AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayurveda: ಪ್ರತಿನಿತ್ಯ ನೀವು ಬಳಸುವ 5 ಗಿಡ ಮೂಲಿಕೆಗಳಿಂದ ಮನೆ ಮದ್ದು

ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೀವು ಹೊಂದಿರಬೇಕಾದ ಕೆಲವು ಆಯುರ್ವೇದ ಗಿಡ ಮೂಲಿಕೆಗಳು ನಿಮಗೆ ಹೇಗೆ ಉಪಯೀಗವಾಗುತ್ತದೆ ಎಂದು ತಿಳಿಯಬಹುದು.

Ayurveda: ಪ್ರತಿನಿತ್ಯ ನೀವು ಬಳಸುವ 5 ಗಿಡ ಮೂಲಿಕೆಗಳಿಂದ ಮನೆ ಮದ್ದು
ಆಯುರ್ವೇದ ಗಿಡಮೂಲಿಕೆಗಳು
Follow us
ನಯನಾ ಎಸ್​ಪಿ
|

Updated on: Apr 15, 2023 | 2:57 PM

ಆಯುರ್ವೇದ (Ayurveda) ಇಂದು ನೆನ್ನೆಯದಲ್ಲ. ಇತ್ತೀಚಿನ ದಿನಗಳಲ್ಲಿ ನಾವು ಕಾಯಿಲೆ (Disease) ಬಂದಾಗ ಸಾಧಾರಣವಾಗಿ ಮಾತ್ರೆಗಳನ್ನು (Tablets) ತೆಗೆದುಕೊಳ್ಳುತ್ತೇವೆ. ಮಾತ್ರೆಗಳು ಸಹಜವಾಗಿ ಆಂಗ್ಲ ಔಷಧಿ ಆಗಿರುತ್ತವೆ. ಆದರೆ ಪ್ರತಿ ಬಾರಿ ಇವುಗಳ ಮೇಲೆ ಅವಲಂಬಿತವಾದರೆ ಆರೋಗ್ಯಕ್ಕೆ ಸಹಜವಾಗಿ ಅಡ್ಡ ಪರಿಣಾಮಗಳು (Side-effects) ಎದುರಾಗುವ ಸಾಧ್ಯತೆ ಇರುತ್ತದೆ. ಆದರೆ ಆಯುರ್ವೇದ ಔಷಧಿಗಳು ಹಾಗಲ್ಲ. ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಔಷಧಿಗಳಲ್ಲಿ ಉತ್ತಮ ಪರಿಹಾರವಿದೆ. ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೀವು ಹೊಂದಿರಬೇಕಾದ ಕೆಲವು ಆಯುರ್ವೇದ ಗಿಡ ಮೂಲಿಕೆಗಳು ನಿಮಗೆ ಹೇಗೆ ಉಪಯೀಗವಾಗುತ್ತದೆ ಎಂದು ತಿಳಿಯಬಹುದು.

5 ಗಿಡ ಮೂಲಿಕೆಗಳನ್ನೂ ಸೇವಿಸುವುದರಿಂದ ಆಗುವ ರೋಗ್ಯ ಪ್ರಯೋಜನಗಳು

ತುಳಸಿ

ಔಷಧೀಯ ಬಳಕೆಗಾಗಿ ತಯಾರಿ/ಡೋಸೇಜ್:

  • ಜ್ವರ- 2 ಟೀ ಚಮಚ ತುಳಸಿ ಎಲೆಯ ರಸ + 1 ಟೀಸ್ಪೂನ್ ಜೇನುತುಪ್ಪ, ದಿನಕ್ಕೆ 1 ರಿಂದ 3 ಬಾರಿ.
  • ಶೀತ ಮತ್ತು ಕಫ- 1 ಟೀಸ್ಪೂನ್ ತುಳಸಿ ರಸ + ಚಿಟಿಕೆ ಕರಿಮೆಣಸಿನ ಪುಡಿ.
  • ಕೆಮ್ಮು- 1 ರಿಂದ 2 ಚಮಚ ತುಳಸಿ ರಸ + 1 ಚಮಚ ವಾಸ ಎಲೆ ರಸ.
  • ಚರ್ಮ ರೋಗಗಳು- ತುಳಸಿ ರಸ + ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಸೇವಿಸಬೇಕು
  • ಕಿವಿನೋವು- 1 ರಿಂದ 2 ಹನಿ ಬೆಚ್ಚಗಿನ ತುಳಸಿ ರಸ ಕಿವಿಗೆ ಮೆಲ್ಲಗೆ ಹಾಕಿ
  • ಗಾಯಗಳು- ತುಳಸಿ ಎಲೆಯ ಪೇಸ್ಟ್ ಅನ್ನು ಹಚ್ಚಿ
  • ಹಲ್ಲು ನೋವು- ತುಳಸಿ ರಸ ಹನಿಗಳು ಅಥವಾ ಪೇಸ್ಟ್ ಅನ್ನು ಬಳಸಿ
  • ಕೊಲೆಸ್ಟರಾಲ್ಮಿಯಾ ಮತ್ತು ರೋಗನಿರೋಧಕ ಶಕ್ತಿಗಾಗಿ- ಪ್ರತಿದಿನ 1 ಟೀಸ್ಪೂನ್ ತುಳಸಿ ರಸ ಸೇವಿಸಿ.

ಕುಮಾರಿ (ಅಲೋವೆರಾ)

  • ಈ ಎಲೆಗಳ ರಸವನ್ನು ಸುಟ್ಟಗಾಯ ಮತ್ತು ಚರ್ಮದ ಕಾಯಿಲೆಗಳಿಗೆ ಬಳಸಲಾಗುತ್ತದೆ.
  • ಕಿವಿನೋವು- ಉಗುರುಬೆಚ್ಚಗಿನ ರಸದ 2 ಹನಿಗಳು.
  • ಮುಟ್ಟಿನ ಕಾಯಿಲೆಗಳು- ದಿನಕ್ಕೆ 4 ಟೀಸ್ಪೂನ್ ರಸ.
  • ಉರಿಯೂತ ಮತ್ತು ಬಾವುಗಳಿಗೆ ಎಲೆಗಳ ಪೇಸ್ಟ್ ಅನ್ನು ಹಚ್ಚಬಹುದು
  • ಚರ್ಮದ ಹೊಳಪು- ಎಲೆ ಪೇಸ್ಟ್ + ಅರಿಶಿನ ಫೇಸ್ ಪ್ಯಾಕ್.

ಮಂದಾರ (ದಾಸವಾಳ)

ಬಳಸಬಹುದಾದ ಭಾಗಗಳು: ಎಲೆ ಮತ್ತು ಹೂವು

ಔಷಧೀಯ ಬಳಕೆಗಾಗಿ ತಯಾರಿ/ಡೋಸೇಜ್:

  • ಕೂದಲಿನ ಆರೈಕೆ – ಹೂವಿನ ರಸಕ್ಕೆ ಎಳ್ಳೆಣ್ಣೆ ಸೇರಿಸಿ ಅರ್ಧದಷ್ಟು ಕಡಿಮೆ ಆಗುವವರೆಗು ಕುದಿಸಿ ನಂತರ ಬಳಸಿ.
  • ಋತುಚಕ್ರದ ತೊಂದರೆಗಳು – 1 ರಿಂದ 2 ಚಮಚ ಎಲೆಗಳ ಪುಡಿಯನ್ನು ದಿನಕ್ಕೆ ಎರಡು ಬಾರಿ ಸೇವಿಸಿ.
  • ಕೆಮ್ಮು – 1 ಟೀಸ್ಪೂನ್ ಹೂವಿನ ಪೇಸ್ಟ್ ಅಥವಾ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ.
  • ಕಾಮಾಲೆ – 5 ದಿನಗಳವರೆಗೆ ಪ್ರತಿದಿನ 2 ಟೀಸ್ಪೂನ್ ಹೂವಿನ ಪೇಸ್ಟ್ ಸೇವಿಸಿ.
  • ಗಾಯಗಳು ಮತ್ತು ಊತ – ಎಲೆಗಳ ಪೇಸ್ಟ್ ಅನ್ನು ಹಚ್ಚಿ.

ಮುನಗಾ (ನುಗ್ಗೆ ಸೊಪ್ಪು)

ಬಳಸಿದ ಭಾಗಗಳು: ಎಲೆಗಳು, ಕಾಯಿ, ತೊಗಟೆ, ಬೀಜ ಮತ್ತು ಲ್ಯಾಟೆಕ್ಸ್

ಔಷಧೀಯ ಬಳಕೆಗಾಗಿ ತಯಾರಿ/ಡೋಸೇಜ್:

  • ಅಜೀರ್ಣ – ಎಲೆಯ ರಸ + 1 ಪಿಂಚ್ ಉಪ್ಪು.
  • ಕಿವಿನೋವು – ಕಾಂಡದ ತೊಗಟೆಯ ರಸದ 1 ರಿಂದ 2 ಹನಿಗಳು.
  • ಕೀಲು ನೋವು – ಎಲೆಗಳ ಪೇಸ್ಟ್ ಅನ್ನು ಅನ್ವಯಿಸಬಹುದು.
  • ಗಾಯ ಮತ್ತು ಹುಣ್ಣು – ಎಲೆಗಳ ಪೇಸ್ಟ್ ಅನ್ನು ಅನ್ವಯಿಸಬಹುದು.
  • ಕರುಳಿನ ಹುಳು – 4 ಟೀಸ್ಪೂನ್ ಎಲೆಗಳ ಕಷಾಯವನ್ನು ಸೇವಿಸಬಹುದು.

ಪುದಿನಾ

ಔಷಧೀಯ ಬಳಕೆಗಾಗಿ ತಯಾರಿ/ಡೋಸೇಜ್:

  • ಅಜೀರ್ಣ – ಚಟ್ನಿ ಸೇವಿಸಿ.
  • ನೋಯುತ್ತಿರುವ ಗಂಟಲು – ಕಷಾಯದೊಂದಿಗೆ ಗಾರ್ಗ್ಲಿಂಗ್ ಮಾಡಿ.
  • ಟೈಂಪನಿಟಿಸ್ / ಫ್ಲಾಟ್ಯುಲೆನ್ಸ್ – ನಿಂಬೆ ರಸದೊಂದಿಗೆ ಪುದಿನಾ ರಸ ಸೇವಿಸಿ.
  • ಶೀತ ಮತ್ತು ಕೆಮ್ಮು – ದಿನಕ್ಕೆ ಎರಡು ಬಾರಿ 4 ಟೀಸ್ಪೂನ್ ಕಷಾಯ ಸೇವಿಸಿ.
  • ಮುಟ್ಟಿನ ಅಸ್ವಸ್ಥತೆಗಳು – ಋತುಚಕ್ರದ ಸಮಯದಲ್ಲಿ ಅರ್ಧ ಗ್ಲಾಸ್ ಕಷಾಯ ಸೇವಿಸಿ.

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್