SSLC Result
ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ ಅದು 10ನೇ ತರಗತಿ ಅಂದರೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಿಗುವ ಅಂಕಪಟ್ಟಿ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವಪೂರ್ಣವಾದ ದಾಖಲೆಯಾಗಿದೆ. ಹೆಸರು, ಜನ್ಮ ದಿನಾಂಕ ಪರಿಶೀಲಿಸಲು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಂಕಪಟ್ಟಿಯನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಪ್ರಮಾಣ ಪತ್ರ ಅತ್ಯವಶ್ಯಕ. ಅದೇ ರೀತಿ ಉದ್ಯೋಗ, ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ, ಇನ್ನೂ ಅನೇಕ ರೀತಿಯ ಕೆಲಸ ಕಾರ್ಯಗಳಿಗೆ ಈ ಪ್ರಮಾಣ ಪತ್ರ ಬೇಕೇ ಬೇಕು. ಇಷ್ಟೆಲ್ಲಾ ಮಹತ್ವವುಳ್ಳ ಪ್ರಮಾಣ ಪತ್ರ ಪಡೆಯಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುವ 10ನೇ ತರಗತಿ ಉತ್ತೀರ್ಣರಾಗಬೇಕು. ಈ ಪರೀಕ್ಷೆ ಪ್ರತಿ ವರ್ಷ ನಡೆಯುತ್ತದೆ. ಇದು ಪಬ್ಲಿಕ್ ಪರೀಕ್ಷೆಯಾಗಿರುವುದರಿಂದ ಬಿಗಿ ಬಂದೋಬಸ್ತ್ನಲ್ಲಿ ನಡೆಸಲಾಗುತ್ತದೆ. ಆಯ್ದು ಕೊಂಡ ವಿಷಯಗಳ ಆಧಾರದ ಮೇಲೆ ಪರೀಕ್ಷೆಗಳು ನಡೆಯುತ್ತವೆ. ಆಯಾ ಶಾಲೆಗಳು ಕಳುಹಿಸಿದ ಮಾಹಿತಿ ಆಧಾರದ ಮೇಲೆ ವಿದ್ಯಾರ್ಥಿಗಳ ಹೆಸರಿನ ಮೇಲೆ ಹಾಲ್ ಟಿಕೆಟ್ ನೀಡಲಾಗುತ್ತೆ. ಆ ಹಾಲ್ ಟಿಕೆಟ್ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಅನುಮತಿ ಇರುತ್ತದೆ. ಕಾಲೇಜು ಮೆಟ್ಟಿಲು ಹತ್ತಲು ಈ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಬರುವ ಮೊದಲ ಘಟ್ಟವನ್ನು ಎಸ್ಎಸ್ಎಲ್ಸಿ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ
SSLC ಪರೀಕ್ಷೆ ವೇಳೆ ಕನ್ನಡದಲ್ಲಿಯೇ ವಿದ್ಯಾರ್ಥಿಗಳು ಫೇಲ್ ಆಗ್ತಿರೋದೇಕೆ?: ಅಚ್ಚರಿಯ ಮಾಹಿತಿ ಬಹಿರಂಗ
SSLC ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದ 19,000 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಆತಂಕ ಮೂಡಿಸಿದೆ. ಇದಕ್ಕೆ ಕಾರಣಗಳನ್ನು ಅಧ್ಯಯನ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿಯು, ಪಠ್ಯಕ್ರಮದ ಕೊರತೆ, ಭಾಷಾ ಶಿಕ್ಷಕರ ಅಭಾವ ಮತ್ತು ಪ್ರೋತ್ಸಾಹದ ಕೊರತೆಯನ್ನು ಗುರುತಿಸಿದೆ. ಅಲ್ಲದೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ಸೇರಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ.
- Prasanna Hegde
- Updated on: May 1, 2026
- 3:33 pm
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರ್ಕಾರದ ‘ಶಿಕ್ಷಣ ಗ್ಯಾರಂಟಿ’ ಅಸ್ತ್ರ!
2025-26ನೇ ಶೈಕ್ಷಣಿಕ ಸಾಲಿನ ಫಲಿತಾಂಶದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿದೆ. ಖಾಸಗಿ ಸಂಸ್ಥೆಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಇತ್ತ ರಾಜ್ಯ ಸರ್ಕಾರವು ಕೂಡ ಸರ್ಕಾರಿ ಶಾಲಾ-ಕಾಲೇಜುಗಳತ್ತ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೆಳೆಯಲು ಹೊಸ ಆಯಾಮದಲ್ಲಿ ಹೆಜ್ಜೆ ಇಟ್ಟು ಗಮನಸೆಳೆದಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲೂ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ. ಹಾಗಾದರೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
- Gangadhar Saboji
- Updated on: Apr 29, 2026
- 4:04 pm
SSLC ಫಲಿತಾಂಶದಲ್ಲಿ ಮತ್ತೊಂದು ಎಡವಟ್ಟು: ಕೇವಲ 12 ಅಂಕ ನಮೂದು; ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ದೊಡ್ಡ ಎಡವಟ್ಟು ಸಂಭವಿಸಿದೆ. ವಿದ್ಯಾರ್ಥಿನಿಗೆ ಉತ್ತಮ ಅಂಕ ಬಂದಿದ್ದರೂ ಅಂಕಪಟ್ಟಿಯಲ್ಲಿ ದಾಖಲಾಗಿದ್ದು ಮಾತ್ರ ಕಡಿಮೆ. ಈ ತಪ್ಪು ನಮೂದಿನಿಂದ ತೀವ್ರ ಮಾನಸಿಕ ಕುಸಿತಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೋಷಕರ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾಳೆ. ಇಲಾಖೆಯ ಈ ಲೋಪಕ್ಕೆ ಆಕ್ರೋಶ ವ್ಯಕ್ತವಾಗಿದೆ.
- Shivakumar Pattar
- Updated on: Apr 27, 2026
- 9:35 pm
SSLC ಫಲಿತಾಂಶದ ವೇಳೆ ಮೌಲ್ಯಮಾಪಕರಿಂದ ಭಾರಿ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ!
SSLC ಫಲಿತಾಂಶ ಪ್ರಕಟವಾಗಿದ್ದು, ಮೌಲ್ಯಮಾಪಕರ ಯಡವಟ್ಟಿನಿಂದ ವಿದ್ಯಾರ್ಥಿ ರಾಮದತ್ತ ಶರ್ಮ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ಅವರಿಗೆ ಬರಬೇಕಿದ್ದ 92 ಅಂಕಗಳ ಬದಲು, ಕಂಪ್ಯೂಟರ್ ಮಾರ್ಕ್ಸ್ ಎಂಟ್ರಿ ವೇಳೆ ಕೇವಲ 48 ಅಂಕಗಳನ್ನು ನಮೂದಿಸಲಾಗಿದೆ. ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿ ಫಲಿತಾಂಶದ ತಿದ್ದುಪಡಿಗೆ ಆಗ್ರಹಿಸಿದ್ದಾರೆ.
- Ashwith Mavinaguni
- Updated on: Apr 27, 2026
- 12:12 pm
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ದಾಖಲೆಯ ರಿಸಲ್ಟ್ ಬಗ್ಗೆ ವಿಶ್ವನಾಥ್ ಅನುಮಾನ
ಎಸ್ಎಸ್ಎಲ್ಸಿ ಪರೀಕ್ಷೆ 1 ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಶೇ.94.1ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕರ್ನಾಟಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದಾಖಲೆಯ ಫಲಿತಾಂಶ ಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಆದ್ರೆ, ಎಸ್ಎಸ್ಎಲ್ಸಿ ಫಲಿತಾಂಶದಲ್ಲಿನ ಅನಿರೀಕ್ಷಿತ ಏರಿಕೆಯ ಕುರಿತು ಮಾಜಿ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ತೀವ್ರ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- Ram
- Updated on: Apr 25, 2026
- 5:20 pm
ನಿನ್ನೆ ಫೇಲ್, ಇಂದು ಶಾಲೆಗೆ ಟಾಪರ್? ಅಂಧ ವಿದ್ಯಾರ್ಥಿನಿಯ SSLC ರಿಸಲ್ಟ್ ಗೊಂದಲ
ಶಿರಸಿಯ ಅಂಧ ವಿದ್ಯಾರ್ಥಿನಿಯ SSLC ಫಲಿತಾಂಶದ ಬಗ್ಗೆ ಕ್ಲ್ಯಾರಿಟಿ ಸಿಗುತ್ತಿಲ್ಲ. ನಿನ್ನೆ ಫೇಲ್ ಅಂತ ಬಂದಿದ್ದು, ಇಂದು ಶಾಲೆಗೆ ಟಾಪರ್ ಎನ್ನಲಾಗುತ್ತಿದೆ. ಆದರೆ ಶಿರಸಿ ಡಿಡಿಪಿಐ ಅಧಿಕಾರಿ ರಿಸಲ್ಟ್ ಬರುವುದಕ್ಕೆ ಇನ್ನು ಎರಡು ದಿನ ಬೇಕು ಎಂದಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯ ರಿಸಲ್ಟ್ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
- Suraj Mahaveer Utture
- Updated on: Apr 24, 2026
- 4:29 pm
ಕಲಬುರಗಿ ಮಕ್ಕಳ ಅಪಹಾಸ್ಯವೇಕೆ? ವಿಪಕ್ಷಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
ಪ್ರಸಕ್ತ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಕಳೆದ ವರ್ಷ 80.04ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ ಈ ವರ್ಷ ಶೇ.94.01ರಷ್ಟು ಫಲಿತಾಂಶದೊಂದಿಗೆ ಶೇ.14ರಷ್ಟು ಫಲಿತಾಂಶ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಕಲಬುರಗಿ ಕೊನೆ ಸ್ಥಾನದಲ್ಲಿದ್ದು, ಇದು ರಾಜಕೀಯ ವಾಗ್ಯುದ್ಧ ಕಾರಣವಾಗಿದೆ. ವಿಪಕ್ಷಗಳ ಟೀಕೆ, ವ್ಯಂಗ್ಯಗಳಿಗೆ ಖರ್ಗೆ ಕೌಂಟರ್ ಕೊಟ್ಟಿದ್ದಾರೆ.
- Dattatraya Patil
- Updated on: Apr 23, 2026
- 8:43 pm
ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ
ತಂದೆಯ ನಿಧನದ ದುಃಖದಲ್ಲಿದ್ದ ಶಿವಮೊಗ್ಗದ SSLC ವಿದ್ಯಾರ್ಥಿ ಪ್ರೀತಮ್, ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಆದರೆ, ಬಿಇಒ ಬಿ. ರಮೇಶ್ ಅವರ ಮನವೊಲಿಕೆ ಮತ್ತು ಬೆಂಬಲದಿಂದ ಪ್ರೀತಮ್ ಗಣಿತ ಸೇರಿದಂತೆ ಉಳಿದ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಾರೆ. ಬಿಇಓ ಅವರು ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
- Basavaraj Yaraganavi
- Updated on: Apr 23, 2026
- 6:48 pm
SSLC Exam 2 Time Table: 10ನೇ ತರಗತಿಯಲ್ಲಿ ಫೇಲ್ ಆದವರಿಗೆ ಮತ್ತೊಂದು ಚಾನ್ಸ್: ಪರೀಕ್ಷೆ-2 ವೇಳಾಪಟ್ಟಿ ಪ್ರಕಟ
ಎಸ್ಎಸ್ಎಲ್ಸಿ ಪರೀಕ್ಷೆ 2 ವೇಳಾಪಟ್ಟಿ: 2025–26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ. 94.10ರಷ್ಟು ದಾಖಲೆಯ ಉತ್ತೀರ್ಣತೆ ಸಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಕಲಬುರಗಿ ಕೊನೆ ಸ್ಥಾನದಲ್ಲಿದೆ. ಇನ್ನು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಇನ್ನೊಂದು ಅವಕಾಶ ಇದ್ದು, ಎರಡನೇ ಪರೀಕ್ಷೆ ಬರೆದು ಪಾಸಾಗಬಹುದು. ಹಾಗಾದ್ರೆ, ಮರುಪರೀಕ್ಷೆಯ ದಿನಾಂಕ, ವೇಳಾಪಟ್ಟಿ ವಿವರ ಇಲ್ಲಿದೆ.
- Ramesh B Jawalagera
- Updated on: Apr 23, 2026
- 6:35 pm
SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ
SSLC ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಕೋರ್ಟ್ ರದ್ದುಗೊಳಿಸಿ, ಅಂಕಗಳನ್ನು ನೀಡುವಂತೆ ಆದೇಶಿಸಿತ್ತು. ಆ ಬೆನ್ನಲ್ಲೇ ಫಲಿತಾಂಶ ಪ್ರಕಟಗೊಂಡಿದ್ದು, ತೃತೀಯ ಭಾಷೆಯಲ್ಲಿ 98.55% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಕ್ಕಳು ಪಾಸ್ ಆಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
- Prasanna Hegde
- Updated on: Apr 23, 2026
- 6:17 pm
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
ಶಿರಸಿಯ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್, ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಎಡವಟ್ಟು ಎದುರಿಸಿದ್ದಾರೆ. ಆರು ವಿಷಯಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ, ಸಮಾಜ ವಿಜ್ಞಾನ ಪರೀಕ್ಷೆಗೆ ಗೈರುಹಾಜರಾಗಿದ್ದಾಳೆ ಎಂದು ನಮೂದಿಸಲಾಗಿದೆ. ಆಡಿಯೋ ರೆಕಾರ್ಡಿಂಗ್ಗಳ ಮೂಲಕ ಶ್ರಮವಹಿಸಿ ಓದಿದ್ದ ಲೀಸಾ, ಶಿಕ್ಷಣ ಇಲಾಖೆಯ ಈ ತಪ್ಪಿನ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
- Suraj Mahaveer Utture
- Updated on: Apr 23, 2026
- 4:02 pm
SSLC Results 2026: 1 ಅಂಕದಿಂದ ಫಸ್ಟ್ ರ್ಯಾಂಕ್ ಮಿಸ್, ವಿದ್ಯಾರ್ಥಿನಿ ಹೇಳಿದ್ದೇನು?
2025-26ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಈ ವರ್ಷ ಎಸ್ಎಸ್ಎಲ್ಸಿಯಲ್ಲಿ ಶೇ.94.1ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ ಮೈಸೂರಿನ ವಿದ್ಯಾರ್ಥಿನಿ ಕೇವಲ ಒಂದು ಅಂಕದಿಂದ ಔಟ್ ಆಫ್ ಔಟ್ ಮಿಸ್ ಮಾಡಿಕೊಂಡಿದ್ದಾಳೆ.
- Ram
- Updated on: Apr 23, 2026
- 4:10 pm