ದರ್ಶನ್ ಗಲಾಟೆ: ಸಂದೇಶ್ ಹೋಟೆಲ್ನ ಸೆಕ್ಯುರಿಟಿ ಗಾರ್ಡ್ ತೆರೆದಿಟ್ಟರು ಸ್ಫೋಟಕ ವಿಚಾರ!
ನಟ ದರ್ಶನ್ ಅವರು ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಗಲಾಟೆ ನಡೆಸಿದ್ದರು ಎನ್ನುವ ಆರೋಪಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ತಿರುವುಗಳು ಲಭ್ಯವಾಗುತ್ತಿವೆ. ಇದೀಗ ಹೋಟೆಲ್ನ ವಾಚ್ಮನ್ ಮಾತನಾಡಿದ್ದು ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ದರ್ಶನ್ ಗಲಾಟೆ ನಡೆಸಿದ್ದಾರೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್ಗೆ ಅವಾಚ್ಯವಾಗಿ ಬೈದಿದ್ದಾರೆ. ಜೊತೆಗೆ 50 ಸಾವಿರ ರೂ.ಗಳನ್ನು ಎಸೆದು ನಾನಿನ್ನು ಈ ಹೊಟೆಲ್ಗೆ ಕಾಲಿಡುವುದಿಲ್ಲ ಎಂದು ಹೇಳಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ಒಬ್ಬರು ತಿಳಿಸಿದ್ದಾರೆ. ದುಡ್ಡನ್ನು ಆಯ್ದುಕೊಳ್ಳಲು ಹೋದ ಹೌಸ್ ಕೀಪರ್ಗೂ ಅವಾಚ್ಯವಾಗಿ ಬೈದಿದ್ದಾರೆ. ಈ ಘಟನೆಯಿಂದ ಹೊಟಲ್ನ ಸಿಬ್ಬಂದಿಗಳೆಲ್ಲಾ ಕೆಲಸ ಬಿಡುವ ಯೋಚನೆಯಲ್ಲಿದ್ದರು. ಆಗ ಸಂಸ್ಥೆಯ ಎಂಡಿ ಸಮಾಧಾನಪಡಿಸಿದ್ದರಿಂದ ಸಿಬ್ಬಂದಿ ಹೊಟೆಲ್ನಲ್ಲಿ ಮುಂದುವರೆದಿದ್ದರು ಎಂದು ಸೆಕ್ಯುರಿಟಿ ಗಾರ್ಡ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕೊನೆಗೆ ಬಂದ ಹೊಟೆಲ್ನ ಹಿರಿಯ ಎಂಡಿ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸಿಬ್ಬಂದಿಯ ಮೇಲೆ ಕೈಮಾಡಿದ್ದೀಯಲ್ಲಾ, ಇನ್ನು ಇಲ್ಲಿಗೆ ಬರಬೇಡ ಎಂದು ಎಚ್ಚರಿಕೆ ನೀಡಿ ಕಳಿಸಿದ್ದರು ಎಂದು ಸೆಕ್ಯುರಿಟಿ ತಿಳಿಸಿದ್ದಾರೆ. ಆ ವಿಡಿಯೊ ಇಲ್ಲಿದೆ.
(Security Guard of Sandesh The Prince Hotel reveals truth about Darshan controversy)
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
