‘ಸತ್ತರೆ ಮಣ್ಣು ಹಾಕಲು ಯಾರೂ ಇರಲ್ಲ’; ಕಾವೇರಿ ಅಂತ್ಯ ಲಕ್ಷ್ಮೀ ಹೇಳಿದಂತೆ ಆಯ್ತು

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಪಾತ್ರದ ಅಂತ್ಯವು ಅವಳ ಅಹಂಕಾರ ಮತ್ತು ಕೆಟ್ಟ ಕಾರ್ಯಗಳಿಗೆ ಶಿಕ್ಷೆಯಾಗಿದೆ. ಮಗ ವೈಷ್ಣವನಿಗೆ ತನ್ನ ತಾಯಿಯ ನಿಜ ಸ್ವರೂಪ ತಿಳಿದ ನಂತರ, ಅವಳು ಗುಡ್ಡದಿಂದ ಬಿದ್ದು ಸಾಯುತ್ತಾಳೆ. ಇದು ಲಕ್ಷ್ಮೀ ಹೇಳಿದ ರೀತಿಯೇ ನಡೆದಿದೆ .

‘ಸತ್ತರೆ ಮಣ್ಣು ಹಾಕಲು ಯಾರೂ ಇರಲ್ಲ’; ಕಾವೇರಿ ಅಂತ್ಯ ಲಕ್ಷ್ಮೀ ಹೇಳಿದಂತೆ ಆಯ್ತು
ಲಕ್ಷ್ಮೀ ಬಾರಮ್ಮ

Updated on: Apr 11, 2025 | 11:45 AM

‘ಲಕ್ಷ್ಮೀ ಬಾರಮ್ಮ’ (Lakshmi Baramma Serial) ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿರೋ ಕಾವೇರಿಗೆ ಎಲ್ಲಿಲ್ಲದ ಅಹಂ. ಈಕೆ ಕೇವಲ ಮೋಸವನ್ನೇ ಮಾಡೋದು ಎಂಬುದು ಮಗ ವೈಷ್ಣವ್​ಗೆ ಖಾತ್ರಿ ಆಗಿದೆ. ಬೆಟ್ಟದ ಮೇಲೆ ನಿಂತು ಈ ಬಗ್ಗೆ ಚರ್ಚೆ ನಡೆದಿದೆ. ಮಹಾಲಕ್ಷ್ಮೀ ಮುಗ್ಧೆ ಎಂಬುದು ವೈಷ್ಣವ್​ಗೆ ಗೊತ್ತಾಗಿದೆ. ತಾಯಿಯ ಕೆಟ್ಟ ಕೆಲಸಗಳೆಲ್ಲವೂ ಗೊತ್ತಾದ ಬಳಿಕ ಅದನ್ನು ನೇರವಾಗಿ ತಾಯಿ ಬಳಿಯೇ ಹೇಳಿದ್ದಾನೆ ವೈಷ್ಣವ್. ಇದನ್ನು ಕೇಳಿ ಕಾವೇರಿಗೆ ತಡೆದುಕೊಳ್ಳಲಾಗದೆ ಗುಡ್ಡದಿಂದ ಬಿದ್ದು ಸತ್ತೇ ಹೋಗಿದ್ದಾಳೆ. ಈ ಮೂಲಕ ಕಾವೇರಿ ಭವಿಷ್ಯ ಲಕ್ಷ್ಮೀ ಹೇಳಿದಂತೆ ಆಗಿದೆ. ವೈಷ್ಣವ್​​ಗೆ ಎರಡನೇ ಮದುವೆ ಮಾಡಬೇಕು ಎಂದು ಕಾವೇರಿ ಪ್ಲ್ಯಾನ್ ಮಾಡಿದ್ದಳು. ಆದರೆ, ಈ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಮೊದಲು ವೈಷ್ಣವ್​ಗೆ ಕೀರ್ತಿ ಜೊತೆ ಮದುವೆ ಫಿಕ್ಸ್ ಮಾಡಿದ್ದಳು ಕಾವೇರಿ. ಆದರೆ, ದಿನ ಕಳೆದಂತೆ ಕೀರ್ತಿ ಬದಲಾದಳು. ತನಗೆ ಅಪಾಯ ಇದೆ ಎಂದು ಅರಿತ ಕಾವೇರಿಯು, ಕೀರ್ತಿಯನ್ನು ಬೆಟ್ಟದಿಂದ ತಳ್ಳಿ ಆಕೆಗೆ ನೆನಪು ಹೋಗುವಂತೆ ಮಾಡಿದಳು. ಲಕ್ಷ್ಮೀನ ಸಾಯಿಸುವ ಪ್ರಯತ್ನ ನಡೆಯಿತು. ಇದೆಲ್ಲ ವಿಚಾರ ಗೊತ್ತಾದ ಬಳಿಕ ‘ಮುಖವಾಡ ಹಾಕಿಕೊಂಡು ಬದುಕಿದ್ದು ಸಾಕು’ ಎಂದು ತಾಯಿಗೆ ನೇರವಾಗಿ ಹೇಳಿದ್ದಾನೆ ವೈಷ್ಣವ್. ಇದನ್ನೂ ಓದಿ ...

Published On - 11:44 am, Fri, 11 April 25

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ