‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?

ಮುಖ್ಯಮಂತ್ರಿ ಚಂದ್ರು ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ರಂಗಭೂಮಿಯಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಹೇಗೆ ಇರಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

‘ಹಲ್ಕಾ ಕೆಲಸ ಬಿಡೋಕಾಗಲ್ಲ, ಸೆಲೆಬ್ರಿಟಿ ಆದಮೇಲೆ ಬಿಡದಿದ್ರೆ ಮನುಷ್ಯರಲ್ಲ’: ಮುಖ್ಯಮಂತ್ರಿ ಚಂದ್ರು ಹೀಗೆ ಹೇಳಿದ್ದೇಕೆ?
ಮುಖ್ಯಮಂತ್ರಿ ಚಂದ್ರು

Updated on: Jul 05, 2024 | 11:37 AM

ಮುಖ್ಯಮಂತ್ರಿ ಚಂದ್ರು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಚಂದ್ರಶೇಖರ್ ಅನ್ನೋದು ಅವರ ಹೆಸರು. ‘ಮುಖ್ಯಮಂತ್ರಿ’ ನಾಟಕ ಮಾಡಿ ಮುಖ್ಯಮಂತ್ರಿ ಚಂದ್ರು ಎಂದೇ ಫೇಮಸ್ ಆದರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಶಾಸಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಇತ್ತೀಚೆಗೆ ‘ಕಲಾ ಮಾಧ್ಯಮಕ್ಕೆ ಸಂದರ್ಶನ’ ನೀಡಿದ್ದಾರೆ. ಈ ವೇಳೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಲವು ಸೆಲೆಬ್ರಿಟಿಗಳು ವಿವಾದದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ. ಮಾದರಿಯಾಗಿರಬೇಕಾದ ಹೀರೋಗಳು ಜೈಲು ಸೇರುತ್ತಿದ್ದಾರೆ. ಸೆಲೆಬ್ರಿಟಿ ಪಟ್ಟ ಸಿಕ್ಕಮೇಲೆ ಅವನು ತೋರಿಕೆಗಾದರೂ ಸಭ್ಯನಾಗಿರಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಅಭಿಪ್ರಾಯ. ಈ ಬಗ್ಗೆ ಅವರು ಹಳೆಯ ಘಟನೆ ಒಂದನ್ನು ಉದಾಹರಣೆ ಕೊಟ್ಟು ಹೇಳಿದ್ದಾರೆ.

‘ಮುಖ್ಯಮಂತ್ರಿ’ ನಾಟಕವನ್ನು ಲೋಹಿತಾಶ್ವ ಅವರು ಮಾಡಬೇಕಿತ್ತು. ಈ ನಾಟಕದ ಬಗ್ಗೆ ಚರ್ಚೆ ಮಾಡಲು ಹೋಟೆಲ್ ಒಂದರಲ್ಲಿ ಲೋಹಿತಾಶ್ವ ಹಾಗೂ ಚಂದ್ರು ಹೋಟೆಲ್ ಮಾಡಿಕೊಂಡಿದ್ದರು. ಈ ವೇಳೆ ರಮ್ ಕುಡಿಯುತ್ತಿದ್ದರಂತೆ. ಈ ವಿಚಾರವನ್ನು ಚಂದ್ರು ಹೇಳಿಕೊಂಡರು. ‘ರಮ್ ಕುಡಿಯೋದ್ರಲ್ಲಿ ಏನಿದೆ? ಇದೆಲ್ಲ ಓಪನ್ ಆಗಿ ಹೇಳಿಕೊಳ್ಳುತ್ತೇನೆ. ಆದರೆ, ಇದನ್ನು ಓಪನ್ ಆಗಿ ಎಲ್ಲಿಯೂ ಹೇಳಿಕೊಳ್ಳಬೇಡಿ ಎಂದು ನಾನು ನಾಯಕರಿಗೆ ಹೇಳುತ್ತಿರುತ್ತೇನೆ’ ಎಂದಿದ್ದಾರೆ ಚಂದ್ರು. ಆ ಬಳಿಕ ಅವರು ಸೆಲೆಬ್ರಿಟಿಗಳು ಪಾಲಿಸಬೇಕಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ನಾಗಮಂಗಲದಲ್ಲಿ ದರ್ಶನ್ ಮತ್ತು ಮುಖ್ಯಮಂತ್ರಿ ಚಂದ್ರುರಿಂದ ಸ್ಟಾರ್ ಚಂದ್ರು ಪರ ರೋಡ್ ಶೋ!

‘ಹಲ್ಕಾ ಕೆಲಸ ಬಿಡೋಕೆ ಆಗಲ್ಲ. ಸೆಲೆಬ್ರಿಟಿ ಆದಮೇಲೆ ಅದನ್ನು ಬಿಡದೆ ಇದ್ರೆ ಮನುಷ್ಯರಲ್ಲ. ಬಿಡದೇ ಇದ್ದರೆ ಎಂದರೆ ಸಾರ್ವಜನಿಕ ಮಾಡದನ್ನು ಬಿಡದೇ ಇದ್ದರೆ ಅವನು ಮಾದರಿ ಆಗಲ್ಲ. ಈಗ ಎಲ್ಲವನ್ನೂ ಓಪನ್ ಆಗಿ ತೋರ್ಸಿ ಗಬ್ಬೆದ್ದು ಹೋಗುತ್ತಿದ್ದಾರೆ. ಮನುಷ್ಯನ ಚಟ ಏನು ಮಾಡೋಕಾಗಲ್ಲ. ಇದು ವೀಕ್​ನೆಸ್. ಇತಿ-ಮಿತಿಯಲ್ಲಿ ಇರಬೇಕು’ ಎಂದಿದ್ದಾರೆ ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:35 am, Fri, 5 July 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us