AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುದುರೆ ಸವಾರಿ ಕಲಿಯಲು ಬಂದ ‘ಕಲಿವೀರ’ ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?

ಅದ್ಭುತ ಸಾಹಸಗಳಿಗೆ ಕೈ ಹಾಕಿ ರೀಯಲ್ ಆಗಿ ಸಾಹಸ ಮಾಡಿ ಸ್ಟಾರ್ ನಟರು ಬೆಚ್ಚಿ ಬೀಳುವಂತೆ ಪ್ರತಿಭೆ ಹೊಂದಿರೋ ಕಲಾವಿದ, ಯುವ ನಟ ಏಕಲವ್ಯ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು ಜೀವನೋಪಾಯಕ್ಕಾಗಿ ಕುದುರೆ ಫಾರ್ಮ್, ಕೋಳಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಬಂದ 'ಕಲಿವೀರ' ಸಿನಿಮಾದ ಹೀರೋ ಏಕಲವ್ಯ ಅಲ್ಲೇ ಕೆಲಸಗಾರನಾದ.. ಏಕೆ?
ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಏಕಲವ್ಯ
ಆಯೇಷಾ ಬಾನು
|

Updated on: Dec 21, 2020 | 3:04 PM

Share

ಬೆಂಗಳೂರು: ಕೊರೊನಾದಿಂದ ಜನ ಜೀವನವೇ ಬದಲಾಗಿದೆ. ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ಬಿಸಿ ತಟ್ಟಿದೆ. ಸದ್ಯ ಈಗ ದೇಶ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು ಕಲಾವಿದರಿಗೆ ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿಯಾಗಿದೆ.

ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ಚಂದ್ರು, ಏಕಲವ್ಯ ಅಂತಾನೇ ಫೇಮಸ್ ಆಗಿದ್ದಾನೆ. ಮೂಲತ: ರಾಣೆಬೆನ್ನೂರಿನವರಾದ ಏಕಲವ್ಯನ ಸ್ಟಂಟ್ ಪರ್ಫಾರ್ಮೆನ್ಸ್​ ನೋಡಿ‌‌ ಹಲವು ಸ್ಟಾರ್​ಗಳು ಇಂಪ್ರೆಸ್ ಆಗಿದ್ದಾರೆ. ಡ್ಯಾನಿ‌ ಮಾಸ್ಟರ್, ಪುನೀತ್, ಶಿವಣ್ಣ, ಉಪೇಂದ್ರ ಸೇರಿದಂತೆ ಹಲವರಿಗೆ ಈತನ ಪ್ರತಿಭೆಗೆ ಮನಸೋತಿದ್ದಾರೆ.

ಇವನ ಸ್ಟಂಟ್​ಗಳನ್ನು ನೋಡಿದವರು ಸ್ವತಃ ಅವರೇ ಕರೆ ಮಾಡಿ ಏಕಲವ್ಯನ ಜೊತ ಮಾತನಾಡಿ ಶುಭ ಹಾರೈಸಿದ್ದಾರೆ. ಇನ್ನು ಜೋಗಿ.. ವಿಲನ್ ಸಿನಿಮಾಗಳ ಸ್ಟಾರ್ ನಿರ್ದೇಶಕ ಪ್ರೇಮ್ ಈತನ ಪ್ರತಿಭೆ ಬಗ್ಗೆ ಮಾತನಾಡಿದ್ದು ಹಿಂದಿ, ಮಲಯಾಳಂಗೆ ಇದನ್ನ ಪರಿಚಯಿಸುವಂತೆ ಸಲಹೆ ಕೊಟ್ಟಿದ್ದಾರೆ.

ಕಲಿವೀರ ರಿಲೀಸ್​ಗೆ ಕೊರೊನಾ ಕಾಟ ಆದ್ರೆ ಕೊರೊನಾ ಹೊಡೆತಕ್ಕೆ ತತ್ತರಿಸಿರೋ ನಟ ಏಕಲವ್ಯನ ಸಿನಿಮಾ ‘ಕಲಿವೀರ’ ರಿಲೀಸ್ ಆಗೋಕೆ ಸಿದ್ದವಾದ್ರು ಕೊರೊನಾ ಹಿನ್ನೆಲೆ ಸಮಯ ಬೇಕಾಗಿದೆ. ಹೀಗಾಗಿ ದಿಕ್ಕು ದೆಸೆ ಇಲ್ಲದ ಅನಾಥ ಸದ್ಯ ಹೊಟ್ಟೆ ಪಾಡಿಗಾಗಿ ಬೇರೊಬ್ಬರ ಫಾರ್ಮ್ ಹೌಸ್​ನಲ್ಲಿ ಕೆಲಸ ಮಾಡ್ತಾ ದಿನಗಳನ್ನ ದೂಡ್ತಿದ್ದಾನೆ.

ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ ಕುದುರೆ ಸವಾರಿ ಕಲಿಯೋಕೆ ಹೋಗಿ ಅಲ್ಲಿಯೇ ಕೆಲಸ ಮಾಡ್ತಾ ಆಶ್ರಯ ಪಡೆದಿದ್ದಾನೆ ನಟ ಏಕಲವ್ಯ. ಸದ್ಯ ಕೋಳಿಗೆ ಕಾಳು ಹಾಕೋದು.. ಕುದುರೆಗೆ ಹುಲ್ಲು ಹಾಕೋ ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾನೆ. ಈಗ ತಮ್ಮ ಸಿನಿಮಾದ ಪ್ರಮೋಶನ್ ತಾವೇ ಮಾಡ್ತಾ ಆಟೋಗಳ‌‌ ಹಿಂದೆ ಪೋಸ್ಟರ್ ಹಚ್ಚಿ ಸಾಮಾನ್ಯರಂತೆ ದಿನ ಕಳೆಯುತ್ತಿರುವ ನಟನಿಗೆ ಆದಷ್ಟು ಬೇಗ ಒಳ್ಳೆ ದಿನಗಳು ಬರಲಿ ಅಂತ ಗಾಂಧಿನಗರ ಹಾರೈಸುತ್ತಿದೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?