AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Remedy: ದೇಹವನ್ನು ತಂಪಾಗಿರಿಸಲು ನಿಮ್ಮ ಆಹಾರದಲ್ಲಿ ಕಲ್ಲು ಸಕ್ಕರೆಯನ್ನು ಸೇರಿಸಿ

ಕಲ್ಲು ಸಕ್ಕರೆ ಕೇವಲ ಸೇಹಿಯನ್ನು ಮಾತ್ರ ನಿಮ್ಮ ಆಹಾರದಲ್ಲಿ ಸೇರಿಸುವುದಿಲ್ಲ, ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆರೋಗ್ಯಕ್ಕೆ ಕಲ್ಲು ಸಕ್ಕರೆ ಹೇಗೆ ಉತ್ತಮ ಆಹಾರ ಎಂದು ಇಲ್ಲಿ ತಿಳಿಯಿರಿ

Summer Remedy: ದೇಹವನ್ನು ತಂಪಾಗಿರಿಸಲು ನಿಮ್ಮ ಆಹಾರದಲ್ಲಿ ಕಲ್ಲು ಸಕ್ಕರೆಯನ್ನು ಸೇರಿಸಿ
ಕಲ್ಲು ಸಕ್ಕರೆಯ ಪ್ರಯೋಜನಗಳುImage Credit source: Vinmec
ನಯನಾ ಎಸ್​ಪಿ
|

Updated on:Apr 15, 2023 | 10:46 AM

Share

ದೇಹವನ್ನು ತಂಪಾಗಿಸುವ ಆಹಾರ (Cooling Foods) ಎಂದು ಹೇಳಿದಾಗ ನಿಮ್ಮ ಮನಸ್ಸಿಗೆ ಸಾಮಾನ್ಯವಾಗಿ ಮೊಸರು, ಕಲ್ಲಂಗಡಿ, ಸೌತೆಕಾಯಿ, ಪುದೀನ ಮತ್ತು ಎಳನೀರು ನೆನಪಾಗುತ್ತದೆ ಅಲ್ಲವೇ. ಈ ಆಹಾರಗಳು ದೇಹದಲ್ಲಿನ ಉಷ್ಣಾಂಶವನ್ನು (Body Heat) ಕಡಿಮೆ ಮಾಡುತ್ತದೆ ಜೊತೆಗೆ ಬೇಸಿಗೆಯ (Summer) ದಿನಗಳಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಇವೆಲ್ಲದರ ಜೊತೆಗೆ ಕಲ್ಲು ಸಕ್ಕರೆ (Rock Sugar) ಕೂಡ ಈ ಆಹಾರಗಳ ಪಟ್ಟಿಯ ಅಡಿಯಲ್ಲಿಯೇ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಭಾರತೀಯ ಅಡುಗೆಮನೆಯಲ್ಲಿ ಅತ್ಯಂತ ಸಾಮಾನ್ಯವಾದ ಆಹಾರ ಪದಾರ್ಥವಾಗಿರುವ ಕಲ್ಲುಸಕ್ಕರೆ ಪೋಷಕಾಂಶಗಳಿಂದ ತುಂಬಿರುತ್ತದೆ ಅದು ಹೊರಗಿನ ಶಾಖವನ್ನು ಎದುರಿಸಲು ಸಹಾಯ ಮಾಡುತ್ತದೆ.

ಕಲ್ಲು ಸಕ್ಕರೆಯ ಆರೋಗ್ಯ ಪ್ರಯೋಜನಗಳು:

1. ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ:

ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಾರಣ ನೀವು ಭಾರೀ ಊಟದ ನಂತರ ಕಲ್ಲು ಸಕ್ಕರೆಯನ್ನು ಸೇವಿಸಬಹುದು. ಇದು ಊಟದ ನಂತರದ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುತ್ತದೆ.

2. ಸಾಮಾನ್ಯ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುತ್ತದೆ:

ಕಲ್ಲು ಸಕ್ಕರೆ ಸಾಮಾನ್ಯ ಶೀತ ಮತ್ತು ಕೆಮ್ಮು ಸೇರಿದಂತೆ ಹಲವಾರು ಕಾಲೋಚಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಗುಣಪಡಿಸುವ ಸಾಮರ್ಥ್ಯಗಳನ್ನು ಹೊಂದಿದೆ.

3. ಶಕ್ತಿಯನ್ನು ಹೆಚ್ಚಿಸುತ್ತದೆ:

ವಿಪರೀತ ಬೆವರು ಮತ್ತು ನಿರ್ಜಲೀಕರಣದಿಂದಾಗಿ, ಬೇಸಿಗೆಯಲ್ಲಿ ನಾವು ಸಾಮಾನ್ಯವಾಗಿ ಆಲಸ್ಯವನ್ನು ಅನುಭವಿಸುತ್ತೇವೆ. ಕಲ್ಲು ಸಕ್ಕರೆ ಸೂಕ್ತ ಪರಿಹಾರವನ್ನು ನೀಡುತ್ತದೆ. ದಿನವಿಡೀ ನೀವು ಲವಲವಿಕೆಯಿಂದ ಕೆಲಸ ಮಾಡಲು ತಕ್ಷಣವೇ ನಿಮಗೆ ಶಕ್ತಿಯನ್ನು ತುಂಬಲು ಸಹಾಯ ಮಾಡುತ್ತದೆ.

4. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ:

ಕಲ್ಲು ಸಕ್ಕರೆ ಅನಾದಿ ಕಾಲದಿಂದಲೂ ರಕ್ತಹೀನತೆ ಹೊಂದಿರುವ ಜನರಿಗೆ ಸಾಂಪ್ರದಾಯಿಕ ಪರಿಹಾರವಾಗಿದೆ. ಇದು ಖನಿಜಗಳು, ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳಿಂದ ತುಂಬಿರುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೌರ್ಬಲ್ಯ, ಸುಸ್ತು ಮತ್ತು ತಲೆತಿರುಗುವಿಕೆಯಂತಹ ರಕ್ತಹೀನತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹ ತಿಳಿದಿದೆ.

5. ದೃಷ್ಟಿ ಸುಧಾರಿಸುತ್ತದೆ:

ಸಾಮಾನ್ಯ ಸಕ್ಕರೆಗಿಂತ ಶ್ರೇಷ್ಠವಾಗಿರುವುದರ ಜೊತೆಗೆ, ಕಲ್ಲು ಸಕ್ಕರೆ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಅದಕ್ಕಾಗಿಯೇ, ಉತ್ತಮ ದೃಷ್ಟಿ ಮತ್ತು ಕಣ್ಣಿನ ಪೊರೆ ತಡೆಗಟ್ಟುವಿಕೆಗೆ ಸಹ ಸಲಹೆ ನೀಡಲಾಗುತ್ತದೆ.

ಕಲ್ಲು ಸಕ್ಕರೆ Vs ಸಕ್ಕರೆ: ಸಕ್ಕರೆಗಿಂತ ಕಲ್ಲು ಸಕ್ಕರೆಯನ್ನು ಏಕೆ ಉತ್ತಮವೆಂದು ಪರಿಗಣಿಸಲಾಗಿದೆ?

ಕಲ್ಲು ಸಕ್ಕರೆ ಮತ್ತು ಸಕ್ಕರೆ ಎರಡೂ ಸಂಸ್ಕರಿಸಿದ ಆಹಾರ ಪದಾರ್ಥಗಳಾಗಿವೆ. ಆದರೆ ಕಲ್ಲು ಸಕ್ಕರೆ ಸಕ್ಕರೆ ತಯಾರಿಸುವಾಗ ಬಳಸುವ ಯಾವುದೇ ರಾಸಾಯನಿಕವನ್ನು ಒಳಗೊಂಡಿಲ್ಲ. NDTV ವರದಿಯ ಪ್ರಕಾರ, ಮನೀಶಾ ಚೋಪ್ರಾ, “ಕಲ್ಲು ಸಕ್ಕರೆ ಕ್ಷಾರೀಯ ಸ್ವಭಾವವನ್ನು ಹೊಂದಿದ್ದು ಅದು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆಯೇ? ತಜ್ಞರ ಅಭಿಪ್ರಾಯ?

ಕಲ್ಲು ಸಕ್ಕರೆ Vs ಬೆಲ್ಲ: ಬೇಸಿಗೆಯಲ್ಲಿ ಕಲ್ಲು ಸಕ್ಕರೆಯನ್ನು ಏಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ?

ಕಲ್ಲು ಸಕ್ಕರೆ ಮತ್ತು ಬೆಲ್ಲ ಎರಡು ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಬೆಲ್ಲವನ್ನು ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುವುದಿಲ್ಲ. ರೂಪಾಲಿ ದತ್ತಾ ಹೇಳುವಂತೆ, “ಬೇಸಿಗೆಯಲ್ಲಿ ಕಲ್ಲು ಸಕ್ಕರೆ ಸೇವಿಸುವುದು ಉತ್ತಮ ಏಕೆಂದರೆ ಬೆಲ್ಲವು ನಮ್ಮ ದೇಹದ ಉಷ್ಣ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಕಲ್ಲು ಸಕ್ಕರೆ ನಮ್ಮ ದೇಹದ ಮೇಲೆ ‘ತಂಪಾಗಿಸುವ ಪರಿಣಾಮವನ್ನು’ ಹೊಂದಿದೆ. ಹಾಗೆಯೇ, ಬೆಲ್ಲವು ಬೇಸಿಗೆಯಲ್ಲಿ ಸುಲಭವಾಗಿ ಕರಗುತ್ತದೆ” ಎಂದು ಹೇಳಿದ್ದಾರೆ.

Published On - 7:30 am, Sat, 15 April 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?