Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ

ಸ್ಟಾರ್ ಫ್ಯಾಮಿಲಿಯಿಂದ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರೋ ನಟರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಈಗಾಗಲೇ ಶಶಿಕುಮಾರ್ ಪುತ್ರ ಕೂಡ ಈ ಸಾಲಿಗೆ ಸೇರಿದ್ದು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ಕಮಾಲ್ ಮಾಡ್ತಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮುಂಚೆನೆ ಓ ಮೈ ಲವ್ ಅಂತ ಕಾಲೇಜ್ ಹುಡುಗನಾಗಿರೋ ಅಕ್ಷಿತ್, ಫೋಟೋ ಶೂಟ್ ನಲ್ಲಿ ಹೇಗೆ ಕಾಣಿಸಿದ್ದಾರೆ ಅನ್ನೋದರ ಝಲಕ್ ಇಲ್ಲಿದೆ ನೋಡಿ.

ಸ್ಯಾಂಡಲ್ ವುಡ್​ನಲ್ಲಿ ಸ್ಟಾರ್ ನಟರ ಕುಡಿಗಳ ಕಮಾಲ್: ಫೋಟೋಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ
ಅಕ್ಷಿತ್ ಫೋಟೋ ಶೂಟ್
Follow us
ಆಯೇಷಾ ಬಾನು
|

Updated on:Dec 21, 2020 | 7:31 AM

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಫ್ಯಾಮಿಲಿಯಿಂದ ಎಂಟ್ರಿ ಕೊಡ್ತಿರೋರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಒಂದೊಂದು ಸ್ಟಾರ್‌ ಫ್ಯಾಮಿಲಿಯಿಂದ ಒಬ್ಬೊಬ್ಬ ನವ ನಟ ಎಂಟ್ರಿ ಕೊಡ್ತಿದ್ದಾರೆ. ಇದೇ ವರ್ಷ ರಾಜ್‌ ಕುಟುಂಬದ ಯುವರಾಜ್‌ ಕುಮಾರ್ ರಣಧೀರ ಕಂಠೀರವನಾಗಿ, ಕ್ರೇಜಿ ಸ್ಟಾರ್‌ ಕುಟುಂಬದಿಂದ ರವಿಚಂದ್ರನ್‌ ಪುತ್ರ ವಿಕ್ರಮ್‌ ತ್ರಿವಿಕ್ರಮನಾಗಿ ಕೂಡ ಹೊಸ ಹೊಸ ಸಿನಿಮಾಗಳ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅಷ್ಟೇ ಅಲ್ಲ ಉಪ್ಪಿ ಕುಟುಂಬದ ನಿರಂಜನ್‌ ಕೂಡ ಸೂಪರ್ ಸ್ಟಾರ್‌ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ.

ಫೋಟೋ ಶೂಟ್​ನಲ್ಲಿ ಶಶಿಕುಮಾರ್ ಪುತ್ರ ಬ್ಯುಸಿ: ಹೀಗೆ ಸಾಲು ಸಾಲು ನಟರು ಸ್ಟಾರ್ ಕುಟುಂಬದಿಂದ ಎಂಟ್ರಿ ಕೊಡ್ತಿರೋ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಸುಪ್ರೀಂ ಹೀರೋ ಶಶಿಕುಮಾರ್‌ ಪುತ್ರ ಕೂಡ ಈಗಾಗ್ಲೇ ಗಾಂಧಿನಗರದಲ್ಲಿ ಸೀತಾಯಣ ಸಿನಿಮಾ ಮೂಲಕ ಕಮಾಲ್‌ ಮಾಡ್ತಿರೋದು ಗೊತ್ತೇ ಇದೆ. ಅಷ್ಟೇ ಅಲ್ಲ, ಟಾಲಿವುಡ್‌ನಲ್ಲಿ ಸಮಿತ್‌ ಸಿನಿಮಾಗೂ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಇದೆಲ್ಲದರ ಜೊತೆಗೆ ಸದ್ಯ ಕಾಲೇಜ್‌ ಹುಡುಗನಾಗಿ ಸ್ಮೈಲ್‌ ಸೀನು ಆ್ಯಕ್ಷನ್‌ ಕಟ್ ಹೇಳ್ತಿರೋ ಓ ಮೈ ಲವ್‌ ಸಿನಿಮಾದಲ್ಲಿ ನಟಿಸ್ತಿದ್ದು, ಸದ್ದಿಲ್ಲದೇ ರೊಮ್ಯಾಂಟಿಕ್‌ ಫೋಟೋ ಶೂಟ್‌ ಮಾಡಿದ್ದಾರೆ.

ಸದ್ಯ ಓ ಮೈ ಲವ್‌ ಸಿನಿಮಾದಲ್ಲಿ ಸಖತ್‌ ರೊಮ್ಯಾಂಟಿಕ್ ಆಗಿ ಮೋಡಿ ಮಾಡಲಿರೋ ಅಕ್ಷಿತ್‌ ಶಶಿಕುಮಾರ್ ಇಬ್ಬರು ನಾಯಕಿಯರ ಜತೆ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿದ್ರು. ಅಕ್ಷಿತ್‌ ಜೊತೆ ಕೀರ್ತಿ ಹಾಗೂ ದೀಪಿಕಾ ಸ್ಕ್ರೀನ್ ಶೇರ್‌ ಮಾಡ್ತಿದ್ದಾರೆ.

ಒಟ್ನಲ್ಲಿ ಸದ್ಯ ಸ್ಟಾರ್‌ ಕುಟುಂಬದ ಕುಡಿಗಳು ಗಾಂಧಿನಗರದಲ್ಲಿ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನ ಅವ್ರ ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ನೋಡ್ತಿದ್ದಾರೆ. ಇನ್ನು ಈ ಸಾಲಿಗೆ ಸೇರಿರೋ ಶಶಿಕುಮಾರ್ ಪುತ್ರ ಅಕ್ಷಿತ್‌ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದು ಅದ್ಹೇಗೆ ಅಭಿಮಾನಿಗಳನ್ನ ರಂಜಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 7:31 am, Mon, 21 December 20

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು