AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರೀರದಲ್ಲಿ ಇಂತಹ ಲಕ್ಷಣಗಳು ಕಾಣಿಸುತ್ತಿವೆಯೇ? ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯೇ ಕಾರಣ

ಹೆಚ್ಚು ಉಪ್ಪು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ತ್ಯಜಿಸುವುದು ಉತ್ತಮ. ಏಕೆಂದರೆ ಈ ಅಭ್ಯಾಸವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಶರೀರದಲ್ಲಿ ಇಂತಹ ಲಕ್ಷಣಗಳು  ಕಾಣಿಸುತ್ತಿವೆಯೇ? ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯೇ ಕಾರಣ
Salt
TV9 Web
| Edited By: |

Updated on: Aug 27, 2022 | 3:51 PM

Share

ಹೆಚ್ಚು ಉಪ್ಪು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ತ್ಯಜಿಸುವುದು ಉತ್ತಮ. ಏಕೆಂದರೆ ಈ ಅಭ್ಯಾಸವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇತ್ತೀಚಿನ ಹಲವಾರು ಅಧ್ಯಯನಗಳು ಹೆಚ್ಚು ಉಪ್ಪು ತಿನ್ನುವ ಅಪಾಯಗಳ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿವೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು ಗಂಭೀರ ಅಪಾಯಕ್ಕೆ ಸಿಲುಕಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಹೆಚ್ಚು ಉಪ್ಪನ್ನು ತಿನ್ನುವುದರಿಂದ ರಕ್ತದೊತ್ತಡ, ಹೃದಯಾಘಾತ, ಮೂತ್ರಪಿಂಡ, ಕಣ್ಣು ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ವಾಸ್ತವವಾಗಿ, ದೇಹದಲ್ಲಿ ಹೆಚ್ಚು ಉಪ್ಪು ಇದ್ದರೆ, ಹಲವು ಚಿಹ್ನೆಗಳು ಇವೆ. ಆ ಚಿಹ್ನೆಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ.

ಆಗಾಗ ಮೂತ್ರ ವಿಸರ್ಜನೆ: ಆಗಾಗ ಮೂತ್ರ ವಿಸರ್ಜನೆಯು ಅತಿಯಾದ ಉಪ್ಪು ಸೇವನೆಯ ಪ್ರಮುಖ ಲಕ್ಷಣವಾಗಿದೆ. ನೀವು ಹೆಚ್ಚು ಸಮಯ ಮೂತ್ರ ವಿಸರ್ಜನೆ ಮಾಡಿದರೂ ಅಥವಾ ಪದೇ ಪದೇ ಮೂತ್ರ ವಿಸರ್ಜನೆಗೆ ಹೋದರೂ ಈ ಲಕ್ಷಣ ಒಂದೇ ಆಗಿರುತ್ತದೆ.

ನಿರಂತರ ಬಾಯಾರಿಕೆ: ಹೆಚ್ಚು ಉಪ್ಪು ಸೇವನೆಯು ಆಗಾಗ ಬಾಯಾರಿಕೆಗೆ ಕಾರಣವಾಗಬಹುದು. ಸೋಡಿಯಂ ಅಂಶವಿರುವ ಆಹಾರಗಳು ನಿಮ್ಮ ದೇಹದ ಸಮತೋಲನವನ್ನು ಕೆಡಿಸಬಹುದು. ಇದನ್ನು ಸರಿದೂಗಿಸಲು ಉತ್ತಮ ಮಾರ್ಗವೆಂದರೆ ಹೆಚ್ಚು ನೀರು ಕುಡಿಯುವುದು.

ದೇಹದಲ್ಲಿ ಊತ: ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದ ವಿವಿಧ ಭಾಗಗಳಲ್ಲಿ ಊತ ಉಂಟಾಗುತ್ತದೆ. ನೀವು ಬೆಳಿಗ್ಗೆ ಹೊಟ್ಟೆ ಉಬ್ಬರಿಸಲು ಇದೂ ಒಂದು ಕಾರಣವಾಗಿರಬಹುದು. ಕಾಲ್ಬೆರಳುಗಳು ಮತ್ತು ಕಣಕಾಲುಗಳ ಸುತ್ತಲೂ ಊತವನ್ನು ಅನುಭವಿಸಬಹುದು. ಈ ಊತವು ದೇಹದಲ್ಲಿನ ಹೆಚ್ಚುವರಿ ದ್ರವದಿಂದ ಉಂಟಾಗುತ್ತದೆ. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ.

ಆಹಾರದ ಬಗ್ಗೆ ಗಮನವಿರಲಿ: ನಿಮ್ಮ ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸಬೇಕು ಎಂದು ನಿಮಗೆ ಅನಿಸುತ್ತದೆಯೇ? ಈ ವಿಧಾನವನ್ನು ಕಾಲಾನಂತರದಲ್ಲಿ ಬದಲಾಯಿಸಬೇಕು. ಆಹಾರಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಇಲ್ಲದಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.

ಆಗಾಗ ತಲೆನೋವು: ಆಗಾಗ ಸೌಮ್ಯವಾದ ತಲೆನೋವು ಬರುವುದಕ್ಕೆ ನಿರ್ಜಲೀಕರಣ ಕೂಡ ಕಾರಣವಾಗಿರಬಹುದು. ಈ ನೋವನ್ನು ಹೋಗಲಾಡಿಸಲು ಸಾಕಷ್ಟು ನೀರು ಕುಡಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ