್ಯುತ್ತಮ ಕೊಡುಗೆಯಿಂದ ವಂಚಿತವಾಗಿಬಿಡ್ತು.

ಖಾದರ್​ ಖಾನ್​ ಸಂದರ್ಶನದ ತುಣುಕು: https://www.facebook.com/watch/?v=2605881069652116

Published On - 11:39 am, Wed, 22 July 20

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ