ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದ ನಟ

ಬೆಂಗಳೂರು: ಸಿನಿಮೀಯ ರೀತಿ ನಟ ದರೋಡೆಕೋರರನ್ನು ಹಿಡಿದಿರುವ ಘಟನೆ ನಗರದ ಸೇಂಟ್‌ ಜಾನ್ ಸರ್ಕಲ್ ಬಳಿ ನಡೆದಿದೆ. ನಟ ರಘುಭಟ್ ಮಧ್ಯರಾತ್ರಿ ತನ್ನ ಕುಟುಂಬಸ್ಥರ ಜೊತೆ ಅವನೇ ಶ್ರೀಮನ್ನಾರಯಣ ಸಿನಿಮಾ ಮುಗಿಸಿ ಹಿಂತಿರುಗುತ್ತಿರುವಾಗ‌ ಈ ಘಟನೆ ನಡೆದಿದೆ. ಸಿಗ್ಮಾ ಮಾಲ್ ನಲ್ಲಿ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದ ವೇಳೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ಇಬ್ಬರು ದರೋಡೆಕೋರರು ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದರು. ಈ ವೇಳೆ ರಘುಭಟ್ ಇಬ್ಬರನ್ನು ಸಿನಿಮೀಯ […]

ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದ ನಟ
ಸಾಧು ಶ್ರೀನಾಥ್​

Updated on: Dec 27, 2019 | 10:28 AM

ಬೆಂಗಳೂರು: ಸಿನಿಮೀಯ ರೀತಿ ನಟ ದರೋಡೆಕೋರರನ್ನು ಹಿಡಿದಿರುವ ಘಟನೆ ನಗರದ ಸೇಂಟ್‌ ಜಾನ್ ಸರ್ಕಲ್ ಬಳಿ ನಡೆದಿದೆ. ನಟ ರಘುಭಟ್ ಮಧ್ಯರಾತ್ರಿ ತನ್ನ ಕುಟುಂಬಸ್ಥರ ಜೊತೆ ಅವನೇ ಶ್ರೀಮನ್ನಾರಯಣ ಸಿನಿಮಾ ಮುಗಿಸಿ ಹಿಂತಿರುಗುತ್ತಿರುವಾಗ‌ ಈ ಘಟನೆ ನಡೆದಿದೆ.

ಸಿಗ್ಮಾ ಮಾಲ್ ನಲ್ಲಿ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದ ವೇಳೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ಇಬ್ಬರು ದರೋಡೆಕೋರರು ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದರು. ಈ ವೇಳೆ ರಘುಭಟ್ ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಸುಮಾರು 2 ಕಿ.ಮೀ. ಚೇಸ್ ಮಾಡಿ ಸೇಂಟ್‌ ಜಾನ್ ಸರ್ಕಲ್ ಬಳಿ ಹಿಡಿದಿದ್ದಾರೆ.

ಸಿಕ್ಕಿಬಿದ್ದ ದರೋಡೆಕೋರರಾದ ಅಬ್ದುಲ್, ಮೊಹೀನ್‌ನನ್ನು ಹಲಸೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಚೇಸಿಂಗ್ ವೇಳೆ ಸೆಲ್ಫ್‌ ಌಕ್ಸಿಡೆಂಟ್ ಮಾಡಿಕೊಂಡಿದ್ದ ದರೋಡೆಕೋರರಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Published On - 10:28 am, Fri, 27 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us