AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಕೋಹಾಲ್ ಜೊತೆ ಸೇವಿಸಬಾರದ ಆಹಾರಗಳು, ತಿಂದರೆ ಅಷ್ಟೆ ಕತೆ

ಮದ್ಯಪಾನ ಮಾಡುವವರು ಮದ್ಯಪಾನ ಮಾಡುವಾಗ ಕೆಲವು ವಿಶೇಷ ಆಹಾರ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಆಹಾರವನ್ನು ಮದ್ಯಪಾನದ ವೇಳೆ ಸೇವಿಸಬಾರದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಆಲ್ಕೋಹಾಲ್ ಜೊತೆ ಸೇವಿಸಬಾರದ ಆಹಾರಗಳು, ತಿಂದರೆ ಅಷ್ಟೆ ಕತೆ
ಮದ್ಯವ್ಯಸನಿಗಳಿಗೆ ಆರೋಗ್ಯ ಸಲಹೆಗಳು
Rakesh Nayak Manchi
|

Updated on: Apr 21, 2023 | 7:08 AM

Share

ಮದ್ಯಪಾನ (Alcohol) ಮಾಡುವವರು ಮದ್ಯಪಾನ ಮಾಡುವಾಗ ಕೆಲವು ವಿಶೇಷ ಆಹಾರ ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದು ಆಹಾರವನ್ನು ಮದ್ಯಪಾನದ ವೇಳೆ ಸೇವಿಸಬಾರದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೆ, ಹೊಟ್ಟೆ ನೋವು, ಎದೆಯಲ್ಲಿ ಉರಿ ಮತ್ತು ವಾಂತಿ ಅನುಭವವಾಗುತ್ತದೆ. ಹಾಗಿದ್ದರೆ ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು? ಇಲ್ಲಿದೆ ನೋಡಿ

ಚಾಕೊಲೇಟ್ ಮತ್ತು ವೈನ್: ವೈನ್ ಜೊತೆ ಚಾಕೊಲೇಟ್ ತಿನ್ನುವುದು ಒಳ್ಳೆಯ ತಿಂಡಿ ಎಂದು ಭಾವಿಸಲಾಗಿದೆ. ಆದರೆ ಇದು ಅಪಾಯಕಾರಿ. ಚಾಕೊಲೇಟ್ ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ಅಸಿಡಿಟಿ ಕೂಡ ಉಂಟಾಗುತ್ತದೆ.

ಬೀನ್ಸ್ ಮತ್ತು ರೆಡ್ ವೈನ್: ಬೀನ್ಸ್ ಅನ್ನು ರೆಡ್ ವೈನ್ ಜೊತೆಗೆ ತೆಗೆದುಕೊಳ್ಳಬಾರದು. ಊಟದ ಮೊದಲು ಅಥವಾ ಪಾನೀಯದ ಸಮಯದಲ್ಲಿ ಬೀನ್ಸ್ ತಿನ್ನಬಾರದು ಎನ್ನಲಾಗುತ್ತದೆ. ಏಕೆಂದರೆ ಬೀನ್ಸ್ ಮತ್ತು ಬೇಳೆಕಾಳುಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕುಡಿಯುವಾಗ ಕಬ್ಬಿಣವು ದೇಹದಿಂದ ಹೀರಲ್ಪಡುವುದಿಲ್ಲ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಉಪ್ಪು ಹಾಕಿದ ಆಹಾರ ಮತ್ತು ತಂಪು ಪಾನೀಯ: ಅನೇಕ ಜನರು ಮದ್ಯ ಸೇವನೆ ಮಾಡುವಾ ಕರಿದ ಆಹಾರವನ್ನು ತಿನ್ನುತ್ತಾರೆ. ಹೀಗೆ ತಿನ್ನುವುದರಿಂದ ನಿಮ್ಮ ದೇಹವು ಹೈಡ್ರೇಟ್ ಆಗುತ್ತದೆ. ಇದಲ್ಲದೆ, ಶಕ್ತಿಯು ಕಡಿಮೆಯಾಗುತ್ತದೆ. ಆದ್ದರಿಂದ ಪಾನೀಯದ ಸಮಯದಲ್ಲಿ ಗ್ರಿಲ್ಡ್ ಚಿಕನ್ ಮತ್ತು ತರಕಾರಿ ವಸ್ತುಗಳನ್ನು ಸೇವಿಸಿ.

ಬ್ರೆಡ್ ಮತ್ತು ಬಿಯರ್: ಬ್ರೆಡ್ ಮತ್ತು ಬಿಯರ್ ಹಾನಿಕಾರಕ ಸಂಯೋಜನೆಯಾಗಿದೆ. ಆಲ್ಕೋಹಾಲ್ನೊಂದಿಗೆ ಸಹ ಪ್ರಯತ್ನಿಸಬೇಡಿ. ಬ್ರೆಡ್ ತಿನ್ನುವುದರಿಂದ ವಾಯು ಉಂಟಾಗುತ್ತದೆ. ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀವು ಹೆಚ್ಚು ಬಿಯರ್ ಮತ್ತು ಬ್ರೆಡ್ ಸೇವಿಸಿದರೆ ವಾಂತಿ ಕೂಡ ಆಗುತ್ತದೆ.

ಕಾಫಿ ಮತ್ತು ವೈನ್: ಕಾಫಿ ಮತ್ತು ಆಲ್ಕೋಹಾಲ್ ಉತ್ತಮ ಸಂಯೋಜನೆಯಲ್ಲ. ಕಾಫಿ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನೀವು ಹೆಚ್ಚು ಆಲ್ಕೋಹಾಲ್ ಸೇವಿಸುವವರಾಗಿದ್ದರೆ ಈ ಆಹಾರ ಸಂಯೋಜನೆ ಬಿಟ್ಟುಬಿಡಿ.

ಮತ್ತಷ್ಟು ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?