AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಯಾಬಿಟೀಸ್: ಹೃದ್ರೋಗ ಮತ್ತು ಮೂತ್ರಪಿಂಡ ಸಮಸ್ಯೆಗಳಿಂದ ಬಚಾವಾಗಲು ಆಯುರ್ವೇದದ ಪರಿಹಾರಗಳು

ಮಧುಮೇಹ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗುತ್ತದೆ ಮತ್ತು ಇದರಿಂದ ಬಳಲುವ ಮೂವರಲ್ಲಿ ಒಬ್ಬರು ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಗೆ ಈಡಾಗುತ್ತಾರೆ ಎಂದು ಡಾ ಭಾವಸಾರ್ ಹೇಳುತ್ತಾರೆ.

ಡಯಾಬಿಟೀಸ್: ಹೃದ್ರೋಗ ಮತ್ತು ಮೂತ್ರಪಿಂಡ ಸಮಸ್ಯೆಗಳಿಂದ ಬಚಾವಾಗಲು ಆಯುರ್ವೇದದ ಪರಿಹಾರಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2022 | 8:06 AM

ಮಧುಮೇಹದಿಂದ (Diabetes) ಬಳಲುವವರಲ್ಲಿ ಆರೋಗ್ಯವಂತರಿಗೆ (ಮಧುಮೇಹದ ಸಮಸ್ಯೆ ಇಲ್ಲದವರು) ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲೇ ಹೃದ್ರೋಗಗಳು (heart diseases) ಕಾಣಿಸಿಕೊಳ್ಳುತ್ತವೆ. ಮಧುಮೇಹಿಗಳಿಗೆ ಹೃದಯ ವೈಫಲ್ಯಕ್ಕೊಳಗಾಗುವ ಆಪಾಯ ಜಾಸ್ತಿ ಇರುತ್ತದೆ ಎಂದು ಹೇಳುವ ಆಯುರ್ವೇದ ತಜ್ಞ ಡಾ ಡಾ ದಿಕ್ಸಾ ಭಾವಸಾರ (Dr Dixa Bhavsar) ಅವರು ಮಧುಮೇಹಿಗಳು ಹೃದಯಾಘಾತಕ್ಕೊಳಗಾಗುವ ಸಾಧ್ಯತೆ ಆರೋಗ್ಯವಂತರಿಗೆ ಹೋಲಿಸಿದರೆ 4 ಪಟ್ಟು ಜಾಸ್ತಿ ಎಂದು ಹೇಳುತ್ತಾರೆ.

ಮಧುಮೇಹ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗುತ್ತದೆ ಮತ್ತು ಇದರಿಂದ ಬಳಲುವ ಮೂವರಲ್ಲಿ ಒಬ್ಬರು ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಗೆ ಈಡಾಗುತ್ತಾರೆ ಎಂದು ಡಾ ಭಾವಸಾರ್ ಹೇಳುತ್ತಾರೆ. ಹಾಗಂತ ವ್ಯಕ್ತಿಯೊಬ್ಬನಲ್ಲಿ ಡಯಾಬಿಟೀಸ್ ಪತ್ತೆಯಾದ ಕೂಡಲೇ ಕಿಡ್ನಿ ಸಮಸ್ಯೆಗಳೂ ತಲೆದೋರುವುದಿಲ್ಲ. ಅದು ಆರಂಭವಾದ 10-15 ವರ್ಷಗಳ ನಂತರ ಮೂತ್ರಪಿಂಡಗಳಿಗೆ ರಕ್ತವನ್ನು ಶುದ್ಧೀಕರಿಸುವುದದು ಕಷ್ಬವಾಗತೊಡಗುತ್ತದೆ.

ಡಯಾಬಿಟೀಸ್​​ನಿಂದ (ಟೈಪ್ 1 ಮತ್ತು 2) ಬಳಲುತ್ತಿರವವರು ಹೃದಯ ಮತ್ತು ಮೂತ್ರಪಿಂಡಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮತ್ತು ಅವು ಸಪರ್ಪಕವಾಗಿ ಕಾರ್ಯ ನಿರ್ವಹಿಸಲು ಅಯುರ್ವೇದ ತಜ್ಞರು ಕೆಲವು ಉಪಯೋಗಕಾರಿ ಟಿಪ್ಸ್ ನೀಡುತ್ತಾರೆ.

1. ನೀರು, ಕಾಫಿ ಮತ್ತು ಚಹಾ ಕುಡಿಯುವಾಗ ಅದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ (ಚಕ್ಕೆ) ಸೇರಿಸಬೇಕು.

2. ಊಟಕ್ಕೆ ಒಂದು ಗಂಟೆ ಮೊದಲು ಅಥವಾ ನಂತರ 10-20 ಮಿ. ಲೀ ಸಾವಯವ ಸೇಬಿನ ಸೈಡರ್ ವಿನೆಗರ್ ಸೇವಿಸಬೇಕು.

3. ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೆ ಎರಡು ಬಾರಿ ಉಪ್ಪು, ಡೈರಿ ಉತ್ಪನ್ನಗಳು ಕಾಳುಗಳನ್ನು ತಿನ್ನವುದನ್ನು ಸಂಪೂರ್ಣವಾಗಿ ವರ್ಜಿಸಿ.

4. ಪ್ರತಿದಿನ ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಒಂದು ಚಮಚೆಯಷ್ಟು ನೆನೆಸಿದ ಮೆಂತೆಕಾಳುಗಳನ್ನು ತಿನ್ನಿರಿ ಮತ್ತು ಕಾಳುಗಳನ್ನು ಚಹಾಗೆ ಸೇರಿಸಿ ಕುಡಿಯಿರಿ.

5. ಪ್ರತಿದಿನ ಕನಿಷ್ಟ 20 ನಿಮಿಷಗಳ ಪ್ರಾಣಯಾಮ ಮಾಡಿ ಇಲ್ಲವೇ ದೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ಅದನ್ನು ಹೊರಹಾಕುವುದನ್ನು ಮಾಡಿ.

6. ವಾರಕ್ಕೆ ಕನಿಷ್ಟ 6 ಗಂಟೆಗಳ ಕಾಲ ವ್ಯಾಯಾಮ ಮಾಡಿ.

7. ನಿಮ್ಮ ಆಹಾರ ಪದ್ಧತಿಯಲ್ಲಿ ತಪ್ಪದೆ ಬೆಳ್ಳುಳ್ಳಿ ಸೇರಿಸಿ.

8. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಪ್ರಮುಖವಾದದ್ದು.

9. ಕರಿದ ಆಹಾರ ಪದಾರ್ಥಗಳು, ಕೇಫೀನ್, ಅನ್ನ, ಸಕ್ಕರೆ ಮತ್ತು ಅಲ್ಕೊಹಾಲ್ ಮೊದಲಾದವುಗಳ ಸೇವನೆ ಮಿತಿಯಾಗಿರಲಿ. ಸೀಸನಲ್ ಹಣ್ಣುಗಳು, ತರಕಾರಿ ಸೇವನೆ ಹೆಚ್ಚಿಸಿರಿ ಮತ್ತು ಆಗಷ್ಟೇ ತಯಾರಿಸಿದ ಬಿಸಿಬಿಸಿ ಆಹಾರವನ್ನು ಸೇವಿಸಿರಿ.

‘ಕಾಯಿಲೆಗಳಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ನೆಮ್ಮದಿಯುತ ಬದುಕು ನಡೆಸಲು ಆರೋಗ್ಯಕರ ಜೀವನಶೈಲಿಯ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯವಾಗಿಟ್ಟುಕೊಳ್ಳಬೇಕು. ಇಲ್ಲಿ ತಿಳಿಸಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ನಿಮ್ಮ ಸಮೀಪದ ಆಯುರ್ವೇದ ತಜ್ಞರನ್ನು ಸಂಪರ್ಕಿಸಿರಿ. ನಿಮ್ಮ ಪ್ರಕೃತಿ, ಮಾನಸಿಕ ಆರೋಗ್ಯ, ಸಕ್ಕರೆ ಪ್ರಮಾಣ, ದೈಹಿಕ ಚಟುವಟಿಕೆಗಳು ಮತ್ತು ನಿದ್ರೆ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ನಿಖರವಾದ ಮಾಹಿತಿ ನೀಡುತ್ತಾರೆ,’ ಎಂದು ಡಾ ಭಾವಸಾರ್ ಹೇಳುತ್ತಾರೆ.

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್