AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ […]

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ
ಆಯೇಷಾ ಬಾನು
ಆಯೇಷಾ ಬಾನು|

Updated on:Sep 24, 2020 | 1:44 PM

Share

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ ಹಾದಿ ಬದಲಾಯಿಸಿದ್ದಾಳೆ. ಹಾಗಿದ್ರೆ ಆಕೆ ಹೇಳಿದ್ದೇನು ಇಲ್ಲಿದೆ ಓದಿ.. ಅವ್ನ ಜೊತೆ ಬಾಳೋಲ್ಲ: ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಸಪ್ತಪದಿ ತುಳಿದ್ರು. 29 ಹರೆಯದ ಪೂನಂ ತಮ್ಮ ಮದುವೆ ಸುದ್ದಿಯನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬಸ್ಥರ ಸಮ್ಮಖದಲ್ಲಿ ಮದುವೆ ಸಮಾರಂಭ ನಡೆದಿತ್ತು. ಹೀಗಾಗಿ ನವ ಜೋಡಿಗಳಿಬ್ಬರೂ ಗೋವಾಗೆ ಹನಿಮೂನ್​ಗೆ ಎಂದು ತೆರಳಿದ್ರು.

ವಿವಾಹ ಬಂಧದಿಂದ ಮುಕ್ತ, ಮುಕ್ತ.. ಇದೇ ವೇಳೆ ಪೂನಂ ಪಾಂಡೆಗೆ ಸಿನಿಮಾದ ಶೂಟಿಂಗ್ ಸಹ ಗೋವಾದಲ್ಲೆ ಇತ್ತು. ಈ ವೇಳೆ ಗಂಡ ಸ್ಯಾಮ್, ಪೂನಂ ಸೆಟ್​ಗೆ ಬಂದು ಅಸಭ್ಯವಾಗಿ ವರ್ತಿಸಿದ. ನನಗೆ ಕಿರುಕುಳ ನೀಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಸೆಪ್ಟೆಂಬರ್ 21ರಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಳು.

ಆಗ ಗೋವಾ ಪೊಲೀಸರು ಸ್ಯಾಮ್​ನನ್ನು ಅರೆಸ್ಟ್ ಮಾಡಿ, ಆಮೇಲೆ ಜಾಮೀನು ನೀಡಿದರು. ಇವೆಲ್ಲಾ ಘಟನೆ ಬಳಿಕ ಪೂನಂ ಪಾಂಡೆ ತಮ್ಮ ವಿವಾಹ ಬಂಧನದಿಂದ ಮುಕ್ತರಾಗಲು ಬಯಸಿದ್ದಾರೆ! ಸ್ಯಾಮ್​ ಮತ್ತು ಪೂನಂ ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಇಷ್ಟಪಟ್ಟು ಮದುವೆಯಾದವರು. ಆದರೆ ಮದುವೆಯಾದ ಮೇಲೆ ಪ್ರೀತಿ ಕರಗಿದೆ. ಗೋವಾಗೆ ಬಂದ ಮೇಲೆ ಒಂದು ದಿನ ಸ್ಯಾಮ್, ಪೂನಂ ಮೇಲೆ ಹಲ್ಲೆ ನಡೆಸಿದ್ದಾನಂತೆ. ಉಸಿರುಗಟ್ಟಿಸಿ ಸಾಯುವಂತೆ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ.

ತಲೆ ಕೂದಲನ್ನು ಎಳೆದು ಮಂಚದ ಮೂಲೆಯ ಗೋಡೆಗೆ ಹೊಡೆದಿದ್ದಾನಂತೆ. ಹೇಗೆಂದರೆ ಹಾಗೆ, ಮನ ಬಂದಂತೆ ಥಳಿಸಿದ್ದಾನೆ. ನಂತರ ಹೇಗೂ ಪೂನಂ ಸ್ಯಾಮ್​ನಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದಿದ್ದಾಳೆ. ಈ ವೇಳೆ ಹೋಟೆಲ್ ಸಿಬ್ಬಂದಿ ಪೊಲೀಸರನ್ನು ಕರೆಸಿ ಸ್ಯಾಮ್​ನನ್ನು ಬಂಧಿಸಿದ್ದಾರೆ. ಪೂನಂ ಸ್ಯಾಮ್ ವಿರುದ್ಧ ದೂರು ದಾಖಲಿಸಿದೆ ಎಂದು ತಮ್ಮ ಮನದಾಳದ ನೋವನ್ನು ಪೂನಂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು

Published On - 12:42 pm, Thu, 24 September 20

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು