ಕುಡಿದ ಮತ್ತಿನಲ್ಲಿ ಖಾಕಿ ಜೊತೆ ಸ್ಯಾಂಡಲ್ ವುಡ್ ನಟನ ಕಿರಿಕ್..

[lazy-load-videos-and-sticky-control id=”CP7OSWfezfI”] ಬೆಂಗಳೂರು: ತಡರಾತ್ರಿ ಮದ್ಯದ ಅಮಲಿನಲ್ಲಿ ಪೊಲೀಸರ ಜತೆ ಸ್ಯಾಂಡಲ್ ವುಡ್ ನಟ ಹರ್ಷ ಕಿರಿಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಗೆಳೆಯರ ಜತೆ ಸೇರಿ ನಟ ಹರ್ಷ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರಿಗೆ ನಟ ಹರ್ಷ, ಜತೆಗಿದ್ದ ಸ್ನೇಹಿತರು ಆವಾಜ್ ಹಾಕಿದ್ದಾರೆ. ಕೂಡಲೇ ಕಿರಿಕ್ ಮಾಡಿದವರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದು ಬುದ್ಧಿ ಮಾತು ಹೇಳಿ ಇನ್ನೊಮ್ಮೆ ಈ […]

ಕುಡಿದ ಮತ್ತಿನಲ್ಲಿ ಖಾಕಿ ಜೊತೆ ಸ್ಯಾಂಡಲ್ ವುಡ್ ನಟನ ಕಿರಿಕ್..
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 07, 2020 | 9:52 AM

[lazy-load-videos-and-sticky-control id=”CP7OSWfezfI”]

ಬೆಂಗಳೂರು: ತಡರಾತ್ರಿ ಮದ್ಯದ ಅಮಲಿನಲ್ಲಿ ಪೊಲೀಸರ ಜತೆ ಸ್ಯಾಂಡಲ್ ವುಡ್ ನಟ ಹರ್ಷ ಕಿರಿಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಗೆಳೆಯರ ಜತೆ ಸೇರಿ ನಟ ಹರ್ಷ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರಿಗೆ ನಟ ಹರ್ಷ, ಜತೆಗಿದ್ದ ಸ್ನೇಹಿತರು ಆವಾಜ್ ಹಾಕಿದ್ದಾರೆ.

ಕೂಡಲೇ ಕಿರಿಕ್ ಮಾಡಿದವರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದು ಬುದ್ಧಿ ಮಾತು ಹೇಳಿ ಇನ್ನೊಮ್ಮೆ ಈ ರೀತಿ ಮಾಡದಂತೆ ವಾರ್ನಿಗ್ ನೀಡಿ ಕಳಿಸಿದ್ದಾರೆ. ನಟ ಹರ್ಷ ಸ್ಯಾಂಡಲ್ ವುಡ್​ನ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Published On - 7:19 am, Mon, 7 September 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us