AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆ ಎಲೆ ಊಟ ಅಂತ ಅಸಡ್ಡೆ ಮಾಡುವವರು ಇದ್ರಿಂದ ಸಿಗುವ ಪ್ರಯೋಜನ ತಿಳಿದ್ರೆ ಶಾಕ್ ಆಗುವುದು ಖಂಡಿತ

ನಮ್ಮಲ್ಲಿ ಬಾಳೆ ಎಲೆಯ ಮೇಲೆ ಊಟ ಮಾಡುವ ವಿಶಿಷ್ಟ ಸಂಪ್ರದಾಯವಿದೆ. ಆದರೆ ಇದು ಹಬ್ಬ ಮತ್ತು ಶುಭ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರಬಾರದು. ಏಕೆಂದರೆ ಇದು ಪೂರ್ವಜರಿಂದ ಬಂದಿರುವ ಅಭ್ಯಾಸ ಮಾತ್ರವಲ್ಲದೆ ಪರಿಸರಕ್ಕೆ ಪ್ರಯೋಜನಕಾರಿಯಾದ ಒಂದು ಉತ್ತಮ ವಿಧಾನ. ಆಯುರ್ವೇದದ ಪ್ರಕಾರ, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಹಾಗಾದರೆ ಅವು ಯಾವುವು? ಬಾಳೆ ಎಲೆಯ ಊಟ ಬಹಳ ಶ್ರೇಷ್ಠ ಏಕೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಾಳೆ ಎಲೆ ಊಟ ಅಂತ ಅಸಡ್ಡೆ ಮಾಡುವವರು ಇದ್ರಿಂದ ಸಿಗುವ ಪ್ರಯೋಜನ ತಿಳಿದ್ರೆ ಶಾಕ್ ಆಗುವುದು ಖಂಡಿತ
Eating On Banana LeavesImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 15, 2025 | 5:25 PM

Share

ಸಾಮಾನ್ಯವಾಗಿ ನಾವು ಹಬ್ಬ (Festival), ಶುಭ ಸಮಾರಂಭ, ಮದುವೆ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಬಾಳೆ ಎಲೆ (Banana Leaf) ಯಲ್ಲಿ ಊಟ ಮಾಡುತ್ತೇವೆ. ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ಪದ್ಧತಿ ಈಗ ಎಲ್ಲೆಡೆ ಕಂಡುಬರುತ್ತಿದೆ. ಮಾಡಿದ ಅಡುಗೆಯನ್ನು ಬಾಳೆಯಲ್ಲಿ ಬಡಿಸಿ ಅದರಲ್ಲಿಯೇ ಊಟ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯ. ಇದು ಪೂರ್ವಜರಿಂದ ಬಂದಿರುವ ಅಭ್ಯಾಸ ಮಾತ್ರವಲ್ಲದೆ ಪರಿಸರಕ್ಕೆ ಪ್ರಯೋಜನಕಾರಿಯಾದ ಒಂದು ಉತ್ತಮ ವಿಧಾನ. ಆದರೆ ಹಲವರಿಗೆ ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಸರಿಯಾಗಿ ತಿಳಿದಿಲ್ಲ. ಇದೊಂದು ಅಭ್ಯಾಸ ಮಾತ್ರವಲ್ಲ ಆಯುರ್ವೇದದ ಪ್ರಕಾರ, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳಿವೆ. ಅವು ಯಾವುವು? ಬಾಳೆ ಎಲೆಯ ಊಟ ಬಹಳ ಶ್ರೇಷ್ಠ ಏಕೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬಾಳೆ ಎಲೆಗಳಲ್ಲಿ, ಪಾಲಿಫಿನಾಲ್‌ಗಳು ಎಂಬ ನೈಸರ್ಗಿಕ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಡೆಯುತ್ತವೆ. ಬಿಸಿ ಆಹಾರವು ಎಲೆಯೊಂದಿಗೆ ಸಂಪರ್ಕಕ್ಕೆ ಬಂದಾಗ, ಈ ಪೋಷಕಾಂಶಗಳು ಆಹಾರದೊಂದಿಗೆ ಲಘುವಾಗಿ ಬೆರೆತು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.

ಆಹಾರ ರುಚಿಯನ್ನು ಇಮ್ಮಡಿಗೊಳಿಸುತ್ತದೆ

ರುಚಿಕರವಾಗಿರುವ ಬಿಸಿ ಆಹಾರವು ಬಾಳೆ ಎಲೆಯ ಮೇಲಿನ ಮೃದುವಾದ ಲೇಪನದ ಮೇಲೆ ಬಡಿಸಿದಾಗ ವಿಶೇಷವಾದ ನೈಸರ್ಗಿಕ ಸುವಾಸನೆ ಬಿಡುಗಡೆಯಾಗುತ್ತದೆ. ಈ ಸುವಾಸನೆಯು ಊಟವನ್ನು ಹೆಚ್ಚು ಸುವಾಸನೆಯುಕ್ತವಾಗಿಸುತ್ತದೆ.

ಇದನ್ನೂ ಓದಿ: Daily Devotional: ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ

ಪರಿಸರ ಸಂರಕ್ಷಣೆಗೆ ಒಳ್ಳೆಯದು

ಬಾಳೆ ಎಲೆಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, 100% ಜೈವಿಕ ವಿಘಟನೀಯವಾಗಿವೆ. ಬಳಕೆಯ ನಂತರ, ಅವು ನೈಸರ್ಗಿಕವಾಗಿ ಕೊಳೆಯುತ್ತವೆ ಮತ್ತು ಮಣ್ಣಿಗೆ ಗೊಬ್ಬರವಾಗಿ ಬದಲಾಗುತ್ತವೆ. ಪ್ಲಾಸ್ಟಿಕ್ ಅಥವಾ ಇತರ ವಸ್ತುಗಳಿಗಿಂತ ಭಿನ್ನವಾಗಿದ್ದು ಪರಿಸರಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿ ಮಾಡುವುದಿಲ್ಲ.

ಬಿಸಿ ಆಹಾರಕ್ಕೆ ಉತ್ತಮ

ಬಾಳೆ ಎಲೆ ಬಿಸಿ ಭಕ್ಷ್ಯಗಳನ್ನು ಸುಲಭವಾಗಿ ತಡೆದುಕೊಳ್ಳುತ್ತವೆ. ಅವುಗಳ ಮೇಲಿನ ನೈಸರ್ಗಿಕ ಮೇಣದ ಪದರವು ಆಹಾರ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಹೆಚ್ಚುವರಿಯಾಗಿ, ಶಾಖದಿಂದಾಗಿ ಯಾವುದೇ ರೀತಿಯ ಹಾನಿಕಾರಕ ರಾಸಾಯನಿಕಗಳು ಉತ್ಪತ್ತಿಯಾಗುವುದಿಲ್ಲ.

ಜೀರ್ಣಕ್ರಿಯೆಗೆ ಒಳ್ಳೆಯದು

ಬಾಳೆ ಎಲೆಗಳಲ್ಲಿ ತಿನ್ನುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ಈ ಅಭ್ಯಾಸವು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ