ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ನಿಮ್ಮ ಜಾತಕದಲ್ಲಿ ಚಂದ್ರನು ಎಲ್ಲಿದ್ದಾನೆ ಪರಿಶೀಲಿಸಿ

ಚಂದ್ರನಿಂದಲೇ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎನ್ನುವುದು ಹಿರಿಯರ ಮಾತು. ಬಂಧನಕ್ಕೂ ಬಿಡುಗಡೆಗೂ ಮನಸ್ಸೇ ಮೂಲಕಾರಣ. ಇತರಿಂದಲೇ ಜಾತಕರ ರಾಶಿ ಹಾಗೂ ನಕ್ಷತ್ರವನ್ನು ಕಂಡುಕೊಳ್ಳುವುದು.

ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ನಿಮ್ಮ ಜಾತಕದಲ್ಲಿ ಚಂದ್ರನು ಎಲ್ಲಿದ್ದಾನೆ ಪರಿಶೀಲಿಸಿ
ಚಂದ್ರ
Follow us
| Updated By: ವಿವೇಕ ಬಿರಾದಾರ

Updated on: Jul 10, 2024 | 6:38 AM

ಚಂದ್ರ ನವಗ್ರಹಗಳಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವ. ಈತನನ್ನು ಮನಃಕಾರಕ ಗ್ರಹ ಎಂಬುದಾಗಿ ತಿಳಿದಿದ್ದಾರೆ. ಚಂದ್ರಮಾ ಮನಸೋ ಜಾತಃ ಎಂದೂ ಹೇಳುತ್ತವೆ. ಬ್ರಹ್ಮನ ಮನಸ್ಸಿನಿಂದ ಜನಿಸಿದವ ಚಂದ್ರ. ಹಾಗಾಗಿ ಆತ ಮನಸ್ಸನ್ನು ಉಂಟುಮಾಡುವವನು. ಈ ಚಂದ್ರನಿಂದಲೇ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎನ್ನುವುದು ಹಿರಿಯರ ಮಾತು. ಬಂಧನಕ್ಕೂ ಬಿಡುಗಡೆಗೂ ಮನಸ್ಸೇ ಮೂಲಕಾರಣ. ಇತರಿಂದಲೇ ಜಾತಕರ ರಾಶಿ ಹಾಗೂ ನಕ್ಷತ್ರವನ್ನು ಕಂಡುಕೊಳ್ಳುವುದು.

ಚಂದ್ರನು ಎರಡುವರೆ ದಿನಗಳಷ್ಟು ಕಾಲ ಒಂದು ರಾಶಿಯಲ್ಲಿ ಇದ್ದು ಆನಂತರ ಬದಲಾಗುತ್ತಾನೆ. ಅಂದರೆ, ಮೂವತ್ತು ದಿನಗಳನ್ನು ಸೂರ್ಯ ಸುತ್ತ ಸುತ್ತಲು ತೆಗೆದುಕೊಳ್ಳುವನು. ನವಗ್ರಹರಲ್ಲಿ ಅತ್ಯಂತ ವೇಗವಾಗಿ ಚಲಿಸುವ ಗ್ರಹವಿದು. ಅದ್ದರಿಂದ ತಿಂಗಳಲ್ಲಿ ಎಲ್ಲ ರಾಶಿಯವರಿಗೂ ಮಾನಸಿಕ ವ್ಯತ್ಯಾಸಗಳು ಆಗಲು ಕಾರಣ.

ಚಂದ್ರನು ಮೇಷದಲ್ಲಿ ಇದ್ದರೆ ಏನು ಮಾಡುತ್ತಾನೆ. ಅಲ್ಲಿಯೂ ಶತ್ರುಗಳು ಮಿತ್ರರು ಇದ್ದಾರೆ. ಅಷ್ಟುಮಾತ್ರವಲ್ಲ, ಅಂಶಗಳ ಆಧಾರದ ಮೇಲೆ ಚಂದ್ರನ ಫಲವೂ ನಿರ್ಧಾರವಾಗಲಿದೆ. ಕಣ್ಣಿನ ಸುತ್ತ ಕೆಂಬಣ್ಣದ ವರ್ತುಲ, ಬಿಸಿಯಾದ ಆಹಾರವನ್ನು ಸೇವಿಸುವವ. ತರಕಾರಿಗಳನ್ನು ಹೆಚ್ಚು ಸೇವಿಸುವವನಾಗುತ್ತಾನೆ. ಆಹಾರ ಸೇವನೆಯಲ್ಲಿ ಮಿತಿ ಇರಲಿದೆ. ಇವರನ್ನು ಸಂತೋಷ ಪಡಿಸುವುದು ಸುಲಭ. ಯಾವ ಮನಸ್ತಾಪವನ್ನೂ ದೀರ್ಘಾಕಾಲದವರೆಗೆ ಇಟ್ಟುಕೊಳ್ಳುವ ಮನಃಸ್ಥಿತಿ ಇರದು. ಹಾಗಾಗಿ ಬೇಗನೆ ಸಂತೋಷಗೊಳ್ಳುವರು. ಸದಾ ಸಂಚಾರದಲ್ಲಿ ಇರುವವ. ಹೆಚ್ಚು ಆಸೆಯುಳ್ಳವನಾಗುವನು. ತೊಡೆಯ ಭಾಗವು ದುರ್ಬಲವಾಗಿರಲಿದೆ. ಸ್ಥಿರವಾದ ಸಂಪತ್ತು ಉಳ್ಳವನು. ಸಾಹಸ, ಧೈರ್ಯದಿಂದ ಕಾರ್ಯಗಳಿಗೆ ಮುನ್ನುಗ್ಗುವವನು. ಸ್ತ್ರೀಯರಿಗೆ ಪ್ರಿಯನು ಈತ. ಸೇವಾ ಕ್ಷೇತ್ರದಲ್ಲಿ ಮಾಡಲು ಆಸಕ್ತಿ ಉಳ್ಳವನು. ಹಾಳಾದ ಉಗುರುಗಳುಳ್ಳವನು. ತಲೆಯಲ್ಲಿ ಗಾಯದ ಗುರುತು, ಮಾನವನ್ನು ಉಳಿಸಿಕೊಳ್ಳುವರು. ಸಹೋದರರಲ್ಲಿ ಅಣ್ಣನಾಗಿರುವನು. ನೀರು ಕಂಡರೆ ಭಯ. ಎಲ್ಲವನ್ನೂ ಪಡೆಯುವ ಹಂಬಲ. ಕೈಯಲ್ಲಿ ಗುರುತು.

ಇವಿಷ್ಟು ಮೇಷ ರಾಶಿಯಲ್ಲಿ ಚಂದ್ರನಿದ್ದರೆ ಇರುವ ಲಕ್ಷಣ. ಇವುಗಳಲ್ಲಿ ಕೆಲವು ಜನ್ಮದಿಂದಲೇ ಇದ್ದರೂ ಕೆಲವು ಚಂದ್ರನು ಮೇಷದಲ್ಲಿ ಸಂಚರಿಸುವ ಕಾಲದಲ್ಲಿಯೂ ಇರಲಿದೆ. ಅಶ್ವಿನೀ ಮತ್ತು ಭರಣೀ ನಕ್ಷತ್ರಗಳಿಗೆ ಇದರಲ್ಲಿನ ಹೆಚ್ಚಿನ ಅಂಶಗಳು ಅನ್ವಯವಾಗುತ್ತವೆ.

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್