AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cumin: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!

ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮ ಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ.

Cumin: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!
ಜೀರಿಗೆ: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!
TV9 Web
| Updated By: ಸಾಧು ಶ್ರೀನಾಥ್​|

Updated on: Aug 28, 2022 | 6:06 AM

Share

ಜೀರಿಗೆ: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!

  1. * ಜೀರಿಗೆ ಕಷಾಯವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೆಸ್) ಗುಣವಾಗುತ್ತದೆ.
  2. * ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ ಸೇವಿಸಿದರೆ ಶೀತ ಜ್ವರ ಎರಡೂ ಗುಣವಾಗುತ್ತದೆ.
  3. * ಊಟದ ನಂತರ ಸ್ವಲ್ಪ ಜೀರಿಗೆ ಪುಡಿ, ಕಾಳುಮೆಣಸು, ಸೈಂಧವ ಲವಣ ಸೇರಿಸಿ ಮಜ್ಜಿಗೆ ಹದಮಾಡಿ ಕುಡಿಯುವುದರಿಂದ ಮೂಲವ್ಯಾಧಿ ಮತ್ತು ಅತಿಸಾರ ಗುಣವಾಗುತ್ತದೆ.
  4. * ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮ ಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ.
  5. * ಜೀರಿಗೆ, ಸೈಂಧವ ಲವಣ ಸಮಪ್ರಮಾಣದಲ್ಲಿ ಸೇರಿಸಿ ನುಣ್ಣಗೆ ಅರೆದು ತುಪ್ಪವನ್ನು ಸೇರಿಸಿ ಬೆಚ್ಚಗೆ ಮಾಡಿ ಚೇಳು, ನಾಯಿ, ಸಾಲಿಂಗ, ಪಲ್ಲಿ, ಇಲಿ ಇವುಗಳ ಕಡಿತದಿಂದ ಆದ ಗಾಯಕ್ಕೆ ಹಚ್ಚಿದರೆ ನೋವು ನಿವಾರಕ ಮತ್ತು ವಿಷ ಏರುವುದಿಲ್ಲ.
  6. * ಜೀರಿಗೆ ಬೆಟ್ಟದ ನೆಲ್ಲಿಕಾಯಿ ಹತ್ತಿ ಎಲೆ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿ ತಲೆಗೆ ಪ್ಯಾಕ್ ಹಾಕಿದರೆ ಇರುಳುಗಣ್ಣು ಗುಣವಾಗುತ್ತದೆ.
  7. * ಜೀರಿಗೆ, ಏಲಕ್ಕಿ, ಪಟಿಗಾರದ ಅರಳು ಇವುಗಳನ್ನು ಚನ್ನಾಗಿ ಅರೆದು ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
  8. * ಗರ್ಭಿಣಿ ಸ್ತ್ರೀಯರು ಏಳು ತಿಂಗಳ ನಂತರ ಜೀರಿಗೆ ಕಷಾಯದಲ್ಲಿ ಹಾಲು ಸ್ವಲ್ಪ ಬೆಲ್ಲ ಸೇರಿಸಿ ಊಟದ ನಂತರ ಕುಡಿದರೆ ಗರ್ಭದ ನೀರು ಕಡಿಮೆ ಆಗುವುದಿಲ್ಲ ಮತ್ತು ಸುಲಭದ ಹೆರಿಗೆ ಆಗುತ್ತದೆ.
  9. * ಜೀರಿಗೆ ಪುಡಿ, ಹುಣಸೆ ಹಣ್ಣಿನ ರಸ, ಬೆಲ್ಲ ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ಪಿತ್ತವಿಕಾರ (ವರ್ಟಿಗೊ) ಗುಣವಾಗುತ್ತದೆ.
  10. * ಜೀರಿಗೆ ಸ್ವಲ್ಪ ಹುರಿದು ಕಾಳುಮೆಣಸು, ಓಮಂಕಾಳು, ಸೈಂಧವ ಲವಣ, ಅಳಲೆಕಾಯಿ ಸೇರಿಸಿ ನೀರು ಅಥವಾ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ವಾತ ವಿಕಾರ ಗುಣವಾಗುತ್ತದೆ.
  11. * ಜೀರಿಗೆಯನ್ನು ದಿನವೂ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣ ಕ್ರಿಯೆ ಸರಿಯಾಗುತ್ತದೆ.
  12. * ಊಟದ ನಂತರ ಜೀರಿಗೆ ಜಗಿದು ತಿಂದರೆ ಬಾಯಿ ವಾಸನೆ ನಿವಾರಣೆ ಆಗಿ ಹಲ್ಲು ಗಟ್ಟಿಯಾಗುತ್ತದೆ.
  13. * ಜೀರಿಗೆ ಕಷಾಯ ಕುಡಿದು ಹೊಕ್ಕಳಿಗೆ ಆಕಳು ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಅತಿಯಾದ ಕೆಮ್ಮು ಗುಣವಾಗುತ್ತದೆ. ಇದು ನನಗೆ ತಿಳಿದದ್ದು ಅಡುಗೆ ಮನೆಯ ಜೀರಿಗೆ ಕರಾಮತ್ತು ಇನ್ನೂ ಎಷ್ಟೋ. ( ಲೇಖಕಿ -ಸುಮನಾ ಮಳಲಗದ್ದೆ)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ