
ಪ್ರಶಾಂತ್ ನೀಲ್ ಅವರು (Prashanth Neel) ಆ್ಯಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದವರು. ಅವರನ್ನು ಎಲ್ಲಾ ಭಾಷೆಯವರು ಗುರುತಿಸೋದು ಹಾಗೆಯೇ. ‘ಕೆಜಿಎಫ್’ಗೂ ಮೊದಲು ಫ್ಯಾಮಿಲಿ ಡ್ರಾಮಾ ಕಥೆಯನ್ನು ಪ್ರಶಾಂತ್ ನೀಲ್ ರೆಡಿ ಮಾಡಿಟ್ಟುಕೊಂಡಿದ್ದರು. ಪುನೀತ್ ರಾಜ್ಕುಮಾರ್ ಅವರೇ ಈ ಸಿನಿಮಾದಲ್ಲಿ ನಟಿಸಬೇಕು ಎಂಬುದು ನೀಲ್ ಆಸೆ ಆಗಿತ್ತು. ಈ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. ಪುನೀತ್ ಜೊತೆ ಆ ಕಥೆಯೂ ಹೋಯಿತು ಎಂದು ಅವರು ಹೇಳಿದ್ದಾರೆ.
ಪ್ರಶಾಂತ್ ನೀಲ್ ಅವರು ಅಪ್ಪುಗಾಗಿ ಒಂದು ಭರ್ಜರಿ ಕಥೆ ಸಿದ್ಧಪಡಿಸಿದ್ದರು. ಹೊಂಬಾಳೆ ಫಿಲ್ಮ್ಸ್ ಎದುರು ಇದನ್ನು ನೀಲ್ ಹೇಳಿದ್ದರು. ನಂತರ ‘ಕೆಜಿಎಫ್’ ಕಥೆ ಹೇಳಿದಾಗ ಹೊಂಬಾಳೆ ಅದನ್ನೇ ಆಯ್ಕೆ ಮಾಡಿತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪುನೀತ್ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
Q: Is the family story still has a place in your lineUp ?
Dir #PrashanthNeel:
– That was for #PuneethRajkumar sir, and probably it’s gone with him.#Dragonpic.twitter.com/pBOBJfVonY— Movie Tamil (@_MovieTamil) May 21, 2026
ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ‘ಅದನ್ನು ನಾನು ಪುನೀತ್ ಅವರಿಗಾಗಿ ಮಾಡಿದ್ದೆ. ಅವರ ಜೊತೆಯೇ ಆ ಕಥೆಯೂ ಹೋಯಿತು’ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಅಂದರೆ ಆ ಕಥೆಗೆ ಬೇರೆ ಯಾರೂ ಸೂಕ್ತರಲ್ಲ ಎಂಬುದು ನೀಲ್ ಅಭಿಪ್ರಾಯ.
ಇದನ್ನೂ ಓದಿ: ‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ
‘ನನ್ನ ಸಿನಿಮೀಯ ಬದುಕಿನ ಅತಿ ದೊಡ್ಡ ನಿರಾಶೆ ಎಂದರೆ ಅದು ಅಪ್ಪು ಸರ್ ಜೊತೆ ಸಿನಿಮಾ ಮಾಡಲು ಸಾಧ್ಯವಾಗದೇ ಇರುವುದು’ ಎಂದು ಪ್ರಶಾಂತ್ ನೀಲ್ ಹಲವು ಸಂದರ್ಶನಗಳಲ್ಲಿ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಸಿನಿಮಾದ ಗ್ಲಿಂಪ್ಸ್ ಇತ್ತೀಚೆಗೆ ರಿಲೀಸ್ ಆಗಿದೆ. ಇದರ ಅವಧಿ 4 ನಿಮಿಷ ಇತ್ತು. ಮುಂದಿನ ದಿನಗಳಲ್ಲಿ 9 ನಿಮಿಷಗಳ ಟ್ರೇಲರ್ ತರುವ ಆಲೋಚನೆಯಲ್ಲಿ ಪ್ರಶಾಂತ್ ನೀಲ್ ಅವರು ಇದ್ದಾರೆ. ಸಿನಿಮಾದಲ್ಲಿ ಏನಿರಲಿದೆ ಎಂಬುದನ್ನು ಅವರು ವಿವರವಾಗಿ ಹೇಳುವ ಆಲೋಚನೆಯಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Fri, 22 May 26