AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಕದಲ್ಲಿ ಅಪಾಯಕಾರಿ ರಾಹು, ಕೇತು ದೋಷ: 18 ಶನಿವಾರಗಳ ಕಾಲ ಈ ಪರಿಹಾರ ಮಾಡಿನೋಡಿ.. ಕಷ್ಟಗಳು ದೂರವಾಗುತ್ತವೆ

Rahu Ketu negative effects: ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುಗಳ ಸಂಯೋಜನೆಯು ಯಾವುದೇ ಜಾತಕದಲ್ಲಿ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಸಂಯೋಜನೆಯು ವ್ಯಕ್ತಿಯ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಬಲ್ಲದು. ರಾಹು ಮತ್ತು ಕೇತುಗಳ ಸಂಯೋಗದಿಂದ ಮನುಷ್ಯನ ಜೀವನದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

ಜಾತಕದಲ್ಲಿ ಅಪಾಯಕಾರಿ ರಾಹು, ಕೇತು ದೋಷ: 18 ಶನಿವಾರಗಳ ಕಾಲ ಈ ಪರಿಹಾರ ಮಾಡಿನೋಡಿ.. ಕಷ್ಟಗಳು ದೂರವಾಗುತ್ತವೆ
ಜಾತಕದಲ್ಲಿ ಅಪಾಯಕಾರಿ ರಾಹು, ಕೇತು ದೋಷ
ಸಾಧು ಶ್ರೀನಾಥ್​
|

Updated on: Sep 29, 2024 | 3:04 AM

Share

ಕೆಲವು ಜನರು ತಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳನ್ನು ಎದುರಿಸುತ್ತಾರೆ… ಎಲ್ಲವೂ ಚೆನ್ನಾಗಿದೆ, ಆರಾಮವಾಗಿದೆ ಮತ್ತು ಶಾಂತವಾಗಿದೆ ಎಂದು ಕೊಂಡಿದ್ದಾಗಲೇ ಅವರು ಇದ್ದಕ್ಕಿದ್ದಂತೆ ಸಮಸ್ಯೆಗಳನ್ನು ಎದುರಿಸುತ್ತಾರೆ. ತಮ್ಮ ಜೀವನದಲ್ಲಿ ನಿಜವಾಗಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲು, ಅಡೆತಡೆಗಳ ಸರಣಿಯು ಒಂದರ ನಂತರ ಒಂದರಂತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದಾಗ್ಯೂ, ಅಂತಹ ತೊಂದರೆಗಳಲ್ಲಿ ರಾಹು ಮತ್ತು ಕೇತು ಪಾತ್ರವನ್ನು ವಹಿಸಬಹುದು. ಒಂಬತ್ತು ಗ್ರಹಗಳ ಪೈಕಿ ರಾಹು ಮತ್ತು ಕೇತುಗಳು ನೆರಳು ಗ್ರಹಗಳು ಎಂಬ ನಂಬಿಕೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳು ತಪ್ಪು ಸ್ಥಾನಗಳಿಗೆ ಬಂದರೆ, ಆ ವ್ಯಕ್ತಿಯು ತುಂಬಾ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಹೀಗಿರುವಾಗ ಶನಿವಾರದಂದು ರಾಹು ಮತ್ತು ಕೇತುರನ್ನು ಒಲಿಸಿಕೊಳ್ಳಲು ಕೆಲ ಉಪಾಯಗಳಿವೆ ಎನ್ನುತ್ತಿದ್ದಾರೆ ಜ್ಯೋತಿಷಿಗಳು. ಇವುಗಳನ್ನು ಪಾಲಿಸುವುದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.

ರಾಹು ಮತ್ತು ಕೇತು ಯಾರು ಅಂದರೆ ರಾಹು ಮತ್ತು ಕೇತುಗಳ ಕಥೆಯು ಸಾಗರದ ಮಂಥನಕ್ಕೆ ಸಂಬಂಧಿಸಿದೆ. ಸಾಗರದ ಮಂಥನದ ಸಮಯದಲ್ಲಿ, ಸ್ವರಭಾನು ಎಂಬ ರಾಕ್ಷಸನು ಅಮೃತವನ್ನು ಪಡೆಯಲು ದೇವತೆಗಳು ಕುಳಿತುಕೊಳುವ ಸಾಲಿನಲ್ಲಿ ಸೂರ್ಯ ಮತ್ತು ಚಂದ್ರರ ನಡುವೆ ಕುಳಿತುಕೊಂಡನು. ಈ ವಿಷಯವು ಸೂರ್ಯ, ಚಂದ್ರ ಮತ್ತು ಮೋಹಿನಿ ದೇವಿಯ ರೂಪದಲ್ಲಿದ್ದ ವಿಷ್ಣುವಿಗೆ ತಿಳಿಯಿತು. ಆಗ ಶ್ರೀ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರಭಾನುವಿನ ಮೇಲೆ ದಾಳಿ ಮಾಡಿದನು.

ಆಗ ಸ್ವರಭಾನುವಿನ ತಲೆಯು ದೇಹದಿಂದ ಬೇರ್ಪಟ್ಟಿತು. ಆದರೆ ಗಂಟಲಲ್ಲಿ ಅದಾಗಲೇ ಅಮೃತದ ಹನಿಗಳು ಬಿದ್ದಿದ್ದವು. ಅದರಿಂದ ತಲೆ ಮತ್ತು ದೇಹವು ಪ್ರಾಣದಿಂದ ಉಳಿದುಕೊಂಡಿತು. ಅದರಿಂದ ಸ್ವರಭಾನುವಿನ ತಲೆ ಭಾಗವನ್ನು ರಾಹುವು ಎಂದೂ; ತಲೆಯ ಭಾಗವನ್ನು ಕೇತು ಎಂದೂ ಕರೆಯುತ್ತಾರೆ. ಹಾಗಾಗಿಯೇ ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುಗಳ ಸಂಯೋಜನೆಯು ಯಾವುದೇ ಜಾತಕದಲ್ಲಿ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಸಂಯೋಜನೆಯು ವ್ಯಕ್ತಿಯ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಬಲ್ಲದು. ರಾಹು ಮತ್ತು ಕೇತುಗಳ ಸಂಯೋಗದಿಂದ ಗುರು ಚಂಡ ಯೋಗ, ಕಾಲ ಸರ್ಪ ಯೋಗ, ಕಾಪಟ ಯೋಗ, ಅಂಗಾರಕ ಯೋಗಗಳು ಉಂಟಾಗಿ ಮಾನವ ಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ.

ಇದರಿಂದ ಪಾರಾಗುವುದು ಹೇಗೆ? ಪರಿಹಾರ ಪಡೆಯುವುದು ಹೇಗೆ? ರಾಹು ಮತ್ತು ಕೇತುಗಳ ವಿಘ್ನಗಳನ್ನು ನಿವಾರಿಸಲು ಶನಿವಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ದಿನದಂದು ಶನೀಶ್ವರನನ್ನು ಪೂಜಿಸುವುದರಿಂದ ಆಗುವ ಲಾಭಗಳಷ್ಟೇ ಅಲ್ಲ, ಶಿವನ ಆರಾಧನೆಯಿಂದಲೂ ಲಾಭಗಳಾಗುತ್ತವೆ. ಈ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದು ಸಹ ಪ್ರಯೋಜನಕಾರಿಯಾಗುತ್ತದೆ. ಈ ದಿನ ಎಣ್ಣೆಯನ್ನು ದಾನ ಮಾಡಬಹುದು. ಇದಲ್ಲದೆ ಈ ದಿನದಂದು ಕಪ್ಪು ವಸ್ತ್ರವನ್ನು ದಾನ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ದಿನ ನೆಲ್ಲಿ ಕಾಯಿ, ವಸ್ತ್ರ, ಪಾದರಕ್ಷೆ, ತೆಂಗಿನ ಕಾಯಿಯನ್ನು ಸಹ ದಾನ ಮಾಡಬಹುದು.

ಯಾವ ಮಂತ್ರಗಳು ಪ್ರಯೋಜನಕಾರಿ? ರಾಹು-ಕೇತುಗಳಿಂದ ಪರಿಹಾರಕ್ಕಾಗಿ ಅನೇಕ ಪ್ರಯೋಜನಕಾರಿ ಮಂತ್ರಗಳಿವೆ. ರಾಹು ಸೃಷ್ಟಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಲು 18 ಶನಿವಾರದಂದು “ॐ ಭೂ ಭೂ ಭೂ ಭೂ ಭೂ ಸಃ ರಾಹವೇ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಬಯಸಿದ ಫಲಿತಾಂಶ ಸಿಗುತ್ತದೆ. ಇನ್ನು ಕೇತುವಿನ ಆಶೀರ್ವಾದಕ್ಕಾಗಿ, 18 ಶನಿವಾರಗಳಂದು ‘ಓಂ ಕೇ ಕೇತವೇ ನಮಃ’ ಮಂತ್ರವನ್ನು ಪಠಿಸಿ. ಇದು ಜನ್ಮದಲ್ಲಿ ಕೇತುದಿಂದ ಉಂಟಾಗುವ ವಿಘ್ನಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್