AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿ ಕೈಬಿಟ್ಟು, ಅಮೆರಿಕಾ ಉದ್ಯಮಿಯ ಪುತ್ರಿ ಕೈಹಿಡಿಯಲಿದ್ದಾರೆ ಪ್ರಭಾಸ್

ಟಾಲಿವುಡ್ ಸ್ಟಾರ್ ಪ್ರಭಾಸ್ ಅಂದಾಕ್ಷಣ ಮೊದಲು ನೆನಪಾಗೋದು ಅವರು ಮದುವೆ ಸುದ್ದಿ. ಅಷ್ಟರ ಮಟ್ಟಿಗೆ ಪ್ರಭಾಸ್​ ಮದುವೆ ವಿಚಾರ ಜಗಜ್ಜಾಹೀರಾಗಿದೆ. ಆದ್ರೀಗ ಮತ್ತೆ ಡಾರ್ಲಿಂಗ್​ ವಿವಾಹದ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಈ ಬಾರಿ ಪ್ರಭಾಸ್ ಹಸೆಮಣೆ ಏರೋದು ಪಕ್ಕಾ ಅಂತಿದೆ ಟಾಲಿವುಡ್. ಪ್ರಭಾಸ್. ಟಾಲಿವುಡ್‌ನ ಸ್ಟಾರ್ ನಟ. ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ಸ್ಟಾರ್​. ಎಷ್ಟೇ ಹಿಟ್ ಸಿನಿಮಾಗಳನ್ನ ಕೊಟ್ರು, ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸ್ತಿದ್ದರು ಪ್ರಭಾಸ್ ಅಭಿಮಾನಿಗಳನ್ನ ಕಾಡ್ತಿರೋದು ಒಂದೇ ಪ್ರಶ್ನೆ. ಡಾರ್ಲಿಂಗ್ ಮದುವೆ ಆಗೋದು ಯಾವಾಗ […]

ಕನ್ನಡತಿ ಕೈಬಿಟ್ಟು, ಅಮೆರಿಕಾ ಉದ್ಯಮಿಯ ಪುತ್ರಿ ಕೈಹಿಡಿಯಲಿದ್ದಾರೆ ಪ್ರಭಾಸ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 23, 2019 | 10:23 AM

Share

ಟಾಲಿವುಡ್ ಸ್ಟಾರ್ ಪ್ರಭಾಸ್ ಅಂದಾಕ್ಷಣ ಮೊದಲು ನೆನಪಾಗೋದು ಅವರು ಮದುವೆ ಸುದ್ದಿ. ಅಷ್ಟರ ಮಟ್ಟಿಗೆ ಪ್ರಭಾಸ್​ ಮದುವೆ ವಿಚಾರ ಜಗಜ್ಜಾಹೀರಾಗಿದೆ. ಆದ್ರೀಗ ಮತ್ತೆ ಡಾರ್ಲಿಂಗ್​ ವಿವಾಹದ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಈ ಬಾರಿ ಪ್ರಭಾಸ್ ಹಸೆಮಣೆ ಏರೋದು ಪಕ್ಕಾ ಅಂತಿದೆ ಟಾಲಿವುಡ್.

ಪ್ರಭಾಸ್. ಟಾಲಿವುಡ್‌ನ ಸ್ಟಾರ್ ನಟ. ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ಸ್ಟಾರ್​. ಎಷ್ಟೇ ಹಿಟ್ ಸಿನಿಮಾಗಳನ್ನ ಕೊಟ್ರು, ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸ್ತಿದ್ದರು ಪ್ರಭಾಸ್ ಅಭಿಮಾನಿಗಳನ್ನ ಕಾಡ್ತಿರೋದು ಒಂದೇ ಪ್ರಶ್ನೆ. ಡಾರ್ಲಿಂಗ್ ಮದುವೆ ಆಗೋದು ಯಾವಾಗ ಅನ್ನೋದು.

ಬಾಹುಬಲಿ ಸೀಕ್ವೆಲ್‌ನಲ್ಲಿ ಬ್ಯುಸಿ ಇದ್ದ ಪ್ರಭಾಸ್​, ಬಾಹುಬಲಿ ನಂತ್ರ ಮದುವೆ ಆಗ್ತಾರೆ ಅಂತ ಹೇಳಲಾಗಿತ್ತು.. ಆದ್ರೆ ಬಾಹುಬಲಿ ತೆರೆಕಂಡು, ಸಾಹೋ ಸಿನಿಮಾ ರಿಲೀಸ್​ ಆದ್ರು ಪ್ರಭಾಸ್​ ಮದುವೆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರ ಬರಲೇ ಇಲ್ಲ. ಜೊತೆಗೆ ಅನುಷ್ಕಾ ಶೆಟ್ಟಿ ಸೇರಿದಂತೆ, ಒಂದುಷ್ಟು ಹೆಸ್ರುಗಳು ಪ್ರಭಾಸ್‌​ ಜೊತೆಗೆ ತಳಕು ಹಾಕಿಕೊಂಡಿದ್ವು. ಆದ್ರೆ ಅದ್ಯಾವುದು ನಿಜವಾಗಲೇ ಇಲ್ಲ.

ಆದ್ರೀಗ ಪ್ರಭಾಸ್​ ಮದುವೆ ಬಗ್ಗೆ ಮತ್ತೊಂದು ಸುದ್ದಿ ಟಾಲಿವುಡ್​ನಲ್ಲಿ ಹರಿದಾಡ್ತಿದೆ.. ಇದು ಕೇವಲ ಗಾಳಿ ಸುದ್ದಿ ಅಲ್ಲ ಅಂತಲೂ ಹೇಳಲಾಗ್ತಿದೆ. ಈ ವರ್ಷದ ಅಂತ್ಯದಲ್ಲಿ ಅಂದ್ರೆ ಡಿಸೆಂಬರ್​ 31ರಂದು ಪ್ರಭಾಸ್ ತಮ್ಮ ಮದುವೆ ಸುದ್ದಿಯನ್ನ ಅಧಿಕೃತವಾಗಿ ಪ್ರಕಟಿಸಲಿದ್ದಾರಂತೆ. ಇದ್ರೊಂದಿಗೆ ಪ್ರಭಾಸ್​ ಅಮೆರಿಕ ಮೂಲದ ಉದ್ಯಮಿಯೊಬ್ಬರ ಮಗಳನ್ನ ಪ್ರಭಾಸ್​ ಪ್ರೀತಿಸುತ್ತಿದ್ದು, ಅವ್ರನ್ನೇ ಮದುವೆ ಆಗಲಿದ್ದಾರೆ ಅಂತಲೂ ಹೇಳಲಾಗ್ತಿದೆ.

ಡಿಸೆಂಬರ್ 31 ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿದೆ.. 2020 ಜನವರಿ1 ರಿಂದ ಪ್ರಭಾಸ್​ ತಮ್ಮ ಹೊಸ ಸಿನಿಮಾ ಜಾನ್ ಶೂಟಿಂಗ್‌ನಲ್ಲಿ ಭಾಗಿ ಆಗಲಿದ್ದಾರಂತೆ. ಹಾಗಾಗಿ ಈ ವರ್ಷದ ಕೊನೆಯ ದಿನ ತಮ್ಮ ಮದುವೆ ಸುದ್ದಿಯನ್ನ ಪ್ರಕಟಿಸೋ ಯೋಚನೆಯಲ್ಲಿದ್ದಾರಂತೆ.

ಒಟ್ನಲ್ಲಿ ಇದು ನಿಜವಾ..? ನಿಜನೇ ಆದ್ರೆ ಪ್ರಭಾಸ್ ಕೈ ಹಿಡಿಯೋ ಆ ಬೆಡಗಿ ಯಾರು ಅನ್ನೋದಕ್ಕೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಕುತೂಹಲ ಹುಟ್ಟು ಹಾಕಿರೋ ಈ ಸುದ್ದಿ ಪ್ರಭಾಸ್ ಅಭಿಮಾನಿಗಳನ್ನ ಡಿಸೆಂಬರ್ 31ರ ತನಕ ಕಾಯುವಂತೆ ಮಾಡಿದೆ.

Published On - 2:37 pm, Sun, 22 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು