Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
|

Updated on: Jun 02, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 1 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಕಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 10:54 ರಿಂದ 12:30ರ ವರೆಗೆ, ಯಮಘಂಡ ಕಾಲ 03:44 ರಿಂದ 05:20ರ ವರೆಗೆ, ಗುಳಿಕ ಕಾಲ 07:20 ರಿಂದ 09:17ರ ವರೆಗೆ.

ಧನು: ಧನಾಗಮನದ ವಿಚಾರದಲ್ಲಿ ನೀವು ನಿರುಪಾಯರು. ಎಲ್ಲರನ್ನೂ ನಿಷ್ಕಾರಣವಾಗಿ ತೆಗಳುವುದು ಸರಿಯಲ್ಲ. ಮಾತುಗಳನ್ನು ವಿವೇಚನೆ ಇಲ್ಲದೇ ಮಾತನಾಡುವುದು ಬೇಡ. ನೀವಿಂದು ಪ್ರೀತಿಯ ಪಾಶದಲ್ಲಿ ಬೀಳಬಹುದು. ಮಾನಸಿಕವಾದ ನೋವನ್ನು ಹೊರಹಾಕಲು ಪ್ರಯತ್ನಿಸುವಿರಿ. ಬರಬೇಕಾದ ಸಂಪತ್ತಿನ ನಿರೀಕ್ಷೆಯಲ್ಲಿ ಇರುವಿರಿ. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಬಿಡಬೇಕಾದೀತು. ಶಾಂತಯುವಾಗಿ ವ್ಯವಹರಿಸುವುದು ಉಚಿತ. ನಿಮ್ಮ ಮೇಲಿನ‌ ನಂಬಿಕೆಯನ್ನು ಘಾಸಿ ಮಾಡಿಕೊಳ್ಳಬೇಡಿ. ದೈವದ ಸ್ಮರಣೆಯನ್ನು ನೀವು ಅದಷ್ಟು ಮಾಡುವುದು ಒಳ್ಳೆಯದು.

ಮಕರ: ಪರರ ನೋವಿಗೆ ಸಂದಿಸುವುದು ನಿನಗೆ ಸ್ವಭಾವತಃ ಇದ್ದರೂ ಇಂದು ಅದನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸನ್ನು ದುರ್ಬಲವಾಗಲು ಬಿಡಬೇಡಿ. ಏನಾದರೊಂದು ಕೆಲಸದಲ್ಲಿ ಇರುವಂತೆ ನೋಡಿಕೊಳ್ಳಿ. ಇಂದು ನಿಮ್ಮ ಸಂದರ್ಭೋಜಿತ ಉತ್ತರಗಳು ನಿಮ್ಮ ಗೌರವವನ್ನು ಹೆಚ್ಚಿಸುವುದು. ಹಿರಿಯರು ನಿಮ್ಮನ್ನು ಪ್ರಶಂಸಿಸಬಹುದು. ದೂರವಾಗಿದ್ದ ಸಂಬಂಧಗಳು ಹತ್ತಿರವಾಗಬಹುದು. ಶೀಘ್ರವಾಗಿ ಕೋಪಗೊಳ್ಳುವ ಸಾಧ್ಯತೆ ಇದ್ದರೂ ಮನಸ್ಸನ್ನು ನಿಯಂತ್ರಣವನ್ನು ಸಾಧಿಸಲು ನೀವು ಯಶಸ್ವಿಯಾಗಿದ್ದೀರಿ.

ಕುಂಭ: ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಂಡು ಕೆಲಸದ ಸಮಯವನ್ನು ವ್ಯರ್ಥಮಾಡಿಕೊಳ್ಳಬಹುದು. ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಇರುವವರಿಗೆ ಕಿಂಚಿತ್ ಸಹಾಯವನ್ನು ಮಾಡುವಿರಿ. ಕೆಲಸವಾಗಲು ಉನ್ನತ ಅಧಿಕಾರಿಗಳನ್ನು ಹೊಗಳಬೇಕಾದೀತು. ಮಕ್ಕಳು ನಿಮ್ಮನ್ನು ಹೆಚ್ಚು ಇಷ್ಟಪಡುವರು. ಅವರಿಗೆ ಬೇಕಾದಹಾಗೆ ನಡೆದುಕೊಳ್ಳಿ. ಒಳ್ಳೆಯ ವಿಚಾರಗಳು ನಿಮಗೆ ಅಸಹ್ಯವಾಗಬಹುದು. ಅನುಕೂಲವನ್ನು ಸೃಷ್ಟಿಸಿಕೊಳ್ಳಲು ನೀವು ಸಮಸರ್ಥರು. ಹಿರಿಯರಿಂದ ಅಪಮಾನವಾಗುವ ಸಂಭವವಿದೆ. ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.

ಮೀನ: ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರೆ ಕುಟುಂಬ ಸಮಸ್ಯೆಯಿಂದಾಗಿ ಉದ್ಯೋಗದ ಕಡೆಗೆ ಗಮನ ಕೊಡಲಾಗದು. ನಿಮ್ಮ ಸಮಸ್ಯೆಯನ್ನು ಶಾಂತಚಿತ್ತರಾಗಿ ಬಗೆಹರುಸಿಕೊಳ್ಳುವುದು ಉತ್ತಮ. ವಿರೋಧದ ನಡುವೆಯೂ ನಿಮ್ಮ ಹಠವನ್ನೇ ಸಾಧಿಸುವಿರಿ. ಮೌಖಕವಾಗಿ ಹೇಳಿದ್ದರಿಂದ ನಿಮ್ಮ ಯಾವ ಕೆಲಸವೂ ಆಗದು. ಲಿಖಿತರೂಪದಲ್ಲಿ ಬರಲಿ. ನಿಮ್ಮಲ್ಲಿರುವ ಭಯವನ್ನು ಮತ್ತೊಬ್ಬರಿಗೆ ಹೇಳಿ ಧೈರ್ಯವನ್ನು ತಂದುಕೊಳ್ಳುವಿರಿ. ಸಮರಕ್ಕೆ ಸಮಾನವಾಗಿ ಕೆಲಸವನ್ನು ಇಂದು ಮಾಡುವ ಉತ್ಸಾಹ ನಿಮ್ಮಲ್ಲಿರಲಿದೆ.

ಲೋಹಿತಶರ್ಮಾ – 8762924271 (what’s app only)

ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ