ಮಧುಮೇಹದಿಂದ ಬಳಲುತ್ತಿರುವ 5ರಲ್ಲಿ ಒಬ್ಬರು 18-30 ವರ್ಷ ವಯಸ್ಸಿನವರು: ಸಂಶೋಧನೆ

ಸಂಶೋಧನೆಯೊಂದರ ಪ್ರಕಾರ ಶೇಕಡಾ 30 ರಲ್ಲಿ 22 ರಷ್ಟು ಮಧುಮೇಹಿಗಳು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಯುವ ಪೀಳಿಗೆಯಲ್ಲಿ ಮಧುಮೇಹ ಹರಡುವಿಕೆ ಹೆಚ್ಚುತ್ತಿದೆ ಎಂದು ಬಹಿರಂಗ ಪಡಿಸಿದೆ.

ಮಧುಮೇಹದಿಂದ ಬಳಲುತ್ತಿರುವ 5ರಲ್ಲಿ ಒಬ್ಬರು 18-30 ವರ್ಷ ವಯಸ್ಸಿನವರು: ಸಂಶೋಧನೆ
ಮಧುಮೇಹ
Follow us
|

Updated on: Aug 01, 2023 | 6:58 PM

ಫಿಟರ್‌ಫ್ಲೈ, ಡಿಜಿಟಲ್ ಥೆರಪ್ಯೂಟಿಕ್ಸ್‌ನಲ್ಲಿ (DTx) ಪರಿಣತಿ ಹೊಂದಿರುವ ಆರೋಗ್ಯ-ತಂತ್ರಜ್ಞಾನ ಕಂಪನಿಯು, ಮಧುಮೇಹ ಪೂರ್ವ ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡ ಸುಮಾರು 16,000 ಡಿಜಿಟಲ್ ಸಂವಹನಗಳ ವಿಶ್ಲೇಷಣೆಯಿಂದ ಮಧುಮೇಹದಿಂದ ಬಳಲುತ್ತಿರುವವರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಪ್ಲಾಟ್‌ಫಾರ್ಮ್‌ನ ಮಧುಮೇಹ ರಿವರ್ಸಲ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಒಂದು ವರ್ಷದಲ್ಲಿ ನಡೆಸಿದ ವಿಶ್ಲೇಷಣೆಯು ಮೌಲ್ಯಯುತವಾದ ಸಂಶೋಧನೆಗಳನ್ನು ಒದಗಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 101 ಮಿಲಿಯನ್ ಮೀರಿದೆ ಎಂದು ಇತ್ತೀಚಿನ ವರದಿಯು ತೋರಿಸಿದ ಸಮಯದಲ್ಲಿ ಈ ಒಳನೋಟಗಳು ಬಂದಿವೆ, ಹೆಚ್ಚುವರಿಯಾಗಿ 136 ಮಿಲಿಯನ್ ಅನ್ನು ಪ್ರಿ-ಡಯಾಬಿಟಿಕ್ ಎಂದು ವರ್ಗೀಕರಿಸಲಾಗಿದೆ.

ಪ್ರಮುಖವಾಗಿ ಸಂಶೋಧನೆಯಲ್ಲಿ, ವಿಶ್ಲೇಷಿಸಿದ ದತ್ತಾಂಶದ ಪ್ರಕಾರ ಈ ಉನ್ನತ ಮಟ್ಟದ ಶೇಕಡಾ 30 ರಲ್ಲಿ 22 ರಷ್ಟು ರೋಗಿಗಳು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ ಮತ್ತು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಯುವ ಪೀಳಿಗೆಯಲ್ಲಿ ಮಧುಮೇಹ ಹರಡುವಿಕೆ ಹೆಚ್ಚುತ್ತಿದೆ ಎಂದು ಬಹಿರಂಗ ಪಡಿಸಿದೆ. ಮಧುಮೇಹ ಹೊಂದಿರುವ ಐದು ವ್ಯಕ್ತಿಗಳಲ್ಲಿ ಒಬ್ಬರು (20%) 18 ರಿಂದ 30 ವರ್ಷ ವಯಸ್ಸಿನೊಳಗಿನವರು ಹಾಗೂ ಶೇಕಡಾ 60ರಷ್ಟು ಜನರು 18-45 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿದುಬಂದಿದೆ. ಕಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮಧುಮೇಹವು ಜನಸಂಖ್ಯಾ ಲಾಭಾಂಶ ಮತ್ತು ಆರ್ಥಿಕ ಬೆಳವಣಿಗೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೀಲು ನೋವು, ಮೊಣಕಾಲುಗಳ ಊತ: ಮಕ್ಕಳಲ್ಲೂ ಕಂಡು ಬರುತ್ತಿದೆ ಈ ಸಮಸ್ಯೆ, ಅಧ್ಯಯನದ ವರದಿ ಇಲ್ಲಿದೆ

ದತ್ತಾಂಶದಲ್ಲಿ ಮುಖ್ಯವಾಗಿ ತಿಳಿಸಲಾದ ಮತ್ತೊಂದು ಅಂಶವೆಂದರೆ ರೋಗನಿರ್ಣಯವನ್ನು ಲೆಕ್ಕಿಸದೆ ಮಧುಮೇಹವನ್ನು ನಿರ್ಲಕ್ಷ್ಯಿಸುವುದು. ಶೇಕಡಾ 70 ರಷ್ಟು ವ್ಯಕ್ತಿಗಳು ಮಧುಮೇಹದ ಕುಟುಂಬದ ಇತಿಹಾಸವನ್ನು ಹೊಂದಿದ್ದರೂ, ಸಮಸ್ಯೆಯನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು