AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology Insights: ನಿಮ್ಮ ಬರ್ತ್ ಡೇ ಯಾವಾಗ? ನೀವು ಗಮನಿಸಲೇ ಬೇಕಾದ ಜ್ಯೋತಿಷ್ಯ ವಿಚಾರಗಳಿವು

ಒಬ್ಬ ವ್ಯಕ್ತಿ ಹುಟ್ಟಿದ ಸಮಯದಲ್ಲಿ ಇದ್ದಂಥ ಆ ನಿರ್ದಿಷ್ಟ ವಾರ, ತಿಥಿ ಮತ್ತು ನಕ್ಷತ್ರವು ಅಂದರೆ ಅದೇ ವಾರ, ತಿಥಿ ಮತ್ತು ನಕ್ಷತ್ರವು ಆ ವ್ಯಕ್ತಿಯ ಬದುಕಿನಲ್ಲಿ ಪುನರಾವರ್ತನೆ ಆದಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇನ್ನು ಈ ರೀತಿಯ ಯೋಗದ ಜೊತೆಗೆ ಶನಿ ಗ್ರಹದ ಸ್ಥಿತಿಯನ್ನೂ ಪರಿಶೀಲಿಸಬೇಕು. ಒಂದು ವೇಳೆ ಆ ಗ್ರಹದ ಸ್ಥಿತಿಯೂ ಅಪಾಯಕಾರಿಯಾದಾಗ ಜ್ಯೋತಿಷಿಗಳನ್ನು ಸಂಪರ್ಕಿಸುವುದು ಅಗತ್ಯ.

Astrology Insights: ನಿಮ್ಮ ಬರ್ತ್ ಡೇ ಯಾವಾಗ? ನೀವು ಗಮನಿಸಲೇ ಬೇಕಾದ ಜ್ಯೋತಿಷ್ಯ ವಿಚಾರಗಳಿವು
Birthdate Astrology
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Sep 16, 2025 | 3:04 PM

Share

ಜ್ಯೋತಿಷ್ಯದ ವಿಚಾರದಲ್ಲಿ ಆಳ ಹೊಕ್ಕಂತೆಲ್ಲ ಅಚ್ಚರಿ, ಬೆರಗು ಹಾಗೂ ಅದೇ ಸಮಯಕ್ಕೆ ಗಾಬರಿ ಹುಟ್ಟಿಸುವಂಥ ಹೊಸ ಹೊಸ ಮಾಹಿತಿಗಳು ಎದುರುಗೊಳ್ಳುತ್ತಲೇ ಇರುತ್ತವೆ. ಈ ದಿನದ ವಿಷಯ ವಸ್ತು ಹಾಗಿದೆ. ಇದನ್ನು ದಯವಿಟ್ಟು ಮುನ್ನೆಚ್ಚರಿಕೆ ಅಂತ ತೆಗೆದುಕೊಳ್ಳಿ. ಜನ್ಮ ದಿನಾಚರಣೆ ಎಂಬುದು ಸಂತೋಷದ ಹಾಗೂ ಸಂಭ್ರಮದ ವಿಷಯ. ಆದರೆ ಹೀಗೆ ಜನ್ಮ ದಿನ ಆ ವರ್ಷದಲ್ಲಿ ಯಾವ ಮಾಸ, ಪಕ್ಷ, ವಾರ, ನಕ್ಷತ್ರ, ತಿಥಿ, ಯೋಗ, ಕರಣದಂದು ಬಂದಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಲೇಬೇಕು. ಇನ್ನು ಇದರ ಜೊತೆಗೆ ಶನಿ ಗ್ರಹದ ಸ್ಥಿತಿಯು ಜನ್ಮ ಜಾತಕದಲ್ಲಿ ಹೇಗಿದೆ, ಸದ್ಯಕ್ಕೆ ಗೋಚಾರದಲ್ಲಿ ಶನಿ ಗ್ರಹದ ಸಂಚಾರ ಎಲ್ಲಿ ನಡೆಯುತ್ತಿದೆ ಎಂಬ ಅಂಶವನ್ನು ಪರಿಶೀಲಿಸಿಕೊಳ್ಳಬೇಕು. ಯಾಕೆ ಇವಿಷ್ಟನ್ನು ಮಾಡಬೇಕು ಎಂಬುದರ ವಿವರಣೆಯೇ ಈ ಲೇಖನ.

ಪಂಚಾಂಗ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ. ಈ ಐದು ಸೇರಿದ “ಪಂಚ ಅಂಗ” ಪಂಚಾಂಗವಾಯಿತು. ಒಬ್ಬ ವ್ಯಕ್ತಿಯು ಹುಟ್ಟಿದ ದಿನದಂದು ಯಾವ ತಿಥಿ (ಪಾಡ್ಯ, ಬಿದಿಗೆ, ತದಿಗೆ ಹೀಗೆ), ವಾರ (ಸೋಮ, ಮಂಗಳ, ಬುಧ), ನಕ್ಷತ್ರ, ಯೋಗ ಹಾಗೂ ಕರಣ ಇತ್ತು ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಪ್ರತಿ ವರ್ಷ ಜನ್ಮ ದಿನಾಂಕದಂದು ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳುವ ವೇಳೆ ಆ ದಿನ ಯಾವುದು ಬಂದಿವೆ ನೋಡಿಕೊಳ್ಳಬೇಕು. ಒಬ್ಬ ವ್ಯಕ್ತಿಯ ಹುಟ್ಟಿದ್ದ ದಿನದಂದು (ಜನನ ಕಾಲದಲ್ಲಿ) ಬಂದಿದ್ದ ಈ ಪಂಚ ಅಂಗಗಳ ಪೈಕಿಯ ಮೂರು ಅಂಗ (ಅದೇ ತಿಥಿ, ವಾರ, ನಕ್ಷತ್ರ ಅಂದುಕೊಳ್ಳಿ) ಆ ವರ್ಷ ಅದೇ ದಿನ (ದಿನಾಂಕದಂದು) ಪುನರಾವರ್ತನೆ ಆದಲ್ಲಿ ಎಚ್ಚೆತ್ತುಕೊಳ್ಳಬೇಕು. ಇದನ್ನು ಸಂವತ್ಸರ ಹಾಗೂ ಮಾಸದ ಆಧಾರದಲ್ಲಿ ಪರಿಗಣಿಸುವುದು ಸೂಕ್ತ.

ಅದರ ಜೊತೆಗೆ ಜನ್ಮ ರಾಶಿಯಿಂದ ಅಥವಾ ಲಗ್ನದಿಂದ ಅಥವಾ ಜನನ ಕಾಲದಲ್ಲಿ ಶನಿ ಗ್ರಹ ಎಲ್ಲಿ ಸ್ಥಿತವಾಗಿತ್ತೋ ಆ ಸ್ಥಾನದಿಂದ ಎಂಟನೇ ಮನೆಯಲ್ಲಿ ಗೋಚಾರದಲ್ಲಿ ಶನಿ ಗ್ರಹ ಇದ್ದಲ್ಲಿ ಅಪಾಯಕಾರಿ ಎಂದು ಪರಿಗಣಿಸಬೇಕು. ಈ ಗ್ರಹ ಸ್ಥಿತಿಯು ಆರೋಗ್ಯ- ಆಯುಷ್ಯದ ಮೇಲೆ ಮುಖ್ಯವಾಗಿ ಪರಿಣಾಮವನ್ನು ಬೀರುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯ ಜನ್ಮ ದಿನದಂದು ಇದ್ದ ಆ “ಪಂಚಾಂಗ”ದ ಪೈಕಿ ಮೂರು ಪುನರಾವರ್ತನೆ ಆಗಿದ್ದಲ್ಲಿ ಮೃತ್ಯುಂಜಯ ಹೋಮ ಮಾಡಿಕೊಳ್ಳುವುದು ಕ್ಷೇಮ. ಅದಕ್ಕೂ ಮುನ್ನ ಒಮ್ಮೆ ಆ ವ್ಯಕ್ತಿಯ ನವಾಂಶ ಕುಂಡಲಿಯನ್ನು ಒಮ್ಮೆ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳಬೇಕು.

ಇದನ್ನೂ ಓದಿ: ಹಳೆಯದ್ದು​​​ ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ಉದಾಹರಣೆಗೆ: ಈ ದಿನ ಸೆಪ್ಟೆಂಬರ್ 14ನೇ ತಾರೀಕು 2025ನೇ ಇಸವಿ. ಭಾದ್ರಪದ ಮಾಸ, ಕೃಷ್ಣ ಪಕ್ಷದ, ಭಾನುವಾರ, ಅಷ್ಟಮಿ, ರೋಹಿಣಿ ನಕ್ಷತ್ರ, ವಜ್ರಯೋಗದ ಮೇಲೆ ಸಿದ್ಧಿ ಯೋಗ ಹಾಗೂ ಬಾಲ ಕರಣ ಇದೆ. ಈ ದಿನದಂದು ಒಂದು ಮಗು ಹುಟ್ಟುತ್ತದೆ. ಮುಂದೆ ಅದರ ಜನ್ಮ ದಿನ ಅಂದಾಗ ಭಾದ್ರಪದ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಎಂದಾಗುತ್ತದೆ. ಮುಂಬರುವ ವರ್ಷಗಳಲ್ಲಿ ಒಮ್ಮೆ ಭಾದ್ರಪದ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಭಾನುವಾರವೂ ಬಂದು, ರೋಹಿಣಿ ನಕ್ಷತ್ರವೂ ಇದೆ ಎಂದಾಗ ಎಚ್ಚೆತ್ತುಕೊಂಡು, ಶನಿ ಗ್ರಹದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು.

ಸದ್ಯಕ್ಕೆ ಶನಿಯು ಮೀನ ರಾಶಿಯಲ್ಲಿದೆ. ರೋಹಿಣಿ ನಕ್ಷತ್ರವು ವೃಷಭ ರಾಶಿಯಾಗುತ್ತದೆ, ಅದು ಚಂದ್ರ ರಾಶಿ ಎನಿಸಿಕೊಳ್ಳುತ್ತದೆ. ಜನ್ಮ ಕಾಲದಲ್ಲಿ ಯಾವ ಲಗ್ನ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಮೀನ ರಾಶಿಯಲ್ಲಿನ ಇರುವ ಶನಿಗೆ ಎಂಟನೇ ಸ್ಥಾನ ಅಂದರೆ ತುಲಾ ರಾಶಿಯಲ್ಲಿ ಶನಿ ಸಂಚಾರ ಕಾಲ, ಇನ್ನು ಜನ್ಮ ರಾಶಿ ವೃಷಭಕ್ಕೆ ಎಂಟನೇ ಮನೆ ಅಂದರೆ ಧನು ರಾಶಿಯಲ್ಲಿ ಶನಿ ಸಂಚಾರ ಕಾಲ. ಒಂದು ವೇಳೆ ಲಗ್ನ ಕನ್ಯಾ ಅಂತಾದಲ್ಲಿ ಮೇಷ ರಾಶಿಯಲ್ಲಿ ಶನಿ ಸಂಚಾರ ಕಾಲವೂ ಆಗಿ, ಜನ್ಮ ಸಮಯದಲ್ಲಿನ ಪಂಚಾಂಗದ ಪೈಕಿ ಮೂರು ಪುನರಾವರ್ತನೆ ಆದಲ್ಲಿ ಕೂಡಲೇ ಜ್ಯೋತಿಷಿಗಳನ್ನು ಸಂಪರ್ಕಿಸಿ, ಅಗತ್ಯವಾದ ಶಾಂತಿ ಪೂಜೆ ಪುನಸ್ಕಾರಗಳನ್ನು ಮಾಡಿಸಿಕೊಳ್ಳುವುದು ಕ್ಷೇಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ