AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ […]

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ
ಆಯೇಷಾ ಬಾನು
|

Updated on:Sep 24, 2020 | 1:44 PM

Share

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ ಹಾದಿ ಬದಲಾಯಿಸಿದ್ದಾಳೆ. ಹಾಗಿದ್ರೆ ಆಕೆ ಹೇಳಿದ್ದೇನು ಇಲ್ಲಿದೆ ಓದಿ.. ಅವ್ನ ಜೊತೆ ಬಾಳೋಲ್ಲ: ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಸಪ್ತಪದಿ ತುಳಿದ್ರು. 29 ಹರೆಯದ ಪೂನಂ ತಮ್ಮ ಮದುವೆ ಸುದ್ದಿಯನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬಸ್ಥರ ಸಮ್ಮಖದಲ್ಲಿ ಮದುವೆ ಸಮಾರಂಭ ನಡೆದಿತ್ತು. ಹೀಗಾಗಿ ನವ ಜೋಡಿಗಳಿಬ್ಬರೂ ಗೋವಾಗೆ ಹನಿಮೂನ್​ಗೆ ಎಂದು ತೆರಳಿದ್ರು.

ವಿವಾಹ ಬಂಧದಿಂದ ಮುಕ್ತ, ಮುಕ್ತ.. ಇದೇ ವೇಳೆ ಪೂನಂ ಪಾಂಡೆಗೆ ಸಿನಿಮಾದ ಶೂಟಿಂಗ್ ಸಹ ಗೋವಾದಲ್ಲೆ ಇತ್ತು. ಈ ವೇಳೆ ಗಂಡ ಸ್ಯಾಮ್, ಪೂನಂ ಸೆಟ್​ಗೆ ಬಂದು ಅಸಭ್ಯವಾಗಿ ವರ್ತಿಸಿದ. ನನಗೆ ಕಿರುಕುಳ ನೀಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಸೆಪ್ಟೆಂಬರ್ 21ರಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಳು.

ಆಗ ಗೋವಾ ಪೊಲೀಸರು ಸ್ಯಾಮ್​ನನ್ನು ಅರೆಸ್ಟ್ ಮಾಡಿ, ಆಮೇಲೆ ಜಾಮೀನು ನೀಡಿದರು. ಇವೆಲ್ಲಾ ಘಟನೆ ಬಳಿಕ ಪೂನಂ ಪಾಂಡೆ ತಮ್ಮ ವಿವಾಹ ಬಂಧನದಿಂದ ಮುಕ್ತರಾಗಲು ಬಯಸಿದ್ದಾರೆ! ಸ್ಯಾಮ್​ ಮತ್ತು ಪೂನಂ ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಇಷ್ಟಪಟ್ಟು ಮದುವೆಯಾದವರು. ಆದರೆ ಮದುವೆಯಾದ ಮೇಲೆ ಪ್ರೀತಿ ಕರಗಿದೆ. ಗೋವಾಗೆ ಬಂದ ಮೇಲೆ ಒಂದು ದಿನ ಸ್ಯಾಮ್, ಪೂನಂ ಮೇಲೆ ಹಲ್ಲೆ ನಡೆಸಿದ್ದಾನಂತೆ. ಉಸಿರುಗಟ್ಟಿಸಿ ಸಾಯುವಂತೆ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ.

ತಲೆ ಕೂದಲನ್ನು ಎಳೆದು ಮಂಚದ ಮೂಲೆಯ ಗೋಡೆಗೆ ಹೊಡೆದಿದ್ದಾನಂತೆ. ಹೇಗೆಂದರೆ ಹಾಗೆ, ಮನ ಬಂದಂತೆ ಥಳಿಸಿದ್ದಾನೆ. ನಂತರ ಹೇಗೂ ಪೂನಂ ಸ್ಯಾಮ್​ನಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದಿದ್ದಾಳೆ. ಈ ವೇಳೆ ಹೋಟೆಲ್ ಸಿಬ್ಬಂದಿ ಪೊಲೀಸರನ್ನು ಕರೆಸಿ ಸ್ಯಾಮ್​ನನ್ನು ಬಂಧಿಸಿದ್ದಾರೆ. ಪೂನಂ ಸ್ಯಾಮ್ ವಿರುದ್ಧ ದೂರು ದಾಖಲಿಸಿದೆ ಎಂದು ತಮ್ಮ ಮನದಾಳದ ನೋವನ್ನು ಪೂನಂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು

Published On - 12:42 pm, Thu, 24 September 20

Follow Us
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ