AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharani Nakshatra: ಭರಣಿಯಲ್ಲಿ ನೀವು ಜನಿಸಿದ್ದರೆ ನೀವು ಹೀಗಿರುವಿರಿ..

ಈ ನಕ್ಷತ್ರದ ದೇವತೆ ಯಮ. ಹಾಗಾಗಿ ಶುಭಕಾರ್ಯಗಳಿಗೆ ಈ ನಕ್ಷತ್ರದ ದಿನ ಶುಭವಲ್ಲ ಎನ್ನುತ್ತಾರೆ. ಈ ನಕ್ಷತ್ರಕ್ಕೆ ಅಪಭರಣೀ ಎನ್ನುವುದು ಪ್ರಾಚೀನ ಹೆಸರು. ನೆಲ್ಲಿ ಮರ ಭರಣೀ ನಕ್ಷತ್ರದ ವೃಕ್ಷವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಈ ಕೆಳಗಿನ ಗುಣಗಳಿಂದ ಇರುವರು.

Bharani Nakshatra: ಭರಣಿಯಲ್ಲಿ ನೀವು ಜನಿಸಿದ್ದರೆ ನೀವು ಹೀಗಿರುವಿರಿ..
ಸಾಂದರ್ಭಿಕ ಚಿತ್ರ (ಯಮ ದೇವ)
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 25, 2024 | 10:28 AM

Share

ಇಪ್ಪತ್ತೇಳು ನಕ್ಷತ್ರಗಳಲ್ಲಿ ಭರಣೀ ಎರಡನೇ ನಕ್ಷತ್ರ. ಇದು ಮೇಷ ರಾಶಿಯಾಗಿಯೇ ಪೂರ್ಣವಾಗಿ ಬರುತ್ತದೆ. ಇದು ಮೂರ ನಕ್ಷತ್ರಗಳ ಗುಚ್ಛವೆಂದು ತಾರಾವಿದರು ಹೇಳುತ್ತಾರೆ. ಈ ನಕ್ಷತ್ರದ ದೇವತೆ ಯಮ. ಹಾಗಾಗಿ ಶುಭಕಾರ್ಯಗಳಿಗೆ ಈ ನಕ್ಷತ್ರದ ದಿನ ಶುಭವಲ್ಲ ಎನ್ನುತ್ತಾರೆ. ಈ ನಕ್ಷತ್ರಕ್ಕೆ ಅಪಭರಣೀ ಎನ್ನುವುದು ಪ್ರಾಚೀನ ಹೆಸರು. ನೆಲ್ಲಿ ಮರ ಭರಣೀ ನಕ್ಷತ್ರದ ವೃಕ್ಷವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಈ ಕೆಳಗಿನ ಗುಣಗಳಿಂದ ಇರುವರು.

ಅಪಕೀರ್ತಿ :

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವಾಗಲೂ ಅಪಕೀರ್ತಿಗಳು ಬರುತ್ತಲೇ ಇರುತ್ತವೆ. ಎಂತಹ ಒಳ್ಳೆಯ ಕೆಲಸವನ್ನೇ ಮಾಡಿದರೂ ಅಲ್ಲಿ ಒಂದು ಅಪಕೀರ್ತಿ ಯಾರಿಂದಲಾದರೂ ಬರುವುದು.

ಸಂತೋಷದಿಂದ ಕಾಲಹರಣ :

ಯಾವಾಗಲೂ ಸಂತೋಷದಿಂದ ಇರಬೇಕು ಎನ್ನುವುದು ಇವರ ತತ್ತ್ವ. ಹಾಗಾಗಿ ಏನಾದರೂ ವಿನೋದದ ಕಾರ್ಯ ಅಥವಾ ವಿನೋದದ ಮಾತನ್ನು ಆಡುತ್ತಾರೆ.

ನೀರಿನಿಂದ ಭಯ :

ಇವರು ನೀರಿನಿಂದ ಭಯಪಡುತ್ತಾರೆ.‌ ಅಂದರೆ ನದಿ, ಸರೋವರ, ಕೆರೆ ಮುಂತಾದ ಕಡೆಗಳಲ್ಲಿ ಭಯವಿರುವುದು. ನೀರಿನಲ್ಲಿ‌ ಇಳಿಯಲಾರರು. ಅಲ್ಲಿಂದ ದೂರವಿರುತ್ತಾರೆ.

ಚಪಲತೆ :

ಇವರಲ್ಲಿ ಕ್ಷಣಕ್ಕೊಂದು ಆಸೆಗಳು ಹುಟ್ಟಿಕೊಳ್ಳುತ್ತದೆ. ಒಂದು ಕಾರ್ಯವನ್ನು ಹೇಗೆಲ್ಲ ಮಾಡಬಹುದು ಎನ್ನುವುದನ್ನು ನೋಡುತ್ತಲೇ ಇರುತ್ತಾರೆ. ‌ಎಲ್ಲವುದನ್ನು ಪಡೆಯುವ ಆಸೆ ಇರುವುದು.

ಪ್ರಾಣಿಪ್ರಿಯ :

ಪ್ರಾಣಿಗಳನ್ನು ಕಂಡರೆ ಪ್ರೀತಿ ಜಾಸ್ತಿ. ‌ಪ್ರಾಣಿಗಳನ್ನು ಸಾಕುತ್ತಾರೆ ಮತ್ತು ಯಾವುದೇ ಪ್ರಾಣಿಗಾದರೂ ತನ್ನ ಆಹಾರವನ್ನು ಕೊಡುತ್ತಾರೆ. ಪ್ರಾಣಿಗಳು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಭಾದ್ರಪದ ಪಕ್ಷ ಮಾಸದಲ್ಲಿ ಇಂದಿರಾ ಏಕಾದಶಿ ಯಾವಾಗ? ಇಂದಿರಾ ಏಕಾದಶಿ ವ್ರತದ ಕರುಣಾಜನಕ ಕಥೆ ತಿಳಿಯಿರಿ

ದೃಢ ನಿಶ್ಚಯ :

ಒಂದು ಕಾರ್ಯವನ್ನು ಮಾಡಬೇಕು ಎಂದುಕೊಂಡರೆ ಅದನ್ನು ಮತ್ತೆ ಮತ್ತೆ ಬದಲಾವಣೆ ಮಾಡಲಾರರು. ಮನಸ್ಸಿಗೆ ಬರುವುದು ನಿಧಾನವಾದರೂ ಬಂದ ಅನಂತರ ಅದು ದೃಢವೇ ಆಗುವುದು.

ಸತ್ಯವಾದ ಮಾತು :

ಸತ್ಯವನ್ನೇ ಹೇಳುವುದು ಇವರ ಸ್ವಭಾವವಾದರೂ ಕೆಲವೊಮ್ಮೆ ಮುಚ್ಚಿಟ್ಟ ಸತ್ಯವೂ ಗೊತ್ತಾಗುವುದು. ಅಪ್ರಿಯವಾದ ಸತ್ಯವನ್ನು ಹೇಳಲು ಇಷ್ಟವಾಗದು.

ದಕ್ಷ :

ಯಾವ ಕೆಲಸವನ್ನು ಕೊಟ್ಟರೂ ಅದನ್ನು ಸರಿಯಾಗಿ ನಿರ್ವಹಿಸುವ ಕೌಶಲ, ಬುದ್ಧಿಶಕ್ತಿ ಇರುವುದು. ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಿಕೊಂಡು ಹೋಗುವರು.

ಇವು ಭರಣೀ ನಕ್ಷತ್ರದಲ್ಲಿ ಜನಿಸಿದವರ ಗುಣಗಳು. ಎಲ್ಲವೂ ಎಲ್ಲರಲ್ಲಿಯೂ ಸಂಪೂರ್ಣವಾಗಿ ಇರದೇ ಇದ್ದರೂ ಕೆಲವು ಅಂಶಗಳನ್ನು ಕಾಣಬಹುದು.

-ಲೋಹಿತ ಹೆಬ್ಬಾರ್ – 8762924271

ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?