ವಿಫಲವಾಯಿತಾ ಇಂದಿನ ಫಿಲ್ಮ್ ಚೇಂಬರ್ ಸಭೆ?

[lazy-load-videos-and-sticky-control id=”869mt7KvPAg”] ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಸ್ಪಷ್ಟ ನಿಲುವು ಹೊರ ಬಂದಿಲ್ಲ. ಸ್ಯಾಂಡಲ್ ವುಡ್ ಮೇಲೆ ಇಂಥದೊಂದು ದುಡ್ಡ ಆರೋಪದ ಕುರಿತು ಸಭೆಯಲ್ಲಿ ಏನಂದ್ರೆ ಏನೂ ನಿಲುವು ತೆಗೆದುಕೊಂಡಿಲ್ಲ. ಪದಾಧಿಕಾರಿಗಳು ಡ್ರಗ್ ಆರೋಪ ಸಾಬೀತಾದ ಮೇಲೆ ನೋಡೋಣ ಅಂತಿದ್ದಾರೆ. ಜೊತೆಗೆ ಆರೋಪ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಾಗೂ ದಂಧೆಯಲ್ಲಿ ತೊಡಗಿರುವವರ ಬ್ಯಾನ್ ಮಾಡೋ ಅಧಿಕಾರವೇ ಇಲ್ಲ. ನಾಮಕಾವಸ್ತೆಗೆ […]

ವಿಫಲವಾಯಿತಾ ಇಂದಿನ ಫಿಲ್ಮ್ ಚೇಂಬರ್ ಸಭೆ?
ಸಾಧು ಶ್ರೀನಾಥ್​

Updated on: Sep 02, 2020 | 4:12 PM

[lazy-load-videos-and-sticky-control id=”869mt7KvPAg”]

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಸ್ಪಷ್ಟ ನಿಲುವು ಹೊರ ಬಂದಿಲ್ಲ.

ಸ್ಯಾಂಡಲ್ ವುಡ್ ಮೇಲೆ ಇಂಥದೊಂದು ದುಡ್ಡ ಆರೋಪದ ಕುರಿತು ಸಭೆಯಲ್ಲಿ ಏನಂದ್ರೆ ಏನೂ ನಿಲುವು ತೆಗೆದುಕೊಂಡಿಲ್ಲ. ಪದಾಧಿಕಾರಿಗಳು ಡ್ರಗ್ ಆರೋಪ ಸಾಬೀತಾದ ಮೇಲೆ ನೋಡೋಣ ಅಂತಿದ್ದಾರೆ. ಜೊತೆಗೆ ಆರೋಪ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಾಗೂ ದಂಧೆಯಲ್ಲಿ ತೊಡಗಿರುವವರ ಬ್ಯಾನ್ ಮಾಡೋ ಅಧಿಕಾರವೇ ಇಲ್ಲ.

ನಾಮಕಾವಸ್ತೆಗೆ ಸಭೆ ಕರೆದ ವಾಣಿಜ್ಯ ಮಂಡಳಿ ಸಭೆಯ ಉದ್ದೇಶವೇ ಸ್ಪಷ್ಟವಾಗಿಲ್ಲ. ಅಸಹಕಾರದ ಬಗ್ಗೆಯೂ ಚರ್ಚೆ ಆಗಿಲ್ಲ, 4 ಜನ ಮಾಡಿರೋ ತಪ್ಪಿಗೆ ಸ್ಯಾಂಡಲ್ ವುಡ್ ಹೆಸ್ರು ಬಳಕೆ ಮಾಡೋದು ಬೇಡ ಅನ್ನೋ ಒಂದೇ ಅಂಶವನ್ನ ಒತ್ತಿ ಹೇಳ್ತಿದ್ದಾರೆ.

Published On - 3:08 pm, Wed, 2 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us